ಯಾದಗಿರಿ: ಚುನಾವಣಾ ಪೂರ್ವ ಬಿಜೆಪಿ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡರೂ ಜಿಲ್ಲೆಯಲ್ಲಿ ಸುರಪುರ ಉಪ ಚುನಾವಣೆ, ಎರಡು ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಜಯವಾಗಿದೆ.
ಜಿಲ್ಲೆಯಲ್ಲಿ ನಾಲ್ಕು ಮತಕ್ಷೇತ್ರಗಳಿದ್ದು, ಮೂರು ಕಡೆ ಕಾಂಗ್ರೆಸ್ ಒಂದು ಜೆಡಿಎಸ್ ಶಾಸಕರಿದ್ದಾರೆ. ಜಿಲ್ಲೆಯೂ ರಾಯಚೂರು ಮತ್ತು ಕಲಬುರಗಿ ಲೋಕಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು, ಮೈತ್ರಿಗೆ ಗೆಲುವು ದಕ್ಕಿಲ್ಲ.
ಜಿಲ್ಲೆಯ ಸುರಪುರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ರಾಜಾ ವೇಣುಗೋಪಾಲ ನಾಯಕ, ರಾಯಚೂರು ಸಂಸದರಾಗಿ ಜಿ.ಕುಮಾರನಾಯಕ, ಕಲಬುರಗಿ ಸಂಸದರಾಗಿ ರಾಧಾಕೃಷ್ಣ ದೊಡಮನಿ ಅವರು ಆಯ್ಕೆಯಾಗಿದ್ದಾರೆ. ಆದರೆ, ಗುರುಮಠಕಲ್ ಬಿಟ್ಟರೆ ಬೇರೆಡೆ ಬಿಜೆಪಿಗೆ ಲೀಡ್ ಸಿಕ್ಕಿಲ್ಲ.