<p><strong>ಗುರುಮಠಕಲ್/ಸೇಡಂ:</strong> ‘ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಅಮ್ಮನವರ ಆಶ್ರಮಕ್ಕೆ ಸಂಬಂಧಿಸಿದ ಟ್ರಸ್ಟ್ನಲ್ಲಿ ಕಾರ್ಯದರ್ಶಿಯಾಗಿ ನನ್ನ ಪುತ್ರ ಸುಮನ್ ಅವರನ್ನು ಸೇರ್ಪಡೆ ಮಾಡಿದ್ದು, ಆತನನ್ನು ಟ್ರಸ್ಟ್ನಿಂದ ಕೈಬಿಟ್ಟು ಶೀಘ್ರ ಪುನರರಚನೆ ಮಾಡುತ್ತೇವೆ’ ಎಂದು ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ ಹೇಳಿದರು.</p>.<p>ಬುಧವಾರ ಹತ್ತಿರದ ಯಾನಾಗುಂದಿ ಗ್ರಾಮದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ನನಗೆ ವಯಸ್ಸಾದ ಹಿನ್ನಲೆ ನನ್ನ ಸಹಾಯಕ್ಕೆಂದು ನನ್ನ ಪುತ್ರ ಸುಮನ್ರನ್ನು ನನ್ನೊಡನೆ ಇರಿಸಿಕೊಂಡಿರುವೆ. ಮಾಣಿಕೇಶ್ವರಿ ಅಮ್ಮನವರ ಅಧ್ಯಕ್ಷತೆ, ನಾನು ಕಾರ್ಯದರ್ಶಿಯಾಗಿ ಮುಂದುವರೆಯುವೆ’ ಎಂದು ಸ್ಪಷ್ಟನೆ ನೀಡಿದರು.</p>.<p>‘ಯಾನಗುಂದಿಯ ಸ.ನಂ41ರಲ್ಲಿ 55.04 ಎಕರೆ ಭೂಮಿಯನ್ನು ಎಕರೆಗೆ ₹ 20ರ ಬೆಲೆಗೆ 1967ರಲ್ಲಿ ಮೈಸೂರು ರಾಜ್ಯ ಸರ್ಕಾರವು ದೇವಸ್ಥಾನ, ಆಶ್ರಮ, ವೇದಪಾಠ ಶಾಲೆ ನಿರ್ಮಾಣಕ್ಕೆಂದು ನಮ್ಮ ಆಶ್ರಮಕ್ಕೆ ಪರಾಬಾರೆ ಮಾಡಿದೆ. ಬಿ.ಡಿ.ಜತ್ತಿಯವರ ಅವಧಿಯಲ್ಲಿ ನೆರೆಯ ನಾರಾಯಣಪೇಟ್ದ ಬನ್ನಪ್ಪ ಅವರ ಪ್ರಯತ್ನ, ತಾಂಡೂರಿನ ಮಾಣೆಪ್ಪ ಅವರ ಧನಸಹಾಯದಿಂದ ಈ ಜಮೀನನ್ನು ಪಡೆದದ್ದು. ಸ್ಥಳೀಯರಿಂದ ಭೂದಾನ ಪಡೆದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<p>‘ತೆಲಂಗಾಣ, ಕರ್ನಾಟಕದ ಭಕ್ತರೆಂಬ ತಾರತಮ್ಯವಿಲ್ಲ. ಮುಂದಿನ ದಿನಗಳಲ್ಲಿ ಯಾವ ಸಮಸ್ಯೆಯೂ ಇಲ್ಲದೆ ಎಲ್ಲರಿಗೂ ಸುಲಭ ದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ. ಟ್ರಸ್ಟ್ನಲ್ಲಿ ಸ್ಥಳೀಯರಿಗೂ ಸದಸ್ಯತ್ವ ನೀಡುತ್ತೇವೆ. ಕೆಲವೊಮ್ಮೆ ಆಶ್ರಮದ ಸಿಬ್ಬಂದಿಯಿಂದಾದ ಸಮಸ್ಯೆಗಳು ಸರಿಪಡಿಸಲಾಗುತ್ತದೆ’ ಎಂದು ಭರವಸೆ ನೀಡಿದರು.</p>.<p>‘ಮೋತಕಪಲ್ಲಿ ಜಾತ್ರೆ ಕುರಿತು ನೀಡಿದ ಹೇಳಿಕೆಯಿಂದ ಜನರ ಭಕ್ತಿ ಮತ್ತು ನಂಬಿಕೆಗೆ ನೋವಾಗಿದ್ದು, ನಾನು ಕ್ಷಮೆಯಾಚಿಸುವೆ. ಜಾತ್ರೆಗಳ ವೇಳೆ ಧರ್ಮ ಪ್ರಚಾರ, ಪ್ರಾಣಿಬಲಿ ನಿಷೇಧದ ಕುರಿತು ಹೇಳಲಿ. ಅದಿಲ್ಲವಾದರೆ ಜಾತ್ರೆಗಳು ಯಾಕೆ? ಎನ್ನುವ ಭಾವದಲ್ಲಿ ಮಾತನಾಡಿದ್ದೆ’ ಎಂದು ಸ್ಪಷ್ಟನೆ ನೀಡಿದರು.</p>.<p>ಟ್ರಸ್ಟ್ ಕಾರ್ಯದರ್ಶಿ ಸುಮನ್, ಸದಸ್ಯರಾದ ಸಿದ್ರಾಮಪ್ಪ ಸಣ್ಣೂರ, ಹಣಮಂತು ಮಡ್ಡಿ, ಕಿಷ್ಟಪ್ಪ ಪುರುಷೋತ್ತಮ, ನಾಗವೇಣಿ ವಸ್ತ್ರದ್, ಭಕ್ತರಾದ ಅನಂತಪ್ಪ ಯದ್ಲಾಪುರ, ತಿಪ್ಪಣ್ಣ, ನರಸಿಂಹಲು ನಿರೇಟಿ, ನಾರಾಯಣ ದಂತಾಪುರ, ಸಾಯಲು ನಿರೇಟಿ, ಬ್ರಹ್ಮನಂದರೆಡ್ಡಿ ಕೇಶ್ವಾರ, ಬಸಣ್ಣ ಅರೆಬಿಂಜರ, ಶಶಿಕಲಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್/ಸೇಡಂ:</strong> ‘ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಅಮ್ಮನವರ ಆಶ್ರಮಕ್ಕೆ ಸಂಬಂಧಿಸಿದ ಟ್ರಸ್ಟ್ನಲ್ಲಿ ಕಾರ್ಯದರ್ಶಿಯಾಗಿ ನನ್ನ ಪುತ್ರ ಸುಮನ್ ಅವರನ್ನು ಸೇರ್ಪಡೆ ಮಾಡಿದ್ದು, ಆತನನ್ನು ಟ್ರಸ್ಟ್ನಿಂದ ಕೈಬಿಟ್ಟು ಶೀಘ್ರ ಪುನರರಚನೆ ಮಾಡುತ್ತೇವೆ’ ಎಂದು ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ ಹೇಳಿದರು.</p>.<p>ಬುಧವಾರ ಹತ್ತಿರದ ಯಾನಾಗುಂದಿ ಗ್ರಾಮದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ನನಗೆ ವಯಸ್ಸಾದ ಹಿನ್ನಲೆ ನನ್ನ ಸಹಾಯಕ್ಕೆಂದು ನನ್ನ ಪುತ್ರ ಸುಮನ್ರನ್ನು ನನ್ನೊಡನೆ ಇರಿಸಿಕೊಂಡಿರುವೆ. ಮಾಣಿಕೇಶ್ವರಿ ಅಮ್ಮನವರ ಅಧ್ಯಕ್ಷತೆ, ನಾನು ಕಾರ್ಯದರ್ಶಿಯಾಗಿ ಮುಂದುವರೆಯುವೆ’ ಎಂದು ಸ್ಪಷ್ಟನೆ ನೀಡಿದರು.</p>.<p>‘ಯಾನಗುಂದಿಯ ಸ.ನಂ41ರಲ್ಲಿ 55.04 ಎಕರೆ ಭೂಮಿಯನ್ನು ಎಕರೆಗೆ ₹ 20ರ ಬೆಲೆಗೆ 1967ರಲ್ಲಿ ಮೈಸೂರು ರಾಜ್ಯ ಸರ್ಕಾರವು ದೇವಸ್ಥಾನ, ಆಶ್ರಮ, ವೇದಪಾಠ ಶಾಲೆ ನಿರ್ಮಾಣಕ್ಕೆಂದು ನಮ್ಮ ಆಶ್ರಮಕ್ಕೆ ಪರಾಬಾರೆ ಮಾಡಿದೆ. ಬಿ.ಡಿ.ಜತ್ತಿಯವರ ಅವಧಿಯಲ್ಲಿ ನೆರೆಯ ನಾರಾಯಣಪೇಟ್ದ ಬನ್ನಪ್ಪ ಅವರ ಪ್ರಯತ್ನ, ತಾಂಡೂರಿನ ಮಾಣೆಪ್ಪ ಅವರ ಧನಸಹಾಯದಿಂದ ಈ ಜಮೀನನ್ನು ಪಡೆದದ್ದು. ಸ್ಥಳೀಯರಿಂದ ಭೂದಾನ ಪಡೆದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<p>‘ತೆಲಂಗಾಣ, ಕರ್ನಾಟಕದ ಭಕ್ತರೆಂಬ ತಾರತಮ್ಯವಿಲ್ಲ. ಮುಂದಿನ ದಿನಗಳಲ್ಲಿ ಯಾವ ಸಮಸ್ಯೆಯೂ ಇಲ್ಲದೆ ಎಲ್ಲರಿಗೂ ಸುಲಭ ದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ. ಟ್ರಸ್ಟ್ನಲ್ಲಿ ಸ್ಥಳೀಯರಿಗೂ ಸದಸ್ಯತ್ವ ನೀಡುತ್ತೇವೆ. ಕೆಲವೊಮ್ಮೆ ಆಶ್ರಮದ ಸಿಬ್ಬಂದಿಯಿಂದಾದ ಸಮಸ್ಯೆಗಳು ಸರಿಪಡಿಸಲಾಗುತ್ತದೆ’ ಎಂದು ಭರವಸೆ ನೀಡಿದರು.</p>.<p>‘ಮೋತಕಪಲ್ಲಿ ಜಾತ್ರೆ ಕುರಿತು ನೀಡಿದ ಹೇಳಿಕೆಯಿಂದ ಜನರ ಭಕ್ತಿ ಮತ್ತು ನಂಬಿಕೆಗೆ ನೋವಾಗಿದ್ದು, ನಾನು ಕ್ಷಮೆಯಾಚಿಸುವೆ. ಜಾತ್ರೆಗಳ ವೇಳೆ ಧರ್ಮ ಪ್ರಚಾರ, ಪ್ರಾಣಿಬಲಿ ನಿಷೇಧದ ಕುರಿತು ಹೇಳಲಿ. ಅದಿಲ್ಲವಾದರೆ ಜಾತ್ರೆಗಳು ಯಾಕೆ? ಎನ್ನುವ ಭಾವದಲ್ಲಿ ಮಾತನಾಡಿದ್ದೆ’ ಎಂದು ಸ್ಪಷ್ಟನೆ ನೀಡಿದರು.</p>.<p>ಟ್ರಸ್ಟ್ ಕಾರ್ಯದರ್ಶಿ ಸುಮನ್, ಸದಸ್ಯರಾದ ಸಿದ್ರಾಮಪ್ಪ ಸಣ್ಣೂರ, ಹಣಮಂತು ಮಡ್ಡಿ, ಕಿಷ್ಟಪ್ಪ ಪುರುಷೋತ್ತಮ, ನಾಗವೇಣಿ ವಸ್ತ್ರದ್, ಭಕ್ತರಾದ ಅನಂತಪ್ಪ ಯದ್ಲಾಪುರ, ತಿಪ್ಪಣ್ಣ, ನರಸಿಂಹಲು ನಿರೇಟಿ, ನಾರಾಯಣ ದಂತಾಪುರ, ಸಾಯಲು ನಿರೇಟಿ, ಬ್ರಹ್ಮನಂದರೆಡ್ಡಿ ಕೇಶ್ವಾರ, ಬಸಣ್ಣ ಅರೆಬಿಂಜರ, ಶಶಿಕಲಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>