<p><strong>ಸೈದಾಪುರ:</strong> ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ವಿದ್ಯುತ್ ಅವಘಡದಿಂದ ಬಟ್ಟೆ ಅಂಗಡಿಗೆ ತಗುಲಿದ ಬೆಂಕಿಯಿಂದ ಸುಟ್ಟು ಕರಕಲಾದ ಬಟ್ಟೆಗಳನ್ನು ಮಂಗಳವಾರ ಕೆಲಸಗಾರರು ಸ್ವಚ್ಛಗೊಳಿಸಿದರು.</p>.<p>ಈ ದುರ್ಘಟನೆಯಿಂದ ಇಡೀ ದಿನ ವ್ಯಾಪಾರ ಸ್ತಬ್ಧವಾಗಿ ನೀರವ ಮೌನ ಆವರಿಸಿತ್ತು. ಆದರೆ, ಮಂಗಳವಾರ ಯಥಾ ಪ್ರಕಾರ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ಆರಂಭಿಸಿದ ದೃಶ್ಯ ಕಂಡು ಬಂದಿತು.</p>.<p>ಮಾರ್ಚ್ 27 ರಂದು ಬೆಳಗಿನ ಜಾವ ಸುಮಾರು 5 ಗಂಟೆಗೆ ಕಾಣಿಸಿಕೊಂಡ ಬೆಂಕಿಯು ಮಾ.28 ಮಂಗಳವಾರ ಮಧ್ಯಾಹ್ನ 3 ಗಂಟೆಯವರೆಗೂ ಅಲ್ಲಲ್ಲಿ ಬೆಂಕಿ ಕಾಣಿಸುತ್ತಿರುವುದನ್ನು ಕಂಡ ಅಕ್ಕ-ಪಕ್ಕದ ಜನ ಭಯ ಭೀತರಾಗಿದ್ದರು. ಯಾದಗಿರಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸಂಪೂರ್ಣವಾಗಿ ಬೆಂಕಿ ನಂದಿಸಿದರು. ಆದರೆ, ಬೆಂಕಿ ಕೆನ್ನಾಲಿಗೆ ಸಿಲುಕಿದ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿದೆ.</p>.<p>‘ಬಟ್ಟೆ ಅಂಗಡಿಯಲ್ಲಿನ ಪಾಲಿಸ್ಟರ್ ಬಟ್ಟೆಗಳಿಗೆ ಹೊತ್ತಿಕೊಂಡ ಬೆಂಕಿಯ ಕಾವು ಸುಮಾರು 2 ದಿನಗಳವರೆಗೂ ಇರುವ ಸಂಭವವಿರುತ್ತದೆ’ ಎಂದು ಅಗ್ನಿ ಶಾಮಕ ದಳದ ಸಿಬ್ಬಂದಿ ತಿಳಿಸಿದರು.</p>.<p>ಬಟ್ಟೆ ಅಂಗಡಿಯ ಮೇಲ್ಮಹಡಿಯಲ್ಲಿದ್ದ ಸುಮಾರು ₹3 ರಿಂದ 4 ಕೋಟಿ ಮೌಲ್ಯದ ಬಟ್ಟೆಗಳು ಸುಟ್ಟು ಹೋಗಿದ್ದವು. ಕೆಳ ಮಹಡಿಯಲ್ಲಿದ್ದ ಶೇ 10 ರಷ್ಟು ಬಟ್ಟೆಗಳನ್ನು ತೆಗೆದು ಬೇರೆಡೆ ಸಾಗಿಸಲಾಯಿತು.</p>.<p>ಮೌನಕ್ಕೆ ಜಾರಿದ ಕುಟುಂಬಸ್ಥರು:</p>.<p>ಕುಟುಂಬದ ಆಧಾರ ಸ್ತಂಭವಾಗಿದ್ದ ಕೆ.ಬಿ.ರಾಘವೇಂದ್ರ ಹಾಗೂ ಪತ್ನಿ ಕೆ.ಬಿ.ಶಿಲ್ಪಾ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಅವರ ಅಕಾಲಿಕ ಮರಣವು ಕುಟುಂಬಸ್ಥರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನೂ ಪ್ರಾಣಾಪಯದಿಂದ ಬದುಕುಳಿದ ತಂದೆ-ತಾಯಿ ಹಿರಿಯ ಜೀವಗಳು ಮೌನಕ್ಕೆ ಜಾರಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡ ರಾಘವೇಂದ್ರರವರ ಇಬ್ಬರು ಮಕ್ಕಳು ಅಪ್ಪ. ಅಮ್ಮ ಮತ್ತೆ ಮರಳಿ ಬರುತ್ತಾರೆ ಎಂಬ ಆಸೆ ಭಾವನೆಯೊಂದಿಗೆ ಕಾಲ ಕಳೆಯುತ್ತಿದ್ದಾರೆ.</p>.<p>****</p>.<p>ಮಾ.27ರಂದು ನಡೆದ ವಿದ್ಯುತ್ ಅವಘಡದಿಂದ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಹೆಚ್ಚಿನ ವಿಚಾರಣೆ ನಂತರ ನಿಖರವಾದ ಮಾಹಿತಿ ದೊರಕಲಿದೆ. ಈ ಘಟನೆಯಲ್ಲಿ ಸುಮಾರು ₹3 ರಿಂದ 4 ಕೋಟಿ ಮೌಲ್ಯದ ಬಟ್ಟೆಗಳು ಸುಟ್ಟು ಹೋಗಿವೆ ಎಂದು ಅಂದಾಜಿಸಲಾಗಿದೆ</p>.<p><strong>ಕಾಳಪ್ಪ ಬಡಿಗೇರ್, ಪಿಐ, ಸೈದಾಪುರ ಪೊಲೀಸ್ ಠಾಣೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೈದಾಪುರ:</strong> ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ವಿದ್ಯುತ್ ಅವಘಡದಿಂದ ಬಟ್ಟೆ ಅಂಗಡಿಗೆ ತಗುಲಿದ ಬೆಂಕಿಯಿಂದ ಸುಟ್ಟು ಕರಕಲಾದ ಬಟ್ಟೆಗಳನ್ನು ಮಂಗಳವಾರ ಕೆಲಸಗಾರರು ಸ್ವಚ್ಛಗೊಳಿಸಿದರು.</p>.<p>ಈ ದುರ್ಘಟನೆಯಿಂದ ಇಡೀ ದಿನ ವ್ಯಾಪಾರ ಸ್ತಬ್ಧವಾಗಿ ನೀರವ ಮೌನ ಆವರಿಸಿತ್ತು. ಆದರೆ, ಮಂಗಳವಾರ ಯಥಾ ಪ್ರಕಾರ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ಆರಂಭಿಸಿದ ದೃಶ್ಯ ಕಂಡು ಬಂದಿತು.</p>.<p>ಮಾರ್ಚ್ 27 ರಂದು ಬೆಳಗಿನ ಜಾವ ಸುಮಾರು 5 ಗಂಟೆಗೆ ಕಾಣಿಸಿಕೊಂಡ ಬೆಂಕಿಯು ಮಾ.28 ಮಂಗಳವಾರ ಮಧ್ಯಾಹ್ನ 3 ಗಂಟೆಯವರೆಗೂ ಅಲ್ಲಲ್ಲಿ ಬೆಂಕಿ ಕಾಣಿಸುತ್ತಿರುವುದನ್ನು ಕಂಡ ಅಕ್ಕ-ಪಕ್ಕದ ಜನ ಭಯ ಭೀತರಾಗಿದ್ದರು. ಯಾದಗಿರಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸಂಪೂರ್ಣವಾಗಿ ಬೆಂಕಿ ನಂದಿಸಿದರು. ಆದರೆ, ಬೆಂಕಿ ಕೆನ್ನಾಲಿಗೆ ಸಿಲುಕಿದ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿದೆ.</p>.<p>‘ಬಟ್ಟೆ ಅಂಗಡಿಯಲ್ಲಿನ ಪಾಲಿಸ್ಟರ್ ಬಟ್ಟೆಗಳಿಗೆ ಹೊತ್ತಿಕೊಂಡ ಬೆಂಕಿಯ ಕಾವು ಸುಮಾರು 2 ದಿನಗಳವರೆಗೂ ಇರುವ ಸಂಭವವಿರುತ್ತದೆ’ ಎಂದು ಅಗ್ನಿ ಶಾಮಕ ದಳದ ಸಿಬ್ಬಂದಿ ತಿಳಿಸಿದರು.</p>.<p>ಬಟ್ಟೆ ಅಂಗಡಿಯ ಮೇಲ್ಮಹಡಿಯಲ್ಲಿದ್ದ ಸುಮಾರು ₹3 ರಿಂದ 4 ಕೋಟಿ ಮೌಲ್ಯದ ಬಟ್ಟೆಗಳು ಸುಟ್ಟು ಹೋಗಿದ್ದವು. ಕೆಳ ಮಹಡಿಯಲ್ಲಿದ್ದ ಶೇ 10 ರಷ್ಟು ಬಟ್ಟೆಗಳನ್ನು ತೆಗೆದು ಬೇರೆಡೆ ಸಾಗಿಸಲಾಯಿತು.</p>.<p>ಮೌನಕ್ಕೆ ಜಾರಿದ ಕುಟುಂಬಸ್ಥರು:</p>.<p>ಕುಟುಂಬದ ಆಧಾರ ಸ್ತಂಭವಾಗಿದ್ದ ಕೆ.ಬಿ.ರಾಘವೇಂದ್ರ ಹಾಗೂ ಪತ್ನಿ ಕೆ.ಬಿ.ಶಿಲ್ಪಾ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಅವರ ಅಕಾಲಿಕ ಮರಣವು ಕುಟುಂಬಸ್ಥರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನೂ ಪ್ರಾಣಾಪಯದಿಂದ ಬದುಕುಳಿದ ತಂದೆ-ತಾಯಿ ಹಿರಿಯ ಜೀವಗಳು ಮೌನಕ್ಕೆ ಜಾರಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡ ರಾಘವೇಂದ್ರರವರ ಇಬ್ಬರು ಮಕ್ಕಳು ಅಪ್ಪ. ಅಮ್ಮ ಮತ್ತೆ ಮರಳಿ ಬರುತ್ತಾರೆ ಎಂಬ ಆಸೆ ಭಾವನೆಯೊಂದಿಗೆ ಕಾಲ ಕಳೆಯುತ್ತಿದ್ದಾರೆ.</p>.<p>****</p>.<p>ಮಾ.27ರಂದು ನಡೆದ ವಿದ್ಯುತ್ ಅವಘಡದಿಂದ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಹೆಚ್ಚಿನ ವಿಚಾರಣೆ ನಂತರ ನಿಖರವಾದ ಮಾಹಿತಿ ದೊರಕಲಿದೆ. ಈ ಘಟನೆಯಲ್ಲಿ ಸುಮಾರು ₹3 ರಿಂದ 4 ಕೋಟಿ ಮೌಲ್ಯದ ಬಟ್ಟೆಗಳು ಸುಟ್ಟು ಹೋಗಿವೆ ಎಂದು ಅಂದಾಜಿಸಲಾಗಿದೆ</p>.<p><strong>ಕಾಳಪ್ಪ ಬಡಿಗೇರ್, ಪಿಐ, ಸೈದಾಪುರ ಪೊಲೀಸ್ ಠಾಣೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>