ಬೆಳಗಿನ ಜಾವ ಸುಮಾರು ಒಂದು ಗಂಟೆ ಕಾಲ ಜೋರಾದ ಗಾಳಿ, ಸಿಡಿಲಿನ ಸಪ್ಪಳದೊಂದಿಗೆ ಮಳೆರಾಯ ಬಂದು ಕಾದ ಕಬ್ಬಿಣದಂತಾಗಿರುವ ಭೂಮಿಯನ್ನು ತಂಪಾಗಿಸಿದ. ಐದಾರು ದಿನದಿಂದ 45 ಡಿಗ್ರಿ ಉಷ್ಣಾಂಶವಿದ್ದ ಪ್ರದೇಶ ಈಗ 39 ಡಿಗ್ರಿಗೆ ಇಳಿದಿದೆ. ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಗಿದೆ ಎಂದು ರೈತ ದ್ಯಾವಪ್ಪ ಹೇಳಿದರು.