ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ: ನಾಳೆ ಜೆಡಿಎಸ್‌ ಪಂಚರತ್ನ ಸಮಾವೇಶ

ಪ್ರಧಾನ ವೇದಿಕೆಗೆ ದಿ.ಸದಾಶಿವರಡ್ಡಿ ಕಂದಕೂರ ಹೆಸರು, 20 ಎಕರೆಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ
Last Updated 22 ಮಾರ್ಚ್ 2023, 6:25 IST
ಅಕ್ಷರ ಗಾತ್ರ

ಯರಗೋಳ: ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಗುರುವಾರ (ಮಾ.23) ಗ್ರಾಮಕ್ಕೆ ಆಗಮಿಸಲಿದ್ದು ಬೃಹತ್ ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿದೆ.

ಗ್ರಾಮದ ಹೊರವಲಯದ 40 ಪ್ರದೇಶದಲ್ಲಿ ಕಾರ್ಯಕ್ರಮ ನಡೆಯಲಿದ್ದು 50 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಅಂದು ಸಂಜೆ 4 ಗಂಟೆಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ಗುರುಮಠಕಲ್ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ ತಿಳಿಸಿದರು.

ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಮಾತನಾಡಿದ ಶರಣಗೌಡ ಕಂದಕೂರ, ‘ನಾಲವಾರ ಕ್ರಾಸ್‌ನಿಂದ ಬೈಕ್ ಜಾಥಾ ನಡೆಯಲಿದ್ದು, ಗ್ರಾಮ ಪ್ರವೇಶಿಸುತ್ತಿದ್ದಂತೆ ಪೂರ್ಣ ಕುಂಭದೊಂದಿಗೆ ಮಹಿಳೆಯರು ಕುಮಾರಸ್ವಾಮಿ ಯವರನ್ನು ಸ್ವಾಗತಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ನಾರಾಯಣಪೇಟ ಶಾಸಕ ಎಸ್.ಆರ್.ರಡ್ಡಿ, ಶಾಸಕ ನಾಗನಗೌಡ ಕಂದಕೂರ, ಪಕ್ಷದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಇರಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಧಾನ ವೇದಿಕೆಗೆ ದಿ.ಸದಾಶಿವರಡ್ಡಿ ಕಂದಕೂರ ಹೆಸರು ಇಡಲಾಗಿದೆ. ಇಡೀ ಸಮಾವೇಶದ ಪ್ರಾಂಗಣದಲ್ಲಿ ಸಿಸಿ ಟಿವಿ ಕಣ್ಗಾವಲು, ವೇದಿಕೆ ಎಡಭಾಗದಲ್ಲಿ 1 ಲಕ್ಷ ಜನರಿಗೆ ಭೋಜನದ ವ್ಯವಸ್ಥೆ, 20 ಎಕರೆ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ನಾನು ಇದೇ ಗ್ರಾಮದಿಂದ ಪಾದಯಾತ್ರೆ ಆರಂಭಿಸಿದ್ದೆ. ಈಗ ಇಲ್ಲಿಂದಲೇ ಚುನಾವಣೆ ಕಹಳೆ ಮೊಳಗಿಸುತ್ತಿದ್ದೇನೆ ಎಂದರು.

ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ ನಿರೆಟ್ಟಿ, ಪ್ರಮುಖರಾದ ಮಲ್ಲನಗೌಡ ಹಳಿಮನಿ ಕೌಳೂರು, ಸುಭಾಶ್ಚಂದ್ರ ಕಟಕಟಿ, ಅಮರೇಶ ರಾಠೋಡ್, ಶಾಂತಪ್ಪ ಜಾಧವ್, ಮಾರ್ಕಂಡಪ್ಪ ಮನೆಗಾರ, ಶಿವಣ್ಣ ಇರಿಕೇರಿ, ಶಂಕ್ರಪ್ಪ ದಿಬ್ಬ, ಚನ್ನಬಸಪ್ಪ ಜೋಗಿ, ಪ್ರಭುಗೌಡ ಸೇರಿದಂತೆ ಪಕ್ಷದ ಕಾರ್ಯಕರ್ತರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT