ವಲಯದ ಬಹುತೇಕ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿದ್ದು ಸಂಚಾರ ಮಾಡಲು ತೊಂದರೆಯಾಗಿತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಕ್ರಮ ಜರುಗಿಸಬೇಕು.
– ಕುಮಾರ ಮೋಪಗಾರ, ಕರವೇ ಕೆಂಭಾವಿ ವಲಯ ಅಧ್ಯಕ್ಷ
ಈಗಾಗಲೇ ಕೆಂಭಾವಿ-ನಗನೂರ-ಮಲ್ಲಾ ರಸ್ತೆ ಹಾಗೂ ಗೋಗಿ-ಮಲ್ಲಾ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಯಿಂದ ಸ್ವಲ್ಪ ವಿಳಂಬವಾಗಿವೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನುಳಿದ ಹಲವು ರಸ್ತೆಗಳ ಕ್ರಿಯಾಯೋಜನೆಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ.
– ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
ಸೈಕಲ್ ಓಡಿಸಲು ಬರದಂತಾಗಿದೆ ಯಡಿಯಾಪುರ ರಸ್ತೆ ಹದಗೆಟ್ಟಿದೆ. ಸುರಪುರ ಶಾಸಕರು ಇತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.