ಶಹಾಪುರ: ‘ಕೋವಿಡ್ ಹಿನ್ನೆಲೆ ಉಂಟಾದ ಹಿನ್ನಡೆಯನ್ನು ಸರಿಪಡಿಸಲು ಕಲಿಕಾ ಚೇತರಿಕೆ ಅನುಷ್ಟಾನಕ್ಕೆ ತರಲಾಗಿದೆ. ಅದರ ಮುಂದುವರಿದ ಭಾಗವಾಗಿ ಕಲಿಕಾ ಹಬ್ಬ ತಾಲ್ಲೂಕಿನ ದಕ್ಷಿಣ ಕ್ಲಸ್ಟರ್ ಶಾಲೆಗಳಲ್ಲಿ ನಡೆಯುತ್ತಿದೆ’ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ರೇಣುಕಾ ಪಾಟೀಲ ತಿಳಿಸಿದರು.
ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.