<p><strong>ಶಹಾಪುರ: </strong>ಸಂಕ್ರಾಂತಿಯ ದಿನ ನಡೆಯುವ ಭೀಮರಾಯನಗುಡಿಯ ಬಲಭೀಮೇಶ್ವರ ಮತ್ತು ದಿಗ್ಗಿ ಸಂಗಮೇಶ್ವರ ದೇವರ ಗಂಗಸ್ನಾನ ಮೆರವಣಿಗೆ, ಜೋಡು ಪಲ್ಲಕ್ಕಿ ಉತ್ಸವ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ತಾಲ್ಲೂಕು ಆಡಳಿತ ರದ್ದುಪಡಿಸಿದೆ.</p>.<p>ಮಕರ ಸಂಕ್ರಾತಿ ದಿನ ಬೆಳಿಗ್ಗೆ ತಾಲ್ಲೂಕಿನ ಹುರಸಗುಂಡಗಿ ಗ್ರಾಮದಭೀಮಾ ನದಿಗೆ ಗಂಗಾಸ್ನಾನಕ್ಕೆ ತೆರಳಲಾಗುತ್ತಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಜೆ ಬಲಭೀಮೇಶ್ವರ ಹಾಗೂ ಸಂಗಮೇಶ್ವರ ಅವರ ಜೋಡು ಪಲ್ಲಕ್ಕಿ ಉತ್ಸವ ನಡೆಯುತ್ತಿತ್ತು. ಆಗ ರಾತ್ರಿ ಇಡೀ ಪಂಜಿನ ಮೆರವಣಿಗೆ ನೋಡುವುದು ಭಕ್ತರಿಗೆ ಸಂಭ್ರಮವಾಗುತ್ತಿತ್ತು.</p>.<p>ಅದರೆ ಸರ್ಕಾರ ನಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಜಾತ್ರೆ, ಉತ್ಸವ ರದ್ದುಪಡಿಸಿದೆ. ಒಲ್ಲದ ಮನಸ್ಸಿನಿಂದ ನಾವೆಲ್ಲರೂ ಆದೇಶವನ್ನು ಅನಿವಾರ್ಯವಾಗಿ ಸ್ವೀಕರಿಸುವಂತೆ ಆಗಿದೆ ಎನ್ನುತ್ತಾರೆ ಭಕ್ತರು. ಜಾತ್ರೆ ರದ್ದುಪಡಿಸಿದ ಕಾರಣ ಅಂಗಡಿ, ಮುಂಗಟ್ಟುಗಳನ್ನು ಹಾಕುವಂತಿಲ್ಲ. ಆದ್ದರಿಂದ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ.</p>.<p class="Subhead"><strong>ಸಂಕ್ರಾಂತಿ ಸ್ನಾನ: </strong>ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ಸಂಕ್ರಾಂತಿ ಅಂಗವಾಗಿ ಜನ ಪುಣ್ಯ ಸ್ನಾನ ಮಾಡಿದರು. ಕೋವಿಡ್ ನಿಯಮ ಪಾಲನೆಯಾಗಲಿಲ್ಲ. ನದಿಯ ಸೇತುವೆ ಕೆಳಗೆ ಕೆಲವರು ಜೂಜಾಟದಲ್ಲಿ ತೊಡಗಿದ್ದರು. ಸಂಜೆ ಪೊಲೀಸರು ಬಂದು ಗುಂಪು ಚದುರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ: </strong>ಸಂಕ್ರಾಂತಿಯ ದಿನ ನಡೆಯುವ ಭೀಮರಾಯನಗುಡಿಯ ಬಲಭೀಮೇಶ್ವರ ಮತ್ತು ದಿಗ್ಗಿ ಸಂಗಮೇಶ್ವರ ದೇವರ ಗಂಗಸ್ನಾನ ಮೆರವಣಿಗೆ, ಜೋಡು ಪಲ್ಲಕ್ಕಿ ಉತ್ಸವ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ತಾಲ್ಲೂಕು ಆಡಳಿತ ರದ್ದುಪಡಿಸಿದೆ.</p>.<p>ಮಕರ ಸಂಕ್ರಾತಿ ದಿನ ಬೆಳಿಗ್ಗೆ ತಾಲ್ಲೂಕಿನ ಹುರಸಗುಂಡಗಿ ಗ್ರಾಮದಭೀಮಾ ನದಿಗೆ ಗಂಗಾಸ್ನಾನಕ್ಕೆ ತೆರಳಲಾಗುತ್ತಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಜೆ ಬಲಭೀಮೇಶ್ವರ ಹಾಗೂ ಸಂಗಮೇಶ್ವರ ಅವರ ಜೋಡು ಪಲ್ಲಕ್ಕಿ ಉತ್ಸವ ನಡೆಯುತ್ತಿತ್ತು. ಆಗ ರಾತ್ರಿ ಇಡೀ ಪಂಜಿನ ಮೆರವಣಿಗೆ ನೋಡುವುದು ಭಕ್ತರಿಗೆ ಸಂಭ್ರಮವಾಗುತ್ತಿತ್ತು.</p>.<p>ಅದರೆ ಸರ್ಕಾರ ನಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಜಾತ್ರೆ, ಉತ್ಸವ ರದ್ದುಪಡಿಸಿದೆ. ಒಲ್ಲದ ಮನಸ್ಸಿನಿಂದ ನಾವೆಲ್ಲರೂ ಆದೇಶವನ್ನು ಅನಿವಾರ್ಯವಾಗಿ ಸ್ವೀಕರಿಸುವಂತೆ ಆಗಿದೆ ಎನ್ನುತ್ತಾರೆ ಭಕ್ತರು. ಜಾತ್ರೆ ರದ್ದುಪಡಿಸಿದ ಕಾರಣ ಅಂಗಡಿ, ಮುಂಗಟ್ಟುಗಳನ್ನು ಹಾಕುವಂತಿಲ್ಲ. ಆದ್ದರಿಂದ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ.</p>.<p class="Subhead"><strong>ಸಂಕ್ರಾಂತಿ ಸ್ನಾನ: </strong>ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ಸಂಕ್ರಾಂತಿ ಅಂಗವಾಗಿ ಜನ ಪುಣ್ಯ ಸ್ನಾನ ಮಾಡಿದರು. ಕೋವಿಡ್ ನಿಯಮ ಪಾಲನೆಯಾಗಲಿಲ್ಲ. ನದಿಯ ಸೇತುವೆ ಕೆಳಗೆ ಕೆಲವರು ಜೂಜಾಟದಲ್ಲಿ ತೊಡಗಿದ್ದರು. ಸಂಜೆ ಪೊಲೀಸರು ಬಂದು ಗುಂಪು ಚದುರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>