<p><strong>ಗುರುಮಠಕಲ್ (ಯಾದಗಿರಿ ಜಿಲ್ಲೆ):</strong> ತಾಲ್ಲೂಕಿನ ಗುಡ್ಲಗುಂಟಾ ಗ್ರಾಮದ ಜಮೀನಿನ ವಾರಸತ್ವ ಬದಲಾವಣೆಗೆ ಸಂಬಂಧಿಸಿದಂತೆ ಬುಧವಾರ ತಹಶೀಲ್ದಾರ್ ಕಚೇರಿಗೆ ಮನವಿ ಪತ್ರ ನೀಡಲು ಬಂದಿದ್ದ ಮಾದಿಗ ದಂಡೋರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನರಸಪ್ಪ ಹಾಗೂ ಕಾರ್ಯಕರ್ತರಿಗೆ ತಹಶೀಲ್ದಾರ್ ದುಂಡಪ್ಪ ಅವರೊಂದಿಗೆ ವಾಗ್ವಾದ ಜರುಗಿತು.</p><p>ತಾಲ್ಲೂಕಿನ ಗುಡ್ಲಗುಂಟ ಗ್ರಾಮದ ತಾಯಪ್ಪ ಹರಿಜನ ಅವರ ಸ.ನಂ. 105 ರ 30 ಗುಂಟೆ ಜಮೀನನ್ನು ಅದೇ ಗ್ರಾಮದ ಸಾಬಮ್ಮ ತಾಯಪ್ಪ ಕಬ್ಬಲಿಗ ಅವರ ಹೆಸರಿಗೆ 2022ರಲ್ಲಿ ವಾರಸಾ ಬದಲಾವಣೆ ಮಾಡಲಾಗಿತ್ತು. ಆದರೆ, ತಾಯಪ್ಪ ಹರಿಜನ ಅವರ ಪುತ್ರ ಭೀಮರಾಯ ಹಲವು ಬಾರಿ ಕಚೇರಿಗಳಿಗೆ ಅಲೆದಾಡಿದ್ದು, ಈ ಮಧ್ಯೆ ಸಾಬಮ್ಮ ಅವರು ಅದೇ ಜಮೀನಿನ ಮೇಲೆ ಬ್ಯಾಂಕಿನಲ್ಲಿ ₹3 ಲಕ್ಷ ಸಾಲವನ್ನು ಪಡೆದಿದ್ದಾರೆ. ಈ ಎಲ್ಲಾ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ 'ಮನವಿ ಪತ್ರ ನೀಡಲು ಬಂದಾಗ ತಹಶೀಲ್ದಾರ್ ಅವರ ದರ್ಪದ ಮಾತು'ಗಳಾಡಿದ್ದಾರೆ ಎನ್ನುವುದು ದಂಡೋರಾದ ಕಾರ್ಯಕರ್ತರ ದೂರಾಗಿದೆ.</p><p>ತಹಶೀಲ್ದಾರ್ ದುಂಡಪ್ಪ ಅವರ ವಿರುದ್ಧ ದಂಡೋರಾದ ಕಾರ್ಯಕರ್ತರು ಘೋಷಣೆ ಕೂಗುತ್ತಾ, ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿ ಬಂದರೆ ಮಾತ್ರ ಮನವಿ ಸಲ್ಲಿಸುವುದಾಗಿ ಮತ್ತು ತಹಶೀಲ್ದಾರ್ ವಿರುದ್ಧ ಪ್ರಕರಣ ದಾಖಲಿಸುವವರೆಗೆ ಮುತ್ತಿಗೆ ಮುಂದುವರಿಸುವುದಾಗಿ ಪಟ್ಟುಹಿಡಿದರು.</p><p><strong>ಪೊಲೀಸ್ರೊಂದಿಗೆ ಮಾತುಕತೆ: </strong></p><p>ದಂಡೋರಾದ ರಾಜ್ಯ ಘಟಕ ಅಧ್ಯಕ್ಷ ನರಸಪ್ಪ ಹಾಗೂ ಕಾರ್ಯಕರ್ತರೊಂದಿಗೆ ಪೊಲೀಸ್ ಇಲಾಖೆಯು ಮಾತುಕತೆ ನಡೆಸಿತಾದರೂ, 'ತಹಶೀಲ್ದಾರ್ ಕ್ಷಮೆ ಕೇಳಿದ ನಂತರವೇ ಉಳಿದದ್ದು ಮಾತಾಡೋಣ' ಎಂದು ದಂಡೋರಾದ ಕಾರ್ಯಕರ್ತರು ತಾಕೀತು ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್ (ಯಾದಗಿರಿ ಜಿಲ್ಲೆ):</strong> ತಾಲ್ಲೂಕಿನ ಗುಡ್ಲಗುಂಟಾ ಗ್ರಾಮದ ಜಮೀನಿನ ವಾರಸತ್ವ ಬದಲಾವಣೆಗೆ ಸಂಬಂಧಿಸಿದಂತೆ ಬುಧವಾರ ತಹಶೀಲ್ದಾರ್ ಕಚೇರಿಗೆ ಮನವಿ ಪತ್ರ ನೀಡಲು ಬಂದಿದ್ದ ಮಾದಿಗ ದಂಡೋರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನರಸಪ್ಪ ಹಾಗೂ ಕಾರ್ಯಕರ್ತರಿಗೆ ತಹಶೀಲ್ದಾರ್ ದುಂಡಪ್ಪ ಅವರೊಂದಿಗೆ ವಾಗ್ವಾದ ಜರುಗಿತು.</p><p>ತಾಲ್ಲೂಕಿನ ಗುಡ್ಲಗುಂಟ ಗ್ರಾಮದ ತಾಯಪ್ಪ ಹರಿಜನ ಅವರ ಸ.ನಂ. 105 ರ 30 ಗುಂಟೆ ಜಮೀನನ್ನು ಅದೇ ಗ್ರಾಮದ ಸಾಬಮ್ಮ ತಾಯಪ್ಪ ಕಬ್ಬಲಿಗ ಅವರ ಹೆಸರಿಗೆ 2022ರಲ್ಲಿ ವಾರಸಾ ಬದಲಾವಣೆ ಮಾಡಲಾಗಿತ್ತು. ಆದರೆ, ತಾಯಪ್ಪ ಹರಿಜನ ಅವರ ಪುತ್ರ ಭೀಮರಾಯ ಹಲವು ಬಾರಿ ಕಚೇರಿಗಳಿಗೆ ಅಲೆದಾಡಿದ್ದು, ಈ ಮಧ್ಯೆ ಸಾಬಮ್ಮ ಅವರು ಅದೇ ಜಮೀನಿನ ಮೇಲೆ ಬ್ಯಾಂಕಿನಲ್ಲಿ ₹3 ಲಕ್ಷ ಸಾಲವನ್ನು ಪಡೆದಿದ್ದಾರೆ. ಈ ಎಲ್ಲಾ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ 'ಮನವಿ ಪತ್ರ ನೀಡಲು ಬಂದಾಗ ತಹಶೀಲ್ದಾರ್ ಅವರ ದರ್ಪದ ಮಾತು'ಗಳಾಡಿದ್ದಾರೆ ಎನ್ನುವುದು ದಂಡೋರಾದ ಕಾರ್ಯಕರ್ತರ ದೂರಾಗಿದೆ.</p><p>ತಹಶೀಲ್ದಾರ್ ದುಂಡಪ್ಪ ಅವರ ವಿರುದ್ಧ ದಂಡೋರಾದ ಕಾರ್ಯಕರ್ತರು ಘೋಷಣೆ ಕೂಗುತ್ತಾ, ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿ ಬಂದರೆ ಮಾತ್ರ ಮನವಿ ಸಲ್ಲಿಸುವುದಾಗಿ ಮತ್ತು ತಹಶೀಲ್ದಾರ್ ವಿರುದ್ಧ ಪ್ರಕರಣ ದಾಖಲಿಸುವವರೆಗೆ ಮುತ್ತಿಗೆ ಮುಂದುವರಿಸುವುದಾಗಿ ಪಟ್ಟುಹಿಡಿದರು.</p><p><strong>ಪೊಲೀಸ್ರೊಂದಿಗೆ ಮಾತುಕತೆ: </strong></p><p>ದಂಡೋರಾದ ರಾಜ್ಯ ಘಟಕ ಅಧ್ಯಕ್ಷ ನರಸಪ್ಪ ಹಾಗೂ ಕಾರ್ಯಕರ್ತರೊಂದಿಗೆ ಪೊಲೀಸ್ ಇಲಾಖೆಯು ಮಾತುಕತೆ ನಡೆಸಿತಾದರೂ, 'ತಹಶೀಲ್ದಾರ್ ಕ್ಷಮೆ ಕೇಳಿದ ನಂತರವೇ ಉಳಿದದ್ದು ಮಾತಾಡೋಣ' ಎಂದು ದಂಡೋರಾದ ಕಾರ್ಯಕರ್ತರು ತಾಕೀತು ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>