<p><strong>ಯಾದಗಿರಿ</strong>: ‘ಭಾದ್ರಪದ ಹುಣ್ಣಿಮೆಯಿಂದ ಹದಿನೈದು ದಿನಗಳ ಕಾಲವನ್ನು ಅಂದರೆ ಅಮವಾಸ್ಯೆವರೆಗಿನ ಅವಧಿಯೇ ಪಿತೃಪಕ್ಷ. ಇದಕ್ಕೆ ಅಪರಪಕ್ಷವೆಂತಲೂ ಕರೆಯಲಾಗುತ್ತದೆ’ ಎಂದು ಪಂ.ರಾಘವೆಂದ್ರಾಚಾರ ಜೋಶಿ ಹೇಳಿದರು.</p>.<p>ಯಾದಗಿರಿ ನಗರದ ಉತ್ತರಾದಿ ಮಠದ ಪರಿಮಳ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡ ಪಿತೃಪಕ್ಷ ತರ್ಪಣ ಮಾಡಿಸಿ ಮಾತನಾಡಿದರು.</p>.<p>‘ಪಿತೃಪಕ್ಷ ಈ ದಿನದಲ್ಲಿ ಮೃತ ಹಿರಿಯರ ನೆನೆಯುವ ಕಾಲ. ಪಿತೃಗಳ ಆರಾಧನೆಯಿಂದ ಆಯುಷ್ಯ, ಸಂತಾನ, ಸಂಪತ್ತು, ಜ್ಞಾನ ದೊರೆಯುತ್ತದೆ’ ಎಂದರು.</p>.<p>‘ಮಹಾಲಯ ಅಮಾವಾಸ್ಯೆ ಸಮಯ ತರ್ಪಣ ಕೊಡಬೇಕು. ಗರುಡ ಪುರಾಣದ ಪ್ರಕಾರ ಪಿತೃಪಕ್ಷದ ಸಂದರ್ಭದಲ್ಲಿ ಪಿತೃದೇವತೆಗಳು ಮತ್ರ್ಯಲೋಕದಿಂದ ತಮ್ಮ ವಂಶಸ್ಥರನ್ನು ನೋಡಲೆಂದು ಬರುತ್ತಾರೆ. ತಮ್ಮ ವಂಶಸ್ಥರು ಕೊಡುವ ಪಿಂಡಪ್ರದಾನ, ತಿಲ ತರ್ಪಣಾದಿಗಳನ್ನು ಸ್ವಿಕರಿಸಿ ಅವರನ್ನು ಹರಸಿ ಹೋಗುತ್ತಾರೆ’ ಎಂದು ತಿಳಿಸಿದರು.</p>.<p>ನರಸಿಂಹಾಚಾರ್, ವಾದಿರಾಜ ಆಚಾರ್, ಜಿತೇಂದ್ರ ಕುಲಕರ್ಣಿ, ಕೃಷ್ಣಮೂರ್ತಿ ಕುಲಕರ್ಣಿ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ‘ಭಾದ್ರಪದ ಹುಣ್ಣಿಮೆಯಿಂದ ಹದಿನೈದು ದಿನಗಳ ಕಾಲವನ್ನು ಅಂದರೆ ಅಮವಾಸ್ಯೆವರೆಗಿನ ಅವಧಿಯೇ ಪಿತೃಪಕ್ಷ. ಇದಕ್ಕೆ ಅಪರಪಕ್ಷವೆಂತಲೂ ಕರೆಯಲಾಗುತ್ತದೆ’ ಎಂದು ಪಂ.ರಾಘವೆಂದ್ರಾಚಾರ ಜೋಶಿ ಹೇಳಿದರು.</p>.<p>ಯಾದಗಿರಿ ನಗರದ ಉತ್ತರಾದಿ ಮಠದ ಪರಿಮಳ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡ ಪಿತೃಪಕ್ಷ ತರ್ಪಣ ಮಾಡಿಸಿ ಮಾತನಾಡಿದರು.</p>.<p>‘ಪಿತೃಪಕ್ಷ ಈ ದಿನದಲ್ಲಿ ಮೃತ ಹಿರಿಯರ ನೆನೆಯುವ ಕಾಲ. ಪಿತೃಗಳ ಆರಾಧನೆಯಿಂದ ಆಯುಷ್ಯ, ಸಂತಾನ, ಸಂಪತ್ತು, ಜ್ಞಾನ ದೊರೆಯುತ್ತದೆ’ ಎಂದರು.</p>.<p>‘ಮಹಾಲಯ ಅಮಾವಾಸ್ಯೆ ಸಮಯ ತರ್ಪಣ ಕೊಡಬೇಕು. ಗರುಡ ಪುರಾಣದ ಪ್ರಕಾರ ಪಿತೃಪಕ್ಷದ ಸಂದರ್ಭದಲ್ಲಿ ಪಿತೃದೇವತೆಗಳು ಮತ್ರ್ಯಲೋಕದಿಂದ ತಮ್ಮ ವಂಶಸ್ಥರನ್ನು ನೋಡಲೆಂದು ಬರುತ್ತಾರೆ. ತಮ್ಮ ವಂಶಸ್ಥರು ಕೊಡುವ ಪಿಂಡಪ್ರದಾನ, ತಿಲ ತರ್ಪಣಾದಿಗಳನ್ನು ಸ್ವಿಕರಿಸಿ ಅವರನ್ನು ಹರಸಿ ಹೋಗುತ್ತಾರೆ’ ಎಂದು ತಿಳಿಸಿದರು.</p>.<p>ನರಸಿಂಹಾಚಾರ್, ವಾದಿರಾಜ ಆಚಾರ್, ಜಿತೇಂದ್ರ ಕುಲಕರ್ಣಿ, ಕೃಷ್ಣಮೂರ್ತಿ ಕುಲಕರ್ಣಿ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>