<p class="rtejustify"><strong>ಸುರಪುರ:</strong> ಇಬ್ಬರು ಮಕ್ಕಳ ಹೆಸರಿನಲ್ಲಿ ತಲಾ ₹ 50 ಸಾವಿರ ಮೊತ್ತವನ್ನು ಬ್ಯಾಂಕ್ನಲ್ಲಿ ಫಿಕ್ಸ್ ಡಿಪಾಸಿಟ್ ಮಾಡಿಸಿ ಶಾಸಕ ರಾಜೂಗೌಡ ಮಾನವೀಯತೆ ಮೆರೆದಿದ್ದಾರೆ.</p>.<p class="rtejustify">ತಾಲ್ಲೂಕಿನ ದೇವಾಪುರ ಗ್ರಾಮದ ಬಸವರಾಜ ದಾವಣಗೆರೆ ಎಂಬುವರು ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಅವರ ಪತ್ನಿ ಕೂಡ ಎರಡು ವರ್ಷಗಳ ಹಿಂದೆಯೇ ಸಾವನಪ್ಪಿದ್ದರು. ಹೀಗಾಗಿ ತಂದೆ-ತಾಯಿ ಕಳೆದುಕೊಂಡು ಮಕ್ಕಳು ತಬ್ಬಲಿಯಾಗಿದ್ದರು.</p>.<p class="rtejustify">ವಿಷಯ ತಿಳಿದ ಶಾಸಕ ರಾಜೂಗೌಡ ಅವರು ದೇವಾಪುರ ಗ್ರಾಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಸಾಂತ್ವನ ಹೇಳಿದ್ದರು.</p>.<p class="rtejustify">ಇದೇ ವೇಳೆ ತಂದೆ-ತಾಯಿ ಕಳೆದುಕೊಂಡು ಮಕ್ಕಳಿಬ್ಬರ ಹೆಸರಿನಲ್ಲಿ ವೈಯಕ್ತಿಕವಾಗಿ ತಲಾ ₹ 50 ಸಾವಿರ ನೀಡುವುದಾಗಿ ಮತ್ತು ಆ ಹಣವನ್ನು ಮಕ್ಕಳ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಇಡುವುದಾಗಿ ಅಲ್ಲಿದ್ದ ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದ್ದರು.</p>.<p class="rtejustify">ಮಾತಿನಂತೆ ರಾಜೂಗೌಡ ಸೇವಾ ಸಮಿತಿಯ ಸದಸ್ಯರನ್ನು ಬುಧವಾರ ದೇವಾಪುರಕ್ಕೆ ಕಳುಹಿಸಿದ ಶಾಸಕ ರಾಜೂಗೌಡ ಅವರು, ಮಕ್ಕಳ ಕುಮಾರಿ ದಿವ್ಯಾ ಮತ್ತು ಕುಮಾರಿ ತೇಜಸ್ವಿನಿ ಹೆಸರಿನಲ್ಲಿ ಅಲ್ಲಿಯ ಪಿಕೆಜಿ ಬ್ಯಾಂಕ್ನಲ್ಲಿ ತಲಾ ₹ 50 ಸಾವಿರ ಎಫ್ಡಿ ಮಾಡಿಸಿದ್ದಾರೆ.</p>.<p class="rtejustify">ನಂತರ ಸೇವಾ ಸಮಿತಿಯವರು ಎಫ್ಡಿ ಬಾಂಡ್ನ್ನು ಮಕ್ಕಳ ಅಜ್ಜಿಯ ಕೈಯಲ್ಲಿ ಕೊಟ್ಟು ಬಂದಿದ್ದಾರೆ.<br />ಸಮಿತಿಯ ತಿಗಳಪ್ಪ ಕವಡಿಮಟ್ಟಿ, ಗಂಗಾಧನಾಯಕ ಅರಳಹಳ್ಳಿ, ಪರಶುರಾಮ ನಾಟೇಕರ್, ವಸಂತ ನಾಯಕ ಅರಳಹಳ್ಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="rtejustify"><strong>ಸುರಪುರ:</strong> ಇಬ್ಬರು ಮಕ್ಕಳ ಹೆಸರಿನಲ್ಲಿ ತಲಾ ₹ 50 ಸಾವಿರ ಮೊತ್ತವನ್ನು ಬ್ಯಾಂಕ್ನಲ್ಲಿ ಫಿಕ್ಸ್ ಡಿಪಾಸಿಟ್ ಮಾಡಿಸಿ ಶಾಸಕ ರಾಜೂಗೌಡ ಮಾನವೀಯತೆ ಮೆರೆದಿದ್ದಾರೆ.</p>.<p class="rtejustify">ತಾಲ್ಲೂಕಿನ ದೇವಾಪುರ ಗ್ರಾಮದ ಬಸವರಾಜ ದಾವಣಗೆರೆ ಎಂಬುವರು ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಅವರ ಪತ್ನಿ ಕೂಡ ಎರಡು ವರ್ಷಗಳ ಹಿಂದೆಯೇ ಸಾವನಪ್ಪಿದ್ದರು. ಹೀಗಾಗಿ ತಂದೆ-ತಾಯಿ ಕಳೆದುಕೊಂಡು ಮಕ್ಕಳು ತಬ್ಬಲಿಯಾಗಿದ್ದರು.</p>.<p class="rtejustify">ವಿಷಯ ತಿಳಿದ ಶಾಸಕ ರಾಜೂಗೌಡ ಅವರು ದೇವಾಪುರ ಗ್ರಾಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಸಾಂತ್ವನ ಹೇಳಿದ್ದರು.</p>.<p class="rtejustify">ಇದೇ ವೇಳೆ ತಂದೆ-ತಾಯಿ ಕಳೆದುಕೊಂಡು ಮಕ್ಕಳಿಬ್ಬರ ಹೆಸರಿನಲ್ಲಿ ವೈಯಕ್ತಿಕವಾಗಿ ತಲಾ ₹ 50 ಸಾವಿರ ನೀಡುವುದಾಗಿ ಮತ್ತು ಆ ಹಣವನ್ನು ಮಕ್ಕಳ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಇಡುವುದಾಗಿ ಅಲ್ಲಿದ್ದ ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದ್ದರು.</p>.<p class="rtejustify">ಮಾತಿನಂತೆ ರಾಜೂಗೌಡ ಸೇವಾ ಸಮಿತಿಯ ಸದಸ್ಯರನ್ನು ಬುಧವಾರ ದೇವಾಪುರಕ್ಕೆ ಕಳುಹಿಸಿದ ಶಾಸಕ ರಾಜೂಗೌಡ ಅವರು, ಮಕ್ಕಳ ಕುಮಾರಿ ದಿವ್ಯಾ ಮತ್ತು ಕುಮಾರಿ ತೇಜಸ್ವಿನಿ ಹೆಸರಿನಲ್ಲಿ ಅಲ್ಲಿಯ ಪಿಕೆಜಿ ಬ್ಯಾಂಕ್ನಲ್ಲಿ ತಲಾ ₹ 50 ಸಾವಿರ ಎಫ್ಡಿ ಮಾಡಿಸಿದ್ದಾರೆ.</p>.<p class="rtejustify">ನಂತರ ಸೇವಾ ಸಮಿತಿಯವರು ಎಫ್ಡಿ ಬಾಂಡ್ನ್ನು ಮಕ್ಕಳ ಅಜ್ಜಿಯ ಕೈಯಲ್ಲಿ ಕೊಟ್ಟು ಬಂದಿದ್ದಾರೆ.<br />ಸಮಿತಿಯ ತಿಗಳಪ್ಪ ಕವಡಿಮಟ್ಟಿ, ಗಂಗಾಧನಾಯಕ ಅರಳಹಳ್ಳಿ, ಪರಶುರಾಮ ನಾಟೇಕರ್, ವಸಂತ ನಾಯಕ ಅರಳಹಳ್ಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>