<p><strong>ಗುರುಮಠಕಲ್</strong>: ‘ನಮ್ಮ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹಾಗೂ ನೀರು ಶುದ್ಧೀಕರಣ ಘಟಕಗಳ(ಆರ್ಒ) ಸಮಸ್ಯೆ ತಿಳಿಯಲು ಸಚಿವ ಪ್ರಿಯಾಂಕ್ ಖರ್ಗೆಯವರು ಜಿಲ್ಲೆಗೆ ಭೇಟಿ ನೀಡಿ ತಮ್ಮ ಇಲಾಖೆಯ ಸಭೆ ನಡೆಸಲಿ. ಅದರಿಂದ ಸಮಸ್ಯೆ ಬಗೆಹರಿಯಬಹುದು’ ಎಂದು ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು.</p>.<p>ಸೋಮವಾರ ಅಧಿವೇಶನದಲ್ಲಿ ನೀರಿನ ಸಮಸ್ಯೆ ಕುರಿತು ವಿವರಿಸಿದ ಅವರು, ‘ಈ ಹಿಂದೆ ಆರ್ಒಗಳ ದುರಸ್ತಿ ಮತ್ತು ಬೋರ್ ಕೊರೆದ ₹ 1.13 ಕೋಟಿ ಬಿಲ್ ಬಾಕಿಯಿದ್ದು, ಕೆಲಸ ಮಾಡಿದವರಿಗೆ ತೀವ್ರ ತೊಂದರೆಯಾಗಿದೆ. ‘ನಮ್ಮ ಬಿಲ್ ಪಾವತಿಸಿ, ಇಲ್ಲದಿದ್ದರೆ ವಿಷ ಸೇವಿಸುತ್ತೇವೆ’ ಎಂದು ನನ್ನೊಡನೆ ಫೋನ್ನಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.</p>.<p>‘ಮತಕ್ಷೇತ್ರದ ಆರ್ಒಗಳ ದುರಸ್ತಿಗೆ ₹ 9 ಕೋಟಿ ಅನುದಾನ ಅವಶ್ಯವಿದ್ದು, ಈ ಕುರಿತು ಅಧಿಕಾರಿಗಳಿಗೆ ಸುಮಾರು 25 ಬಾರಿ ಪತ್ರ ಬರೆದರೂ ಉಪಯೋಗವಾಗಿಲ್ಲ. ಬೇಸಿಗೆ ಆರಂಭಗೊಳ್ಳಲಿದೆ, ನನ್ನ ಮತಕ್ಷೇತ್ರದ ನೀರಿನ ಸಮಸ್ಯೆ ಅತಿಯಾಗಿದೆ. ಆದ್ದರಿಂದ ಸಚಿವರು ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಲಿ’ ಎಂದು ಕೋರಿದ್ದಾರೆ.</p>.<p>ಶಾಸಕ ಕಂದಕೂರಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಆರ್ಒಗಳ ದುರಸ್ತಿ ಮತ್ತು ದೇಕಬಾಲ್(ನಿರ್ವಹಣೆ) ಕುರಿತ ಪ್ರಶ್ನೆಗೆ ನಮಗಿನ್ನೂ ಪರಿಹಾರ ಸಿಗುತ್ತಿಲ್ಲವೆಂದು ಪ್ರಾಮಾಣಿಕವಾಗಿ ಒಪ್ಪುತ್ತೇವೆ. ರಾಜ್ಯದೆಲ್ಲೆಡೆ ಈ ಸಮಸ್ಯೆಯಿದೆ. ಅದನ್ನು ಪರಿಹರಿಸಲು ಶೀಘ್ರವೇ ನೀಲನಕ್ಷೆ ರೂಪಿಸಿ, ಅವಶ್ಯಕ ಅನುದಾನ ಒದಗಿಸುವ ಭರವಸೆ ನೀಡಿದರು.</p>.<p>ಆರ್ಒಗಳ ದುರಸ್ತಿಗೆ ಈಗಾಗಲೇ ಗುರುಮಠಕಲ್ ಕ್ಷೇತ್ರಕ್ಕೆ ₹ 56.54 ಲಕ್ಷ ನೀಡಿದ್ದು, ಶಾಸಕ ಕಂದಕೂರ ಅವರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಬಾಕಿಯಿರುವ ಬಿಲ್ನ್ನು ಶೀಘ್ರ ಬಿಡುಗಡೆ ಮಾಡುವ ಮತ್ತು ಜಲಧಾರೆ ಯೋಜನೆಯನ್ನು ಸರಿಪಡಿಸುವ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್</strong>: ‘ನಮ್ಮ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹಾಗೂ ನೀರು ಶುದ್ಧೀಕರಣ ಘಟಕಗಳ(ಆರ್ಒ) ಸಮಸ್ಯೆ ತಿಳಿಯಲು ಸಚಿವ ಪ್ರಿಯಾಂಕ್ ಖರ್ಗೆಯವರು ಜಿಲ್ಲೆಗೆ ಭೇಟಿ ನೀಡಿ ತಮ್ಮ ಇಲಾಖೆಯ ಸಭೆ ನಡೆಸಲಿ. ಅದರಿಂದ ಸಮಸ್ಯೆ ಬಗೆಹರಿಯಬಹುದು’ ಎಂದು ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು.</p>.<p>ಸೋಮವಾರ ಅಧಿವೇಶನದಲ್ಲಿ ನೀರಿನ ಸಮಸ್ಯೆ ಕುರಿತು ವಿವರಿಸಿದ ಅವರು, ‘ಈ ಹಿಂದೆ ಆರ್ಒಗಳ ದುರಸ್ತಿ ಮತ್ತು ಬೋರ್ ಕೊರೆದ ₹ 1.13 ಕೋಟಿ ಬಿಲ್ ಬಾಕಿಯಿದ್ದು, ಕೆಲಸ ಮಾಡಿದವರಿಗೆ ತೀವ್ರ ತೊಂದರೆಯಾಗಿದೆ. ‘ನಮ್ಮ ಬಿಲ್ ಪಾವತಿಸಿ, ಇಲ್ಲದಿದ್ದರೆ ವಿಷ ಸೇವಿಸುತ್ತೇವೆ’ ಎಂದು ನನ್ನೊಡನೆ ಫೋನ್ನಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.</p>.<p>‘ಮತಕ್ಷೇತ್ರದ ಆರ್ಒಗಳ ದುರಸ್ತಿಗೆ ₹ 9 ಕೋಟಿ ಅನುದಾನ ಅವಶ್ಯವಿದ್ದು, ಈ ಕುರಿತು ಅಧಿಕಾರಿಗಳಿಗೆ ಸುಮಾರು 25 ಬಾರಿ ಪತ್ರ ಬರೆದರೂ ಉಪಯೋಗವಾಗಿಲ್ಲ. ಬೇಸಿಗೆ ಆರಂಭಗೊಳ್ಳಲಿದೆ, ನನ್ನ ಮತಕ್ಷೇತ್ರದ ನೀರಿನ ಸಮಸ್ಯೆ ಅತಿಯಾಗಿದೆ. ಆದ್ದರಿಂದ ಸಚಿವರು ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಲಿ’ ಎಂದು ಕೋರಿದ್ದಾರೆ.</p>.<p>ಶಾಸಕ ಕಂದಕೂರಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಆರ್ಒಗಳ ದುರಸ್ತಿ ಮತ್ತು ದೇಕಬಾಲ್(ನಿರ್ವಹಣೆ) ಕುರಿತ ಪ್ರಶ್ನೆಗೆ ನಮಗಿನ್ನೂ ಪರಿಹಾರ ಸಿಗುತ್ತಿಲ್ಲವೆಂದು ಪ್ರಾಮಾಣಿಕವಾಗಿ ಒಪ್ಪುತ್ತೇವೆ. ರಾಜ್ಯದೆಲ್ಲೆಡೆ ಈ ಸಮಸ್ಯೆಯಿದೆ. ಅದನ್ನು ಪರಿಹರಿಸಲು ಶೀಘ್ರವೇ ನೀಲನಕ್ಷೆ ರೂಪಿಸಿ, ಅವಶ್ಯಕ ಅನುದಾನ ಒದಗಿಸುವ ಭರವಸೆ ನೀಡಿದರು.</p>.<p>ಆರ್ಒಗಳ ದುರಸ್ತಿಗೆ ಈಗಾಗಲೇ ಗುರುಮಠಕಲ್ ಕ್ಷೇತ್ರಕ್ಕೆ ₹ 56.54 ಲಕ್ಷ ನೀಡಿದ್ದು, ಶಾಸಕ ಕಂದಕೂರ ಅವರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಬಾಕಿಯಿರುವ ಬಿಲ್ನ್ನು ಶೀಘ್ರ ಬಿಡುಗಡೆ ಮಾಡುವ ಮತ್ತು ಜಲಧಾರೆ ಯೋಜನೆಯನ್ನು ಸರಿಪಡಿಸುವ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>