<p>ಪ್ರಜಾವಾಣಿ ವಾರ್ತೆ</p>.<p><strong>ಗುರುಮಠಕಲ್</strong>: ಹತ್ತಿರದ ಬೋರಬಂಡಾ ಗ್ರಾಮದ ಲಕ್ಷ್ಮೀ ತಿಮ್ಮಪ್ಪ ದೇವರ 16ನೇ ವಾರ್ಷಿಕ ರಥೋತ್ಸವ ಬುಧವಾರ ಸಂಪನ್ನಗೊಂಡಿತು.</p>.<p>ಮಂಗಳವಾರ ಬೆಳಿಗ್ಗೆ ವಿಶೇಷ ಅಭಿಷೇಕ ಮೂಲಕ ಜಾತ್ರಾ ಉತ್ಸವಕ್ಕೆ ಚಾಲನೆ ನೀಡಲಾಯಿತು. ಅಲಂಕಾರ ಸೇವೆ, ಪುರಿಷ ಸೂಕ್ತ ಮತ್ತು ಶ್ರೀಸೂಕ್ತ ಹೋಮಗಳು, ಮಂಗಳಾರತಿ, ಪಲ್ಲಕಿ ಸೇವೆ, ಕಾರ್ತಿಕ ದೀಪೋತ್ಸವ, ಕೀರ್ತನಾ ಸೇವೆಗಳು ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳು ಜರುಗಿದವು.</p>.<p>ಮಂಗಳವಾರ ರಾತ್ರಿ ಗಾಯಕ ಹಣಮಂತ ಲಮಾಣಿ ಅವರಿಂದ ಭಜನೆ ಕಾರ್ಯಕ್ರಮ ಜರುಗಿತು.</p>.<p>ಬುಧವಾರ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ರಥಾಂಗ ಹೋಮ, ಕಲ್ಯಾಣೋತ್ಸವದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ, ವಿಶೇಷ ಪೂಜೆಯ ನಂತರ ರಥೋತ್ಸವ ಜರುಗಿತು.</p>.<p>‘ಗೋವಿಂದಾ ಗೋವಿಂದ’ ಘೋಷಗಳೊಂದಿಗೆ ತೊಟ್ಟಿಲ ಸೇವೆ, ಮಹಾಮಂಗಳಾರತಿಯ ನಂತರ ಭಕ್ತರಿಗೆ ಪ್ರಸಾದ ವಿತರಣೆ ಜರುಗಿತು.</p>.<p>ಸಂಜೆಯಿಂದ ಗ್ರಾಮೀಣ ಭಾಗದ ಕೈಕುಸ್ತಿ ಪಂದ್ಯ ಆಯೋಜಿಸಲಾಗಿತ್ತು.</p>.<p>ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ದರ್ಶನ ಪಡೆದರು. ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಮಣಿಕಂಠ ರಾಠೋಡ, ಅಯ್ಯಪ್ಪ ರಾಠೋಡ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ಗುರುಮಠಕಲ್</strong>: ಹತ್ತಿರದ ಬೋರಬಂಡಾ ಗ್ರಾಮದ ಲಕ್ಷ್ಮೀ ತಿಮ್ಮಪ್ಪ ದೇವರ 16ನೇ ವಾರ್ಷಿಕ ರಥೋತ್ಸವ ಬುಧವಾರ ಸಂಪನ್ನಗೊಂಡಿತು.</p>.<p>ಮಂಗಳವಾರ ಬೆಳಿಗ್ಗೆ ವಿಶೇಷ ಅಭಿಷೇಕ ಮೂಲಕ ಜಾತ್ರಾ ಉತ್ಸವಕ್ಕೆ ಚಾಲನೆ ನೀಡಲಾಯಿತು. ಅಲಂಕಾರ ಸೇವೆ, ಪುರಿಷ ಸೂಕ್ತ ಮತ್ತು ಶ್ರೀಸೂಕ್ತ ಹೋಮಗಳು, ಮಂಗಳಾರತಿ, ಪಲ್ಲಕಿ ಸೇವೆ, ಕಾರ್ತಿಕ ದೀಪೋತ್ಸವ, ಕೀರ್ತನಾ ಸೇವೆಗಳು ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳು ಜರುಗಿದವು.</p>.<p>ಮಂಗಳವಾರ ರಾತ್ರಿ ಗಾಯಕ ಹಣಮಂತ ಲಮಾಣಿ ಅವರಿಂದ ಭಜನೆ ಕಾರ್ಯಕ್ರಮ ಜರುಗಿತು.</p>.<p>ಬುಧವಾರ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ರಥಾಂಗ ಹೋಮ, ಕಲ್ಯಾಣೋತ್ಸವದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ, ವಿಶೇಷ ಪೂಜೆಯ ನಂತರ ರಥೋತ್ಸವ ಜರುಗಿತು.</p>.<p>‘ಗೋವಿಂದಾ ಗೋವಿಂದ’ ಘೋಷಗಳೊಂದಿಗೆ ತೊಟ್ಟಿಲ ಸೇವೆ, ಮಹಾಮಂಗಳಾರತಿಯ ನಂತರ ಭಕ್ತರಿಗೆ ಪ್ರಸಾದ ವಿತರಣೆ ಜರುಗಿತು.</p>.<p>ಸಂಜೆಯಿಂದ ಗ್ರಾಮೀಣ ಭಾಗದ ಕೈಕುಸ್ತಿ ಪಂದ್ಯ ಆಯೋಜಿಸಲಾಗಿತ್ತು.</p>.<p>ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ದರ್ಶನ ಪಡೆದರು. ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಮಣಿಕಂಠ ರಾಠೋಡ, ಅಯ್ಯಪ್ಪ ರಾಠೋಡ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>