<p><strong>ಯಾದಗಿರಿ: </strong>ನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರದಿಂದ ಕೋವಿಡ್ ಅನ್ಲಾಕ್ ಮಾಡಿದ್ದು, ಮಾರುಕಟ್ಟೆ, ರಸ್ತೆಯಲ್ಲಿ ಜನಜಂಗುಳಿ ಇತ್ತು.</p>.<p>ಸೋಮವಾರದಿಂದ ಲಾಕ್ಡೌನ್ ಸಡಿಲಗೊಳಿಸಿದ್ದರಿಂದ ನಗರದ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಜನ ಜಂಗುಳಿಯಿಂದ ತುಂಬಿದ್ದವು.</p>.<p>ಒಂದೂವರೆ ತಿಂಗಳಿಗಿಂತ ಹೆಚ್ಚು ದಿನ ಲಾಕ್ಡೌನ್, ಸಂಪೂರ್ಣ ಲಾಕ್ಡೌನ್ ಮಾಡಿದ್ದರಿಂದ ಹೆಚ್ಚಿನ ವಾಹನಗಳು ರಸ್ತೆಗೆ ಇಳಿದಿರಲಿಲ್ಲ. ಸಡಿಲಿಕೆ ಮಾಡಿದ್ದರಿಂದ ಗ್ರಾಮೀಣ ಭಾಗದಿಂದಲೂ ಹೆಚ್ಚಿನ ಜನ ನಗರ ಪ್ರದೇಶಕ್ಕೆ ಬಂದಿದ್ದರು.</p>.<p>ನಗರದ ಸುಭಾಷ ವೃತ್ತ, ಶಾಸ್ತ್ರಿ ವೃತ್ತ, ಗಾಂಧಿ ವೃತ್ತ, ಗಂಜ್ ವೃತ್ತ, ರೈಲ್ವೆ ಸ್ಟೇಷನ್ ಮಾರುಕಟ್ಟೆ, ಹತ್ತಿಕುಣಿ ಕ್ರಾಸ್, ಹೊಸಳ್ಳಿ ಕ್ರಾಸ್ ಸೇರಿದಂತೆ ಹೊಸ, ಹಳೆ ಬಸ್ ನಿಲ್ದಾಣ ಸಮೀಪ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.</p>.<p>ಟ್ಯಾಕ್ಸಿ, ಆಟೊಗಳಲ್ಲಿ ಕೇವಲ ಇಬ್ಬರಿಗೆ ಮಾತ್ರ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ, ನಾಲ್ಕೈದು ಜನ ಪ್ರಯಾಣ ಮಾಡುವುದು ಸಾಮಾನ್ಯವಾಗಿತ್ತು.</p>.<p class="Subhead">ಅಂತರವೂ ಇಲ್ಲ: ಖರೀದಿಗೆ ಮಾರುಕಟ್ಟೆಗೆ ಬಂದಿದ್ದ ಜನ ಮಾಸ್ಕ್ ಹಾಕಿಕೊಳ್ಳದೇ ರಾಜಾರೋಷವಾಗಿ ಸಂಚಾರ ಮಾಡುವುದು ಕಂಡು ಬಂತು. ಸಂಪೂರ್ಣ ಲಾಕ್ಡೌನ್ ವೇಳೆ ಮಾಸ್ಕ್ ಧರಿಸದ ಪ್ರತಿಯೊಬ್ಬರಿಂದ ₹100 ವಸೂಲಿ ಮಾಡಲಾಗುತ್ತಿತ್ತು. ಆದರೂ ಜನ ಇನ್ನೂ ಎಚ್ಚೆತ್ತುಕೊಂಡಿಲ್ಲ.</p>.<p>ಕರವಸ್ತ್ರವೇ ಮಾಸ್ಕ್ನಂತೆ ಮುಖಕ್ಕೆ ಕಟ್ಟಿಕೊಂಡಿರುವುದು ಎಲ್ಲೆಡೆ ಕಂಡು ಬಂತು. ಇನ್ನೂ ಗ್ರಾಮೀಣ ಭಾಗದಿಂದ ಬಂದವರಂತೂ ಮಾಸ್ಕ್ ಬಗ್ಗೆ ಅರಿವೇ ಇಲ್ಲದಂತೆ ಮಾರುಕಟ್ಟೆ ತುಂಬಾ ಓಡಾಟ ನಡೆಸಿದ್ದರು.</p>.<p class="Subhead"><strong>ಬ್ಯಾಂಕ್ಗಳಲ್ಲಿಯೂ ನೂಕುನುಗ್ಗಲು: </strong>ಬ್ಯಾಂಕ್ಗಳಲ್ಲಿಯೂ ಹಣ ಪಡೆಯಲು ಜನರು ಸಾಲುಗಟ್ಟಿ ನಿಂತಿದ್ದರು. ಕೆಲಕಡೆ ಅಂತರ ಮರೆತು ಬ್ಯಾಂಕ್ಗಳ ಮುಂದೆ ನಿಂತುಕೊಂಡಿರುವುದು ಕಂಡು ಬಂತು.</p>.<p>ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಗಿತ್ತು. ಸೋಮವಾರ ಲಾಕ್ಡೌನ್ ಸಡಿಲಿಕೆ ಇದ್ದರೂ ಅಧಿಕಾರಿಗಳು ಇತ್ತ ಗಮನಹರಿಸದೇ ಜನರನ್ನು ಗುಂಪುಗೂಡಲು ಬಿಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತು.</p>.<p class="Subhead">ಗ್ರಾಮೀಣ ಭಾಗದವರಿಗೆ ತಿಳಿವಳಿಕೆ ಕೊರತೆ: ಇನ್ನೂ ಗ್ರಾಮಾಂತರ ಪ್ರದೇಶದಿಂದ ನಗರ, ಪಟ್ಟಣಗಳಿಗೆ ಬಂದ ಜನ ಮಾರುಕಟ್ಟೆಗಳು ತುಂಬಿದ್ದವು. ಬಹುತೇಕ ಜನರು ಮಾಸ್ಕ್ ಧರಿಸದೇ ಹಾಗೇ ಓಡಾಟ ನಡೆಸುತ್ತಿದ್ದರು. ಇವರಿಗೆ ತಿಳಿವಳಿಕೆ ಮೂಡಿಸುವವರಿಲ್ಲದೆ<br />ಕಂಡು ಬಂತು.</p>.<p class="Subhead">ಪ್ರಮುಖ ವೃತ್ತ, ರಸ್ತೆಗಳು ಜನಸಂದಣಿ: ನಗರದ ಪ್ರಮುಖ ವೃತ್ತ, ರಸ್ತೆಗಳು ಲಾಕ್ಡೌನ್ ಸಡಿಲಿಕೆ ಕಾರಣದಿಂದ ಜನಸಂದಣಿ ಹೆಚ್ಚಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಿದ್ದು, ಜನತೆ ಹೆಚ್ಚು ಓಡಾಟ ಕಂಡು ಬಂತು.</p>.<p>ಗಾಂಧಿ ವೃತ್ತದ ನಗರ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ಹೆಚ್ಚು ವಾಹನಗಳ ಓಡಾಟದಿಂದ ಕೆಲವೊತ್ತು ಟ್ರಾಫಿಕ್ ಜಾಂ ಉಂಟಾಗಿತ್ತು. ಹಲವಾರು ವಾಹನಗಳು ಒಂದೇ ಬಾರಿ ಬಂದಿದ್ದರಿಂದ ವಾಹನಗಳು ನಿಂತುಕೊಂಡಿದ್ದವು. ಪೊಲೀಸರು ಹರಸಹಾಸ ಪಟ್ಟರು.</p>.<p class="Subhead">ಸಗಟು ವ್ಯಾಪಾರ ಜೋರು: ದಿನಸಿ ಅಂಗಡಿಗಳಲ್ಲಿ ಹೆಚ್ಚು ಜನರು ಕಂಡು ಬರಲಿಲ್ಲ. ಆದರೆ, ಸಗಟು ಅಂಗಡಿಗಳಲ್ಲಿ ಗ್ರಾಮಾಂತರ ಪ್ರದೇಶದಿಂದ ಬಂತ ಜನ ಹೆಚ್ಚು ಬಂದಿದ್ದರಿಂದ ವ್ಯಾಪಾರ ಜೋರು ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರದಿಂದ ಕೋವಿಡ್ ಅನ್ಲಾಕ್ ಮಾಡಿದ್ದು, ಮಾರುಕಟ್ಟೆ, ರಸ್ತೆಯಲ್ಲಿ ಜನಜಂಗುಳಿ ಇತ್ತು.</p>.<p>ಸೋಮವಾರದಿಂದ ಲಾಕ್ಡೌನ್ ಸಡಿಲಗೊಳಿಸಿದ್ದರಿಂದ ನಗರದ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಜನ ಜಂಗುಳಿಯಿಂದ ತುಂಬಿದ್ದವು.</p>.<p>ಒಂದೂವರೆ ತಿಂಗಳಿಗಿಂತ ಹೆಚ್ಚು ದಿನ ಲಾಕ್ಡೌನ್, ಸಂಪೂರ್ಣ ಲಾಕ್ಡೌನ್ ಮಾಡಿದ್ದರಿಂದ ಹೆಚ್ಚಿನ ವಾಹನಗಳು ರಸ್ತೆಗೆ ಇಳಿದಿರಲಿಲ್ಲ. ಸಡಿಲಿಕೆ ಮಾಡಿದ್ದರಿಂದ ಗ್ರಾಮೀಣ ಭಾಗದಿಂದಲೂ ಹೆಚ್ಚಿನ ಜನ ನಗರ ಪ್ರದೇಶಕ್ಕೆ ಬಂದಿದ್ದರು.</p>.<p>ನಗರದ ಸುಭಾಷ ವೃತ್ತ, ಶಾಸ್ತ್ರಿ ವೃತ್ತ, ಗಾಂಧಿ ವೃತ್ತ, ಗಂಜ್ ವೃತ್ತ, ರೈಲ್ವೆ ಸ್ಟೇಷನ್ ಮಾರುಕಟ್ಟೆ, ಹತ್ತಿಕುಣಿ ಕ್ರಾಸ್, ಹೊಸಳ್ಳಿ ಕ್ರಾಸ್ ಸೇರಿದಂತೆ ಹೊಸ, ಹಳೆ ಬಸ್ ನಿಲ್ದಾಣ ಸಮೀಪ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.</p>.<p>ಟ್ಯಾಕ್ಸಿ, ಆಟೊಗಳಲ್ಲಿ ಕೇವಲ ಇಬ್ಬರಿಗೆ ಮಾತ್ರ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ, ನಾಲ್ಕೈದು ಜನ ಪ್ರಯಾಣ ಮಾಡುವುದು ಸಾಮಾನ್ಯವಾಗಿತ್ತು.</p>.<p class="Subhead">ಅಂತರವೂ ಇಲ್ಲ: ಖರೀದಿಗೆ ಮಾರುಕಟ್ಟೆಗೆ ಬಂದಿದ್ದ ಜನ ಮಾಸ್ಕ್ ಹಾಕಿಕೊಳ್ಳದೇ ರಾಜಾರೋಷವಾಗಿ ಸಂಚಾರ ಮಾಡುವುದು ಕಂಡು ಬಂತು. ಸಂಪೂರ್ಣ ಲಾಕ್ಡೌನ್ ವೇಳೆ ಮಾಸ್ಕ್ ಧರಿಸದ ಪ್ರತಿಯೊಬ್ಬರಿಂದ ₹100 ವಸೂಲಿ ಮಾಡಲಾಗುತ್ತಿತ್ತು. ಆದರೂ ಜನ ಇನ್ನೂ ಎಚ್ಚೆತ್ತುಕೊಂಡಿಲ್ಲ.</p>.<p>ಕರವಸ್ತ್ರವೇ ಮಾಸ್ಕ್ನಂತೆ ಮುಖಕ್ಕೆ ಕಟ್ಟಿಕೊಂಡಿರುವುದು ಎಲ್ಲೆಡೆ ಕಂಡು ಬಂತು. ಇನ್ನೂ ಗ್ರಾಮೀಣ ಭಾಗದಿಂದ ಬಂದವರಂತೂ ಮಾಸ್ಕ್ ಬಗ್ಗೆ ಅರಿವೇ ಇಲ್ಲದಂತೆ ಮಾರುಕಟ್ಟೆ ತುಂಬಾ ಓಡಾಟ ನಡೆಸಿದ್ದರು.</p>.<p class="Subhead"><strong>ಬ್ಯಾಂಕ್ಗಳಲ್ಲಿಯೂ ನೂಕುನುಗ್ಗಲು: </strong>ಬ್ಯಾಂಕ್ಗಳಲ್ಲಿಯೂ ಹಣ ಪಡೆಯಲು ಜನರು ಸಾಲುಗಟ್ಟಿ ನಿಂತಿದ್ದರು. ಕೆಲಕಡೆ ಅಂತರ ಮರೆತು ಬ್ಯಾಂಕ್ಗಳ ಮುಂದೆ ನಿಂತುಕೊಂಡಿರುವುದು ಕಂಡು ಬಂತು.</p>.<p>ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಗಿತ್ತು. ಸೋಮವಾರ ಲಾಕ್ಡೌನ್ ಸಡಿಲಿಕೆ ಇದ್ದರೂ ಅಧಿಕಾರಿಗಳು ಇತ್ತ ಗಮನಹರಿಸದೇ ಜನರನ್ನು ಗುಂಪುಗೂಡಲು ಬಿಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತು.</p>.<p class="Subhead">ಗ್ರಾಮೀಣ ಭಾಗದವರಿಗೆ ತಿಳಿವಳಿಕೆ ಕೊರತೆ: ಇನ್ನೂ ಗ್ರಾಮಾಂತರ ಪ್ರದೇಶದಿಂದ ನಗರ, ಪಟ್ಟಣಗಳಿಗೆ ಬಂದ ಜನ ಮಾರುಕಟ್ಟೆಗಳು ತುಂಬಿದ್ದವು. ಬಹುತೇಕ ಜನರು ಮಾಸ್ಕ್ ಧರಿಸದೇ ಹಾಗೇ ಓಡಾಟ ನಡೆಸುತ್ತಿದ್ದರು. ಇವರಿಗೆ ತಿಳಿವಳಿಕೆ ಮೂಡಿಸುವವರಿಲ್ಲದೆ<br />ಕಂಡು ಬಂತು.</p>.<p class="Subhead">ಪ್ರಮುಖ ವೃತ್ತ, ರಸ್ತೆಗಳು ಜನಸಂದಣಿ: ನಗರದ ಪ್ರಮುಖ ವೃತ್ತ, ರಸ್ತೆಗಳು ಲಾಕ್ಡೌನ್ ಸಡಿಲಿಕೆ ಕಾರಣದಿಂದ ಜನಸಂದಣಿ ಹೆಚ್ಚಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಿದ್ದು, ಜನತೆ ಹೆಚ್ಚು ಓಡಾಟ ಕಂಡು ಬಂತು.</p>.<p>ಗಾಂಧಿ ವೃತ್ತದ ನಗರ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ಹೆಚ್ಚು ವಾಹನಗಳ ಓಡಾಟದಿಂದ ಕೆಲವೊತ್ತು ಟ್ರಾಫಿಕ್ ಜಾಂ ಉಂಟಾಗಿತ್ತು. ಹಲವಾರು ವಾಹನಗಳು ಒಂದೇ ಬಾರಿ ಬಂದಿದ್ದರಿಂದ ವಾಹನಗಳು ನಿಂತುಕೊಂಡಿದ್ದವು. ಪೊಲೀಸರು ಹರಸಹಾಸ ಪಟ್ಟರು.</p>.<p class="Subhead">ಸಗಟು ವ್ಯಾಪಾರ ಜೋರು: ದಿನಸಿ ಅಂಗಡಿಗಳಲ್ಲಿ ಹೆಚ್ಚು ಜನರು ಕಂಡು ಬರಲಿಲ್ಲ. ಆದರೆ, ಸಗಟು ಅಂಗಡಿಗಳಲ್ಲಿ ಗ್ರಾಮಾಂತರ ಪ್ರದೇಶದಿಂದ ಬಂತ ಜನ ಹೆಚ್ಚು ಬಂದಿದ್ದರಿಂದ ವ್ಯಾಪಾರ ಜೋರು ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>