<p><strong>ಖಾನಾಪುರ (ಯಾದಗಿರಿ</strong>): ಶಹಾಪುರ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಅರವಳಿಕೆ ಚಿಕಿತ್ಸಾ ಮದ್ದಿನಿಂದ ಹುಚ್ಚು ಹಿಡಿದ ಮಂಗವನ್ನು ಸೆರೆ ಹಿಡಿಯಲಾಯಿತು. ಇದರಿಂದ ಒಂದು ವಾರದಿಂದ ಆತಂಕದಲ್ಲಿದ್ದ ಜನರು, ನಿಟ್ಟುಸಿರು ಬಿಟ್ಟರು.</p>.<p>25 ಜನರ ಮೇಲೆ ಹಲ್ಲೆ ಮಾಡಿದ್ದ ಮಂಗನನ್ನು ಸೆರೆ ಹಿಡಿಯಲು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.</p>.<p>ಸುರಪುರ ವಲಯಾರಣ್ಯ ಇಲಾಖೆ, ಶಹಾಪುರ ಅರಣ್ಯ ಇಲಾಖೆ ಹಾಗೂ ವಡಗೇರಾ ಪೊಲೀಸ್ ಸಿಬ್ಬಂದಿ ಮಂಗನನ್ನು ಜೀವಂತವಾಗಿ ಸೆರೆ ಹಿಡಿಯಲು ಬಲೆ ಬೀಸಿ, ನಾನಾ ತರಹ ಕಸರತ್ತು ಮಾಡಿದರು. ಇದಕ್ಕೆ ಗ್ರಾಮಸ್ಥರು ನೆರವಾದರು. ಆದರೆ, ಪ್ರಯೋಜನವಾಗಲಿಲ್ಲ. ಕೊನೆಗೆ ಗದಗ ಜಿಲ್ಲೆಯಿಂದ ಕರ್ನಾಟಕ ಮೃಗಾಲಯ ಪ್ರಾಧಿಕಾರ ತಂಡ ಖಾನಾಪುರ ಗ್ರಾಮಕ್ಕೆ ಬಂದು, ಅರವಳಿಕೆ ಚಿಕಿತ್ಸಾ ಮದ್ದಿನಿಂದ ಮಂಗನನ್ನು ಸೆರೆ ಹಿಡಿಯಿತು.</p>.<p>ಗದಗ ಜಿಲ್ಲೆಯ ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಪಶು ವೈದ್ಯಾಧಿಕಾರಿ ಹಾಗೂ ಶೂಟರ್ ನಿಖಿಲ್ ಕುಲಕರ್ಣಿ, ವಡಗೇರಾ ಠಾಣೆ ಪಿಎಸ್ಐ ಸಿದ್ಧರಾಯ ಬಳ್ಳೂರ್ಗಿ, ಎಎಸ್ಐ ಭೀಮಶೆಟ್ಟಿ, ಪೇದೆ ನೀಲಕಂಠಪ್ಪ, ಸುರಪುರ ವಲಯ ಅರಣ್ಯಾಧಿಕಾರಿ ಮೌಲಾಲಿಸಾಬ್, ಉಪ ಅರಣ್ಯ ಅಧಿಕಾರಿ ಹೂಗಾರ, ಉಪಳಪ್ಪ, ಶರಣಪ್ಪ, ಪರಶುರಾಮ, ಮಾನಪ್ಪ, ದುರ್ಗಪ್ಪ, ಹಣಮಂತಪ್ಪ ಬಿರಾದಾರ, ಪಿಡಿಒ ರಡ್ಡಿ ರಾಠೋಡ್, ತಾಪಂ ಸದಸ್ಯ ಪರಶುರಾಮ ಕುರುಕುಂದಿ, ಖಾನಾಪುರ ಗ್ರಾಮದ ಪ್ರಮುಖರಾದ ದೇವಿಂದ್ರಪ್ಪ ಮುನುಮುಟಿಗಿ, ಗ್ರಾಪಂ ಅಧ್ಯಕ್ಷ ಸೋಮಸಿಂಗ್ ಕಾರ್ಯಾಚರಣೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಾನಾಪುರ (ಯಾದಗಿರಿ</strong>): ಶಹಾಪುರ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಅರವಳಿಕೆ ಚಿಕಿತ್ಸಾ ಮದ್ದಿನಿಂದ ಹುಚ್ಚು ಹಿಡಿದ ಮಂಗವನ್ನು ಸೆರೆ ಹಿಡಿಯಲಾಯಿತು. ಇದರಿಂದ ಒಂದು ವಾರದಿಂದ ಆತಂಕದಲ್ಲಿದ್ದ ಜನರು, ನಿಟ್ಟುಸಿರು ಬಿಟ್ಟರು.</p>.<p>25 ಜನರ ಮೇಲೆ ಹಲ್ಲೆ ಮಾಡಿದ್ದ ಮಂಗನನ್ನು ಸೆರೆ ಹಿಡಿಯಲು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.</p>.<p>ಸುರಪುರ ವಲಯಾರಣ್ಯ ಇಲಾಖೆ, ಶಹಾಪುರ ಅರಣ್ಯ ಇಲಾಖೆ ಹಾಗೂ ವಡಗೇರಾ ಪೊಲೀಸ್ ಸಿಬ್ಬಂದಿ ಮಂಗನನ್ನು ಜೀವಂತವಾಗಿ ಸೆರೆ ಹಿಡಿಯಲು ಬಲೆ ಬೀಸಿ, ನಾನಾ ತರಹ ಕಸರತ್ತು ಮಾಡಿದರು. ಇದಕ್ಕೆ ಗ್ರಾಮಸ್ಥರು ನೆರವಾದರು. ಆದರೆ, ಪ್ರಯೋಜನವಾಗಲಿಲ್ಲ. ಕೊನೆಗೆ ಗದಗ ಜಿಲ್ಲೆಯಿಂದ ಕರ್ನಾಟಕ ಮೃಗಾಲಯ ಪ್ರಾಧಿಕಾರ ತಂಡ ಖಾನಾಪುರ ಗ್ರಾಮಕ್ಕೆ ಬಂದು, ಅರವಳಿಕೆ ಚಿಕಿತ್ಸಾ ಮದ್ದಿನಿಂದ ಮಂಗನನ್ನು ಸೆರೆ ಹಿಡಿಯಿತು.</p>.<p>ಗದಗ ಜಿಲ್ಲೆಯ ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಪಶು ವೈದ್ಯಾಧಿಕಾರಿ ಹಾಗೂ ಶೂಟರ್ ನಿಖಿಲ್ ಕುಲಕರ್ಣಿ, ವಡಗೇರಾ ಠಾಣೆ ಪಿಎಸ್ಐ ಸಿದ್ಧರಾಯ ಬಳ್ಳೂರ್ಗಿ, ಎಎಸ್ಐ ಭೀಮಶೆಟ್ಟಿ, ಪೇದೆ ನೀಲಕಂಠಪ್ಪ, ಸುರಪುರ ವಲಯ ಅರಣ್ಯಾಧಿಕಾರಿ ಮೌಲಾಲಿಸಾಬ್, ಉಪ ಅರಣ್ಯ ಅಧಿಕಾರಿ ಹೂಗಾರ, ಉಪಳಪ್ಪ, ಶರಣಪ್ಪ, ಪರಶುರಾಮ, ಮಾನಪ್ಪ, ದುರ್ಗಪ್ಪ, ಹಣಮಂತಪ್ಪ ಬಿರಾದಾರ, ಪಿಡಿಒ ರಡ್ಡಿ ರಾಠೋಡ್, ತಾಪಂ ಸದಸ್ಯ ಪರಶುರಾಮ ಕುರುಕುಂದಿ, ಖಾನಾಪುರ ಗ್ರಾಮದ ಪ್ರಮುಖರಾದ ದೇವಿಂದ್ರಪ್ಪ ಮುನುಮುಟಿಗಿ, ಗ್ರಾಪಂ ಅಧ್ಯಕ್ಷ ಸೋಮಸಿಂಗ್ ಕಾರ್ಯಾಚರಣೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>