<p><strong>ಯರಗೋಳ:</strong> ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ಕೊರೊನಾ ಭೀತಿ ಕಾಡಿದೆ. ಅಂಗಡಿಗಳಲ್ಲಿ ಗ್ರಾಹಕರ ಕೊರತೆ ಎದ್ದು ಕಾಣಿಸಿತು. ಪ್ರತಿವರ್ಷ ಬಣ್ಣ ಬಣ್ಣದ ರಾಖಿ ಖರೀದಿಸಲು ಅಂಗಡಿಗಳಲ್ಲಿ ಯುವತಿಯರ ದಂಡು ಕಾಣಿಸುತ್ತಿತ್ತು. ಈ ವರ್ಷ ಕೊರೊನಾ ಸೋಂಕಿನ ಪರಿಣಾಮ ವ್ಯಾಪಾರವಿಲ್ಲದೆ ಅಂಗಡಿಗಳು ಭಣಗುಡುತ್ತಿವೆ.</p>.<p>ಕೊರೊನಾ ಭೀತಿಯಿಂದ ಶಾಲಾ, ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಪರಿಣಾಮ ರಕ್ಷಾ ಬಂಧನ ಸಂಭ್ರಮ ಕಳೆದುಕೊಂಡಿದೆ.</p>.<p>ರಕ್ಷಾ ಬಂಧನ ಹೆಣ್ಣು ಮಕ್ಕಳ ವಿಶೇಷ ಹಬ್ಬವಾಗಿದ್ದು, ಸಹೋದರರಿಗೆ ರಾಖಿ ಕಟ್ಟುವ ಮೂಲಕ ಬಾಂಧವ್ಯ ಭದ್ರಗೊಳಿಸುತ್ತಾರೆ.</p>.<p>ಮದುವೆಯಾದ ಹೆಣ್ಣು ಮಕ್ಕಳು ತವರು ಮನೆಗೆ ಆಗಮಿಸಿ ಸಹೋದರರಿಗೆ ರಾಖಿ ಕಟ್ಟಿ ಉಡುಗೊರೆಯ ರೂಪದಲ್ಲಿ ಹಣ, ಸೀರೆ, ಬಳೆ ಪಡೆಯುವ ಸಂಪ್ರದಾಯ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಇದೆ.</p>.<p>ಯರಗೋಳದಲ್ಲಿ 10ಕ್ಕೂಹೆಚ್ಚು ಅಂಗಡಿಗಳಲ್ಲಿ ರಾಖಿ ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿ ಹುಸೇನ್ ಪಾಶ ಮಾತನಾಡಿ, ‘ಕೊರೊನಾ ವೈರಸ್ ಪರಿಣಾಮ ಅಂಗಡಿಯಲ್ಲಿ ರಾಖಿ ಮಾರಾಟ ನಿಲ್ಲಿಸಿದ್ದೇವೆ. ಶಾಲಾ, ಕಾಲೇಜು ವಿದ್ಯಾರ್ಥಿನಿಯರೇ ನಮ್ಮ ಗ್ರಾಹಕರು, ಅವರಿದ್ದರೆ ನಮಗೆ ವ್ಯಾಪಾರ’ ಎಂದು ಹೇಳಿದರು.</p>.<p>‘ಕೊರೊನಾ ಭೀತಿಯಿಂದಾಗಿ ತವರು ಮನೆಗೆ ಆಗಮಿಸಿ ಸಹೋದರನಿಗೆ ರಾಖಿ ಕಟ್ಟಲು ಆಗುತ್ತಿಲ್ಲ’ ಎಂದು ರಾಯಚೂರಿನಲ್ಲಿ ನೆಲೆಸಿರುವ ಯರಗೋಳ ಗ್ರಾಮದ ಅಂಬಿಕಾ ಎಸ್.ಪೂಜಾರಿ ತಿಳಿಸಿದರು.</p>.<p>ತವರು ಮನೆಗೆ ಆಗಮಿಸಿರುವೆ. ಪ್ರತಿವರ್ಷದಂತೆ ಈ ವರ್ಷ ರಕ್ಷಾ ಬಂಧನ ಸಂಭ್ರಮ ಇಲ್ಲ ಎಂದು ಪೂಜಾ ವಿ ತಾರಾಪುರ ತಿಳಿಸಿದರು.</p>.<p>***</p>.<p>ತವರು ಮನೆಗೆ ಆಗಮಿಸಿದ್ದೇನೆ. ಪ್ರತಿವರ್ಷದಂತೆ ಈ ವರ್ಷ ರಕ್ಷಾ ಬಂಧನ ಸಂಭ್ರಮ ಇಲ್ಲ. ಈ ವರ್ಷ ಬರೀ ಭಯ ಆವರಿಸಿದೆ.<br /><em><strong>-ಪೂಜಾ ವಿ, ತಾರಾಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯರಗೋಳ:</strong> ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ಕೊರೊನಾ ಭೀತಿ ಕಾಡಿದೆ. ಅಂಗಡಿಗಳಲ್ಲಿ ಗ್ರಾಹಕರ ಕೊರತೆ ಎದ್ದು ಕಾಣಿಸಿತು. ಪ್ರತಿವರ್ಷ ಬಣ್ಣ ಬಣ್ಣದ ರಾಖಿ ಖರೀದಿಸಲು ಅಂಗಡಿಗಳಲ್ಲಿ ಯುವತಿಯರ ದಂಡು ಕಾಣಿಸುತ್ತಿತ್ತು. ಈ ವರ್ಷ ಕೊರೊನಾ ಸೋಂಕಿನ ಪರಿಣಾಮ ವ್ಯಾಪಾರವಿಲ್ಲದೆ ಅಂಗಡಿಗಳು ಭಣಗುಡುತ್ತಿವೆ.</p>.<p>ಕೊರೊನಾ ಭೀತಿಯಿಂದ ಶಾಲಾ, ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಪರಿಣಾಮ ರಕ್ಷಾ ಬಂಧನ ಸಂಭ್ರಮ ಕಳೆದುಕೊಂಡಿದೆ.</p>.<p>ರಕ್ಷಾ ಬಂಧನ ಹೆಣ್ಣು ಮಕ್ಕಳ ವಿಶೇಷ ಹಬ್ಬವಾಗಿದ್ದು, ಸಹೋದರರಿಗೆ ರಾಖಿ ಕಟ್ಟುವ ಮೂಲಕ ಬಾಂಧವ್ಯ ಭದ್ರಗೊಳಿಸುತ್ತಾರೆ.</p>.<p>ಮದುವೆಯಾದ ಹೆಣ್ಣು ಮಕ್ಕಳು ತವರು ಮನೆಗೆ ಆಗಮಿಸಿ ಸಹೋದರರಿಗೆ ರಾಖಿ ಕಟ್ಟಿ ಉಡುಗೊರೆಯ ರೂಪದಲ್ಲಿ ಹಣ, ಸೀರೆ, ಬಳೆ ಪಡೆಯುವ ಸಂಪ್ರದಾಯ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಇದೆ.</p>.<p>ಯರಗೋಳದಲ್ಲಿ 10ಕ್ಕೂಹೆಚ್ಚು ಅಂಗಡಿಗಳಲ್ಲಿ ರಾಖಿ ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿ ಹುಸೇನ್ ಪಾಶ ಮಾತನಾಡಿ, ‘ಕೊರೊನಾ ವೈರಸ್ ಪರಿಣಾಮ ಅಂಗಡಿಯಲ್ಲಿ ರಾಖಿ ಮಾರಾಟ ನಿಲ್ಲಿಸಿದ್ದೇವೆ. ಶಾಲಾ, ಕಾಲೇಜು ವಿದ್ಯಾರ್ಥಿನಿಯರೇ ನಮ್ಮ ಗ್ರಾಹಕರು, ಅವರಿದ್ದರೆ ನಮಗೆ ವ್ಯಾಪಾರ’ ಎಂದು ಹೇಳಿದರು.</p>.<p>‘ಕೊರೊನಾ ಭೀತಿಯಿಂದಾಗಿ ತವರು ಮನೆಗೆ ಆಗಮಿಸಿ ಸಹೋದರನಿಗೆ ರಾಖಿ ಕಟ್ಟಲು ಆಗುತ್ತಿಲ್ಲ’ ಎಂದು ರಾಯಚೂರಿನಲ್ಲಿ ನೆಲೆಸಿರುವ ಯರಗೋಳ ಗ್ರಾಮದ ಅಂಬಿಕಾ ಎಸ್.ಪೂಜಾರಿ ತಿಳಿಸಿದರು.</p>.<p>ತವರು ಮನೆಗೆ ಆಗಮಿಸಿರುವೆ. ಪ್ರತಿವರ್ಷದಂತೆ ಈ ವರ್ಷ ರಕ್ಷಾ ಬಂಧನ ಸಂಭ್ರಮ ಇಲ್ಲ ಎಂದು ಪೂಜಾ ವಿ ತಾರಾಪುರ ತಿಳಿಸಿದರು.</p>.<p>***</p>.<p>ತವರು ಮನೆಗೆ ಆಗಮಿಸಿದ್ದೇನೆ. ಪ್ರತಿವರ್ಷದಂತೆ ಈ ವರ್ಷ ರಕ್ಷಾ ಬಂಧನ ಸಂಭ್ರಮ ಇಲ್ಲ. ಈ ವರ್ಷ ಬರೀ ಭಯ ಆವರಿಸಿದೆ.<br /><em><strong>-ಪೂಜಾ ವಿ, ತಾರಾಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>