‘ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಸಮರ್ಕವಾಗಿ ಎರಡು ಬೆಳೆಗೆ ಸಾಕಾಗುವಷ್ಟು ನೀರು ಸೆಳೆದುಕೊಳ್ಳುತ್ತಾರೆ. ಉತ್ತಮ ಆದಾಯವನ್ನೂ ಪಡೆದುಕೊಳ್ಳುತ್ತಾ ಬಂದಿದ್ದಾರೆ. ಆದರೆ ನೀರಾವರಿ ಕರವನ್ನು ಪಾವತಿಸಲು ರೈತರು ಮುಂದೆ ಬರುತ್ತಿಲ್ಲ. ಇದರಿಂದ ನೀರಾವರಿ ಕರ ಬಾಕಿ ಹನುಮಂತನ ಬಾಲದಂತೆ ಬೆಳೆದು ನಿಂತಿದೆ’ ಎಂದು ನಿಗಮದ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.
ನೀರು ಸ್ಥಗಿತಗೊಂಡ ಬಳಿಕ ಕಾಲುವೆ ದುರಸ್ತಿಗೆ ನಿಗಮವು ಮುಂದಾಗಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಈಗ ತರಾತುರಿಯಲ್ಲಿ ಕೆಲ ಕಡೆ ಕೆಲಸ ನಿರ್ವಹಿಸಿ ಬಿಲ್ ಪಾವತಿಸಿಕೊಳ್ಳುವ ಕೆಲಸವಾಗಿದೆ