ಯರಗೋಳ ಸುತ್ತಲಿನ ಅಲ್ಲಿಪುರ ಸಣ್ಣ ತಾಂಡಾ, ವೆಂಕಟೇಶನಗರ, ಕೇಮುನಾಯಕ ತಾಂಡಾ, ಥಾವರುನಾಯಕ ತಾಂಡಾ, ಕ್ಯಾಸಪನಳ್ಳಿ ತಾಂಡಾಗಳನ್ನು ಜಿಲ್ಲಾಡಾಳಿತ ಕಂಟೇನ್ಮೇಂಟ್ ಝೋನ್ಗಳೆಂದು ಗುರುತಿಸಿ, ಆ ಊರುಗಳ ರಸ್ತೆಗಳಿಗೆ ಮುಳ್ಳು ಬೇಲಿ ಹಾಕಿ ಸಂಚಾರ ಬಂದ್ ಮಾಡಲಾಗಿದೆ. ಆದರೂ ಸೀಲ್ಡೌನ್ ಆದ ಪ್ರದೇಶಗಳ ಜನರು ಮನೆಯಲ್ಲಿರದೇ ಹೊರಗಡೆ ಓಡಾಡುತ್ತಾ ಭೀತಿ ಉಂಟು ಮಾಡುತ್ತಿದ್ದಾರೆ.