ದಿನಾಲೂ ಒಂದಿಲ್ಲೊಂದು ಪ್ರತಿಭಟನೆ, ಮುಷ್ಕರ, ವಿವಿಧ ಕಾರ್ಯಕ್ರಮಗಳು ವೃತ್ತದಲ್ಲಿ ನಡೆಯುತ್ತಿದ್ದವು. ಸರ್ಕಾರಿ ಯೋಜನೆಯ ಜಾಗೃತಿ ಮೂಡಿಸುವ ಸಮಾರಂಭಗಳು ಅಯೋಜನೆಯಾಗುತ್ತಿದ್ದವು. ಸಾರಿಗೆ ಬಸ್ಗಳು ಇದೇ ವೃತದ ಮೂಲಕ ಹಾದು ಹೋಗುತ್ತಿದ್ದವು. ಬಸ್ನಿಲ್ದಾಣ ಅನತಿ ದೂರದಲ್ಲಿರುವುದರಿಂದ, ಸರ್ಕಾರಿ ಕಚೇರಿಗಳು, ಬ್ಯಾಂಕ್ಗಳು, ಶಾಲಾ, ಕಾಲೇಜುಗಳು ಇದೇ ಮಾರ್ಗದ ಮೂಲಕವೇ ಹೋಗಬೇಕು. ಜನರು ತಮ್ಮ ಕೆಲಸ, ಕಾರ್ಯಗಳಿಗೆ ಗೆಳೆಯರಿಗೆ, ಇತರರಿಗೆ ಕಾಯಲು ಇದೇ ವೃತ್ತ ಆರಿಸಿಕೊಳ್ಳುತ್ತಿದ್ದರು.