<p><strong>ಸುರಪುರ</strong>: ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿದೆ.</p>.<p>ಸುರಪುರ ಮತಕ್ಷೇತ್ರದಿಂದ ರಾಜಾ ವೆಂಕಟಪ್ಪನಾಯಕ ಅವರೊಬ್ಬರೇ ಅರ್ಜಿ ಸಲ್ಲಿಸಿದ್ದರು. ಮೂರು ಬಾರಿ ಶಾಸಕರಾಗಿರುವ ಅವರು ಕಳೆದ ಬಾರಿ ಪರಾಭವಗೊಂಡಿದ್ದರು.</p>.<p>ತಾಲ್ಲೂಕಿನ ಪೇಠ ಅಮ್ಮಾಪುರ ಮಂಡಲ ಪ್ರಧಾನರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ವೆಂಕಟಪ್ಪನಾಯಕ ಅವರಿಗೆ ಅವರ ತಂದೆ ರಾಜಾ ಕುಮಾರನಾಯಕ ಅವರು ರಾಜಕೀಯ ಗುರು. ಅವರ ನಿಧಾನ ನಂತರ 1994ರಲ್ಲಿ ಬಂಗಾರಪ್ಪ ಅವರ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದರು.</p>.<p>ನಂತರ ಕೆಲಕಾಲ ಜನತಾದಳದೊಂದಿಗೆ ಗುರುತಿಸಿಕೊಂಡಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಸೇರಿದ ಅವರು 1999ರಲ್ಲಿ ಕಾಂಗ್ರೆಸ್ ಶಾಸಕರಾದರು. ಅಲ್ಲಿಂದ ಈವರೆಗೂ ಕಾಂಗ್ರೆಸ್ನ ನಿಷ್ಠೆಯಿಂದ ಇದ್ದಾರೆ. ಅವರು 2004, 2008ರಲ್ಲಿ ಪರಾಭವಗೊಂಡಿದ್ದರು. 2013ರಲ್ಲಿ ರಾಜೂಗೌಡ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು.</p>.<p>2018ರಲ್ಲಿ ರಾಜೂಗೌಡರಿಂದ ಸೋಲು ಕಂಡರು. ಹೀಗೆ ರಾಜಕೀಯ ಏಳುಬೀಳು ಕಂಡಿರುವ ವೆಂಕಟಪ್ಪನಾಯಕ ಅವರಿಗೆ ಕ್ಷೇತ್ರದಲ್ಲಿ ನಂಬಿಕಸ್ತ ಪಡೆಯೇ ಇದೆ. ಕಾರ್ಯಕರ್ತರ ಬೆಂಬಲ, ನಿಷ್ಠೆ ಅವರನ್ನು ಪುಟಿದೇಳಿಸುತ್ತದೆ. ಇದುವರೆಗೆ 6 ಬಾರಿ ಚುನಾವಣೆ ಎದುರಿಸಿರುವ ಅವರು 3 ಬಾರಿ ಗೆದ್ದಿದ್ದರೆ, 3 ಬಾರಿ ಪರಾಭವಗೊಂಡಿದ್ದಾರೆ. ಒಂದು ಬಾರಿ ರಾಯಚೂರು ಲೋಕಸಭಾ ಕ್ಷೇತ್ರಕ್ಕೂ ಸ್ಪರ್ಧಿಸಿ ಸೋತಿದ್ದರು. ಈಗ 7ನೇ ಬಾರಿ ವಿಧಾನಸಭೆಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.</p>.<p>ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಸಿದೆ. ಕಾಂಗ್ರೆಸ್ ಪಕ್ಷಕ್ಕಿರುವ ಓಟ್ ಬ್ಯಾಂಕ್ ಮತ್ತು ಆಡಳಿತ ವಿರೋಧಿ ಮತಗಳ ನೆರವಿನಿಂದ ಜಯಗಳಿಸುವ ಆಕಾಂಕ್ಷೆಯಲ್ಲಿದ್ದಾರೆ.</p>.<p>ಸುದೀರ್ಘ ಕಾಲದಿಂದ ರಾಜಕೀಯದಲ್ಲಿರುವ ವೆಂಕಟಪ್ಪನಾಯಕ ಅವರಿಗೆ ಈಗ 68 ವರ್ಷ. ಇದು ತಮ್ಮ ಕೊನೆ ಚುನಾವಣೆ, ಮುಂದೆ ಸ್ಪರ್ಧಿಸುವುದಿಲ್ಲ ಎಂದು ರಾಜಾ ವೆಂಕಟಪ್ಪನಾಯಕ ನಿರ್ಧಾರ ಮಾಡಿದ್ದಾರೆ ಎನ್ನುತ್ತಾರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ.</p>.<p>ಎಲ್ಲ ಪ್ರಚಾರ ಸಭೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಿರುವ ವೆಂಕಟಪ್ಪನಾಯಕ ಮತ್ತು ಮುಖಂಡರು ಇದನ್ನೇ ರಾಜಕೀಯ ದಾಳವನ್ನಾಗಿ ಉಪಯೋಗಿಸಿ ಭಾವನಾತ್ಮಕವಾಗಿ ಮತ ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬುದು ವಿರೋಧ ಪಕ್ಷದವರ ಆರೋಪವಾಗಿದೆ.</p>.<p><strong>ಕ್ಷೇತ್ರದಲ್ಲಿ ಗೆದ್ದವರು</strong><br />1952; ಕೋಲೂರು ಮಲ್ಲಪ್ಪ<br />1957; ರಾಜಾ ಕುಮಾರನಾಯಕ<br />1962; ರಾಜಾ ಪಿಡ್ಡನಾಯಕ<br />1967; ರಾಜಾ ಪಿಡ್ಡನಾಯಕ<br />1972; ರಾಜಾ ಪಿಡ್ಡನಾಯಕ<br />1978; ರಾಜಾ ಕುಮಾರನಾಯಕ<br />1983; ರಾಜಾ ಮದನಗೋಪಾಲನಾಯಕ<br />1985; ರಾಜಾ ಮದನಗೋಪಾಲನಾಯಕ<br />1989; ರಾಜಾ ಮದನಗೋಪಾಲನಾಯಕ<br />1994; ರಾಜಾ ವೆಂಕಟಪ್ಪನಾಯಕ<br />1999; ರಾಜಾ ವೆಂಕಟಪ್ಪನಾಯಕ<br />2004; ರಾಜೂಗೌಡ<br />2008; ರಾಜೂಗೌಡ<br />2013; ರಾಜಾ ವೆಂಕಟಪ್ಪನಾಯಕ<br />2018; ರಾಜೂಗೌಡ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿದೆ.</p>.<p>ಸುರಪುರ ಮತಕ್ಷೇತ್ರದಿಂದ ರಾಜಾ ವೆಂಕಟಪ್ಪನಾಯಕ ಅವರೊಬ್ಬರೇ ಅರ್ಜಿ ಸಲ್ಲಿಸಿದ್ದರು. ಮೂರು ಬಾರಿ ಶಾಸಕರಾಗಿರುವ ಅವರು ಕಳೆದ ಬಾರಿ ಪರಾಭವಗೊಂಡಿದ್ದರು.</p>.<p>ತಾಲ್ಲೂಕಿನ ಪೇಠ ಅಮ್ಮಾಪುರ ಮಂಡಲ ಪ್ರಧಾನರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ವೆಂಕಟಪ್ಪನಾಯಕ ಅವರಿಗೆ ಅವರ ತಂದೆ ರಾಜಾ ಕುಮಾರನಾಯಕ ಅವರು ರಾಜಕೀಯ ಗುರು. ಅವರ ನಿಧಾನ ನಂತರ 1994ರಲ್ಲಿ ಬಂಗಾರಪ್ಪ ಅವರ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದರು.</p>.<p>ನಂತರ ಕೆಲಕಾಲ ಜನತಾದಳದೊಂದಿಗೆ ಗುರುತಿಸಿಕೊಂಡಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಸೇರಿದ ಅವರು 1999ರಲ್ಲಿ ಕಾಂಗ್ರೆಸ್ ಶಾಸಕರಾದರು. ಅಲ್ಲಿಂದ ಈವರೆಗೂ ಕಾಂಗ್ರೆಸ್ನ ನಿಷ್ಠೆಯಿಂದ ಇದ್ದಾರೆ. ಅವರು 2004, 2008ರಲ್ಲಿ ಪರಾಭವಗೊಂಡಿದ್ದರು. 2013ರಲ್ಲಿ ರಾಜೂಗೌಡ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು.</p>.<p>2018ರಲ್ಲಿ ರಾಜೂಗೌಡರಿಂದ ಸೋಲು ಕಂಡರು. ಹೀಗೆ ರಾಜಕೀಯ ಏಳುಬೀಳು ಕಂಡಿರುವ ವೆಂಕಟಪ್ಪನಾಯಕ ಅವರಿಗೆ ಕ್ಷೇತ್ರದಲ್ಲಿ ನಂಬಿಕಸ್ತ ಪಡೆಯೇ ಇದೆ. ಕಾರ್ಯಕರ್ತರ ಬೆಂಬಲ, ನಿಷ್ಠೆ ಅವರನ್ನು ಪುಟಿದೇಳಿಸುತ್ತದೆ. ಇದುವರೆಗೆ 6 ಬಾರಿ ಚುನಾವಣೆ ಎದುರಿಸಿರುವ ಅವರು 3 ಬಾರಿ ಗೆದ್ದಿದ್ದರೆ, 3 ಬಾರಿ ಪರಾಭವಗೊಂಡಿದ್ದಾರೆ. ಒಂದು ಬಾರಿ ರಾಯಚೂರು ಲೋಕಸಭಾ ಕ್ಷೇತ್ರಕ್ಕೂ ಸ್ಪರ್ಧಿಸಿ ಸೋತಿದ್ದರು. ಈಗ 7ನೇ ಬಾರಿ ವಿಧಾನಸಭೆಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.</p>.<p>ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಸಿದೆ. ಕಾಂಗ್ರೆಸ್ ಪಕ್ಷಕ್ಕಿರುವ ಓಟ್ ಬ್ಯಾಂಕ್ ಮತ್ತು ಆಡಳಿತ ವಿರೋಧಿ ಮತಗಳ ನೆರವಿನಿಂದ ಜಯಗಳಿಸುವ ಆಕಾಂಕ್ಷೆಯಲ್ಲಿದ್ದಾರೆ.</p>.<p>ಸುದೀರ್ಘ ಕಾಲದಿಂದ ರಾಜಕೀಯದಲ್ಲಿರುವ ವೆಂಕಟಪ್ಪನಾಯಕ ಅವರಿಗೆ ಈಗ 68 ವರ್ಷ. ಇದು ತಮ್ಮ ಕೊನೆ ಚುನಾವಣೆ, ಮುಂದೆ ಸ್ಪರ್ಧಿಸುವುದಿಲ್ಲ ಎಂದು ರಾಜಾ ವೆಂಕಟಪ್ಪನಾಯಕ ನಿರ್ಧಾರ ಮಾಡಿದ್ದಾರೆ ಎನ್ನುತ್ತಾರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ.</p>.<p>ಎಲ್ಲ ಪ್ರಚಾರ ಸಭೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಿರುವ ವೆಂಕಟಪ್ಪನಾಯಕ ಮತ್ತು ಮುಖಂಡರು ಇದನ್ನೇ ರಾಜಕೀಯ ದಾಳವನ್ನಾಗಿ ಉಪಯೋಗಿಸಿ ಭಾವನಾತ್ಮಕವಾಗಿ ಮತ ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬುದು ವಿರೋಧ ಪಕ್ಷದವರ ಆರೋಪವಾಗಿದೆ.</p>.<p><strong>ಕ್ಷೇತ್ರದಲ್ಲಿ ಗೆದ್ದವರು</strong><br />1952; ಕೋಲೂರು ಮಲ್ಲಪ್ಪ<br />1957; ರಾಜಾ ಕುಮಾರನಾಯಕ<br />1962; ರಾಜಾ ಪಿಡ್ಡನಾಯಕ<br />1967; ರಾಜಾ ಪಿಡ್ಡನಾಯಕ<br />1972; ರಾಜಾ ಪಿಡ್ಡನಾಯಕ<br />1978; ರಾಜಾ ಕುಮಾರನಾಯಕ<br />1983; ರಾಜಾ ಮದನಗೋಪಾಲನಾಯಕ<br />1985; ರಾಜಾ ಮದನಗೋಪಾಲನಾಯಕ<br />1989; ರಾಜಾ ಮದನಗೋಪಾಲನಾಯಕ<br />1994; ರಾಜಾ ವೆಂಕಟಪ್ಪನಾಯಕ<br />1999; ರಾಜಾ ವೆಂಕಟಪ್ಪನಾಯಕ<br />2004; ರಾಜೂಗೌಡ<br />2008; ರಾಜೂಗೌಡ<br />2013; ರಾಜಾ ವೆಂಕಟಪ್ಪನಾಯಕ<br />2018; ರಾಜೂಗೌಡ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>