<p><strong>ಯಾದಗಿರಿ: </strong>ಭಾನುವಾರದ ಕರ್ಫ್ಯೂಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಕೇಂದ್ರವಾದ ನಗರದಲ್ಲಿ ಬೈಕ್, ಆಟೊಗಳ ಓಡಾಟ ಅಲ್ಲಲ್ಲಿ ಸಾಮಾನ್ಯವಾಗಿತ್ತು.</p>.<p>ದಿನಸಿ, ಹಾಲು ಅಂಗಡಿಗಳನ್ನು ಬೆಳಿಗ್ಗೆ ಎರಡು ಗಂಟೆ ತೆಗೆದು ನಂತರ ಮುಚ್ಚಲಾಗಿತ್ತು. ಬೇರೆ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು. ಬಂದ್ನಿಂದ ಸಾರಿಗೆ ಬಸ್ಗಳು ಓಡಾಟಇರಲಿಲ್ಲ. ಖಾಸಗಿ ವಾಹನಗಳು ಓಡಾಟ ನಡೆಸಿದ್ದವು.<br />ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಮರಳು ಲಾರಿಗಳು ರಸ್ತೆಗೆ ಇಳಿದಿದ್ದವು.ಸಂಜೆಯ ನಂತರ ಯಥಾಸ್ಥಿತಿ ಓಡಾಟ<br />ನಡೆದಿತ್ತು.</p>.<p>ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಎಚ್ಚರಿಕೆ ನೀಡಿದರು. ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದರು.</p>.<p>ಶಹಾಪುರ ನಗರದಲ್ಲಿಭಾನುವಾರ ಲಾಕ್ಡೌನ್ದಿಂದ ಅಂಗಡಿ ಬಂದ್ಆಗಿದ್ದವು. ಕೆಲವು ಕಡೆ ಪೊಲೀಸರು ಬಲವಂತದಿಂದ ಅಂಗಡಿ ಮುಚ್ಚಿಸಿದರು. ವಾಹನಗಳ ಓಡಾಟ ವಿರಳವಾಗಿತ್ತು.</p>.<p>ಹುಣಸಗಿ ಪಟ್ಟಣದಲ್ಲಿವಾಹನಗಳ ಓಡಾಟ ವಿರಳವಾಗಿತ್ತು. ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.</p>.<p>ಯರಗೋಳ ಗ್ರಾಮದಲ್ಲಿ ಅಂಗಡಿ, ಹೋಟೆಲ್, ಸಂಪೂರ್ಣ ಬಂದ್ಆಗಿದ್ದವು. ಮೆಡಿಕಲ್, ಖಾಸಗಿ ಆಸ್ಪತ್ರೆಗಳು ತೆರೆದಿದ್ದವು. ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.ಕೃಷಿ ಚಟುವಟಿಕೆಗಳಲ್ಲಿ ರೈತರು<br />ತಲ್ಲೀನ ಆಗಿದ್ದರು.</p>.<p><strong>ಕಕ್ಕೇರಾ ಸ್ತಬ್ಧ</strong></p>.<p>ಕಕ್ಕೇರಾ ಪಟ್ಟಣದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಭಾನುವಾರ ಲಾಕ್ಡೌನ್ ನಡೆಸಲಾಯಿತು. ಸಾರ್ವಜನಿಕರು ಹೊರಬರದ ಕಾರಣ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಅಗತ್ಯ ಸೇವೆಗಳ ಅಂಗಡಿ ಬಿಟ್ಟರೆ ಉಳಿದ ಅಂಗಡಿಗಳು ಮುಚ್ಚಿದ್ದವು.</p>.<p>ಭಾನುವಾರದ ಲಾಕ್ಡೌನ್ ಬಗ್ಗೆ ಈಚೆಗೆ ಪುರಸಭೆಯು ಆಟೊ ಮೂಲಕ ಪ್ರಚಾರ ಮಾಡಿತ್ತು. ಕೂಲಿ ಕಾರ್ಮಿಕರು ಕಟ್ಟಡ, ಕೃಷಿ ಕಾರ್ಯಗಳಲ್ಲಿ ತೊಡಗಿದ್ದು ಕಂಡು ಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ಭಾನುವಾರದ ಕರ್ಫ್ಯೂಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಕೇಂದ್ರವಾದ ನಗರದಲ್ಲಿ ಬೈಕ್, ಆಟೊಗಳ ಓಡಾಟ ಅಲ್ಲಲ್ಲಿ ಸಾಮಾನ್ಯವಾಗಿತ್ತು.</p>.<p>ದಿನಸಿ, ಹಾಲು ಅಂಗಡಿಗಳನ್ನು ಬೆಳಿಗ್ಗೆ ಎರಡು ಗಂಟೆ ತೆಗೆದು ನಂತರ ಮುಚ್ಚಲಾಗಿತ್ತು. ಬೇರೆ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು. ಬಂದ್ನಿಂದ ಸಾರಿಗೆ ಬಸ್ಗಳು ಓಡಾಟಇರಲಿಲ್ಲ. ಖಾಸಗಿ ವಾಹನಗಳು ಓಡಾಟ ನಡೆಸಿದ್ದವು.<br />ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಮರಳು ಲಾರಿಗಳು ರಸ್ತೆಗೆ ಇಳಿದಿದ್ದವು.ಸಂಜೆಯ ನಂತರ ಯಥಾಸ್ಥಿತಿ ಓಡಾಟ<br />ನಡೆದಿತ್ತು.</p>.<p>ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಎಚ್ಚರಿಕೆ ನೀಡಿದರು. ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದರು.</p>.<p>ಶಹಾಪುರ ನಗರದಲ್ಲಿಭಾನುವಾರ ಲಾಕ್ಡೌನ್ದಿಂದ ಅಂಗಡಿ ಬಂದ್ಆಗಿದ್ದವು. ಕೆಲವು ಕಡೆ ಪೊಲೀಸರು ಬಲವಂತದಿಂದ ಅಂಗಡಿ ಮುಚ್ಚಿಸಿದರು. ವಾಹನಗಳ ಓಡಾಟ ವಿರಳವಾಗಿತ್ತು.</p>.<p>ಹುಣಸಗಿ ಪಟ್ಟಣದಲ್ಲಿವಾಹನಗಳ ಓಡಾಟ ವಿರಳವಾಗಿತ್ತು. ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.</p>.<p>ಯರಗೋಳ ಗ್ರಾಮದಲ್ಲಿ ಅಂಗಡಿ, ಹೋಟೆಲ್, ಸಂಪೂರ್ಣ ಬಂದ್ಆಗಿದ್ದವು. ಮೆಡಿಕಲ್, ಖಾಸಗಿ ಆಸ್ಪತ್ರೆಗಳು ತೆರೆದಿದ್ದವು. ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.ಕೃಷಿ ಚಟುವಟಿಕೆಗಳಲ್ಲಿ ರೈತರು<br />ತಲ್ಲೀನ ಆಗಿದ್ದರು.</p>.<p><strong>ಕಕ್ಕೇರಾ ಸ್ತಬ್ಧ</strong></p>.<p>ಕಕ್ಕೇರಾ ಪಟ್ಟಣದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಭಾನುವಾರ ಲಾಕ್ಡೌನ್ ನಡೆಸಲಾಯಿತು. ಸಾರ್ವಜನಿಕರು ಹೊರಬರದ ಕಾರಣ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಅಗತ್ಯ ಸೇವೆಗಳ ಅಂಗಡಿ ಬಿಟ್ಟರೆ ಉಳಿದ ಅಂಗಡಿಗಳು ಮುಚ್ಚಿದ್ದವು.</p>.<p>ಭಾನುವಾರದ ಲಾಕ್ಡೌನ್ ಬಗ್ಗೆ ಈಚೆಗೆ ಪುರಸಭೆಯು ಆಟೊ ಮೂಲಕ ಪ್ರಚಾರ ಮಾಡಿತ್ತು. ಕೂಲಿ ಕಾರ್ಮಿಕರು ಕಟ್ಟಡ, ಕೃಷಿ ಕಾರ್ಯಗಳಲ್ಲಿ ತೊಡಗಿದ್ದು ಕಂಡು ಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>