<p>ಯಾದಗಿರಿ: ಸರ್ಕಾರದ ಎಸ್ಸಿ, ಎಸ್ಟಿ ಯೋಜನೆಯಡಿ ಮನೆ ಹಾಗೂ ನಿವೇಶನಗಳನ್ನು ಕೊಡಿಸುವುದಾಗಿ 13 ಮಂದಿಗೆ ಆಮಿಷವೊಡ್ಡಿ, ₹31.45 ಲಕ್ಷ ಪಡೆದು ವಂಚಿಸಿದ್ದಕ್ಕೆ ಹಣ ವಾಪಸ್ ಕೇಳಲು ಹೋದಾದ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದಡಿ ಒಂದೇ ಕುಟುಂಬದ ಏಳು ಮಂದಿ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ರೂಪಾ ಬಡಿಗೇರಿ ಅವರು ನೀಡಿದ ದೂರಿನ ಅನ್ವಯ ಶಹಾಪುರದ ವಿಜಯಲಕ್ಷ್ಮಿ ಹಾಲಸ್ವಾಮಿ, ಹಾಲಸ್ವಾಮಿ, ನರಸಣ್ಣಗೌಡ, ಉರಕುಂದಯ್ಯ, ರಂಗಣ್ಣ ಸೇರಿ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ವಿಜಯಲಕ್ಷ್ಮಿ ಅವರು ತನಗೆ ಬೆಂಗಳೂರಿನಲ್ಲಿ ಎಸ್ಸಿ, ಎಸ್ಟಿ ಪ್ರಧಾನ ಕಚೇರಿಯಲ್ಲಿ ಅಧಿಕಾರಿಗಳ ಪರಿಚಯವಿದೆ. ಸರ್ಕಾರದ ಎಸ್ಸಿ, ಎಸ್ಟಿ ಯೋಜನೆಯಡಿ ಮನೆ, ನಿವೇಶನಗಳನ್ನು ಕೊಡಿಸುವುದಾಗಿ ರೂಪಾ ಅವರನ್ನು ನಂಬಿಸಿದ್ದರು. ರೂಪಾ ಸೇರಿ 13 ಮಹಿಳೆಯರು ವಿಜಯಲಕ್ಷ್ಮಿ ಅವರ ಮಾತು ನಂಬಿ ಹಂತ–ಹಂತವಾಗಿ ₹31.45 ಲಕ್ಷ ನೀಡಿದ್ದರು. ವರ್ಷಗಳು ಕಳೆದರೂ ಮನೆ, ನಿವೇಶನ ಕೊಡಿಸಲಿಲ್ಲ. ಕೊಟ್ಟ ಹಣವನ್ನು ವಾಪಸ್ ಕೇಳಿದಾಗ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.</p>.<p>ಆರೋಪಿ ವಿಜಯಲಕ್ಷ್ಮಿ ಅವರು ಬೆಂಗಳೂರಿನಲ್ಲಿ ಇರುವ ಅಧಿಕಾರಿಗಳಿಗೆ ಅಡ್ವಾನ್ಸ್ ಕೊಡಬೇಕಿದೆ ಎಂದು ಮುಂಗಡವಾಗಿ ₹ 19,600, ₹ 45 ಸಾವಿರದಂತೆ 13 ಮಹಿಳೆಯರಿಂದ ಹಣ ಪಡೆದಿದ್ದಾರೆ. ಆಕಾಂಕ್ಷಿತ ಮಹಿಳೆಯರು ಫೋನ್ ಪೇ ಮೂಲಕ ₹ 16.45 ಲಕ್ಷ ಹಾಗೂ ಖುದ್ದಾಗಿ ಭೇಟಿ ಮಾಡಿ ₹ 15 ಲಕ್ಷ ಸೇರಿ ಒಟ್ಟು ₹ 31.45 ಲಕ್ಷ ಕೊಟ್ಟಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<p class="Briefhead">ಲಾರಿ ಡಿಕ್ಕಿ: ಬೈಕ್ ಸವಾರ ಸಾವು</p>.<p>ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟದ್ದಾರೆ.</p>.<p>ಶಹಾಪುರ– ಸುರಪುರ ರಸ್ತೆಯಲ್ಲಿ ಲಾರಿ ಡಿಕ್ಕಿಯಿಂದ ಮದರಕಲ್ ಗ್ರಾಮದ ಸೋಪಿಲಾಲ ಪೀರಸಾಬ್ (37) ಮೃತಪಟ್ಟವರು. ಲಾರಿ ಚಾಲಕ ಬಲವಂತ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸೋಪಿಲಾಲ ಅವರು ಶಹಾಪುರ ಕಡೆಯಿಂದ ಬೈಕ್ ಮೇಲೆ ತೆರಳುತ್ತಿದ್ದರು. ಎದುರಿನಿಂದ ವೇಗವಾಗಿ ಮತ್ತು ಅಲಕ್ಷತನದಿಂದ ಲಾರಿ ಚಲಾಯಿಸಿಕೊಂಡು ಬಂದ ಬಲವಂತ ಸಿಂಗ್ ಅವರು ಸೋಪಿಲಾಲ ಓಡಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದರು.</p>.<p>ಬೈಕ್ ಸಮೇತ ಕೆಳಗೆ ಬಿದ್ದ ಸೋಪಿಲಾಲ ಅವರ ಹಣೆ, ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದವು. ಬಲಗಾಲಿನ ಮೊಳಕಾಲಿನ ಕೆಳ ಭಾಗ ಮುರಿದಂತಾಗಿ ತರುಚಿದ ಗಾಯವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ಸರ್ಕಾರದ ಎಸ್ಸಿ, ಎಸ್ಟಿ ಯೋಜನೆಯಡಿ ಮನೆ ಹಾಗೂ ನಿವೇಶನಗಳನ್ನು ಕೊಡಿಸುವುದಾಗಿ 13 ಮಂದಿಗೆ ಆಮಿಷವೊಡ್ಡಿ, ₹31.45 ಲಕ್ಷ ಪಡೆದು ವಂಚಿಸಿದ್ದಕ್ಕೆ ಹಣ ವಾಪಸ್ ಕೇಳಲು ಹೋದಾದ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದಡಿ ಒಂದೇ ಕುಟುಂಬದ ಏಳು ಮಂದಿ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ರೂಪಾ ಬಡಿಗೇರಿ ಅವರು ನೀಡಿದ ದೂರಿನ ಅನ್ವಯ ಶಹಾಪುರದ ವಿಜಯಲಕ್ಷ್ಮಿ ಹಾಲಸ್ವಾಮಿ, ಹಾಲಸ್ವಾಮಿ, ನರಸಣ್ಣಗೌಡ, ಉರಕುಂದಯ್ಯ, ರಂಗಣ್ಣ ಸೇರಿ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ವಿಜಯಲಕ್ಷ್ಮಿ ಅವರು ತನಗೆ ಬೆಂಗಳೂರಿನಲ್ಲಿ ಎಸ್ಸಿ, ಎಸ್ಟಿ ಪ್ರಧಾನ ಕಚೇರಿಯಲ್ಲಿ ಅಧಿಕಾರಿಗಳ ಪರಿಚಯವಿದೆ. ಸರ್ಕಾರದ ಎಸ್ಸಿ, ಎಸ್ಟಿ ಯೋಜನೆಯಡಿ ಮನೆ, ನಿವೇಶನಗಳನ್ನು ಕೊಡಿಸುವುದಾಗಿ ರೂಪಾ ಅವರನ್ನು ನಂಬಿಸಿದ್ದರು. ರೂಪಾ ಸೇರಿ 13 ಮಹಿಳೆಯರು ವಿಜಯಲಕ್ಷ್ಮಿ ಅವರ ಮಾತು ನಂಬಿ ಹಂತ–ಹಂತವಾಗಿ ₹31.45 ಲಕ್ಷ ನೀಡಿದ್ದರು. ವರ್ಷಗಳು ಕಳೆದರೂ ಮನೆ, ನಿವೇಶನ ಕೊಡಿಸಲಿಲ್ಲ. ಕೊಟ್ಟ ಹಣವನ್ನು ವಾಪಸ್ ಕೇಳಿದಾಗ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.</p>.<p>ಆರೋಪಿ ವಿಜಯಲಕ್ಷ್ಮಿ ಅವರು ಬೆಂಗಳೂರಿನಲ್ಲಿ ಇರುವ ಅಧಿಕಾರಿಗಳಿಗೆ ಅಡ್ವಾನ್ಸ್ ಕೊಡಬೇಕಿದೆ ಎಂದು ಮುಂಗಡವಾಗಿ ₹ 19,600, ₹ 45 ಸಾವಿರದಂತೆ 13 ಮಹಿಳೆಯರಿಂದ ಹಣ ಪಡೆದಿದ್ದಾರೆ. ಆಕಾಂಕ್ಷಿತ ಮಹಿಳೆಯರು ಫೋನ್ ಪೇ ಮೂಲಕ ₹ 16.45 ಲಕ್ಷ ಹಾಗೂ ಖುದ್ದಾಗಿ ಭೇಟಿ ಮಾಡಿ ₹ 15 ಲಕ್ಷ ಸೇರಿ ಒಟ್ಟು ₹ 31.45 ಲಕ್ಷ ಕೊಟ್ಟಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<p class="Briefhead">ಲಾರಿ ಡಿಕ್ಕಿ: ಬೈಕ್ ಸವಾರ ಸಾವು</p>.<p>ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟದ್ದಾರೆ.</p>.<p>ಶಹಾಪುರ– ಸುರಪುರ ರಸ್ತೆಯಲ್ಲಿ ಲಾರಿ ಡಿಕ್ಕಿಯಿಂದ ಮದರಕಲ್ ಗ್ರಾಮದ ಸೋಪಿಲಾಲ ಪೀರಸಾಬ್ (37) ಮೃತಪಟ್ಟವರು. ಲಾರಿ ಚಾಲಕ ಬಲವಂತ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸೋಪಿಲಾಲ ಅವರು ಶಹಾಪುರ ಕಡೆಯಿಂದ ಬೈಕ್ ಮೇಲೆ ತೆರಳುತ್ತಿದ್ದರು. ಎದುರಿನಿಂದ ವೇಗವಾಗಿ ಮತ್ತು ಅಲಕ್ಷತನದಿಂದ ಲಾರಿ ಚಲಾಯಿಸಿಕೊಂಡು ಬಂದ ಬಲವಂತ ಸಿಂಗ್ ಅವರು ಸೋಪಿಲಾಲ ಓಡಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದರು.</p>.<p>ಬೈಕ್ ಸಮೇತ ಕೆಳಗೆ ಬಿದ್ದ ಸೋಪಿಲಾಲ ಅವರ ಹಣೆ, ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದವು. ಬಲಗಾಲಿನ ಮೊಳಕಾಲಿನ ಕೆಳ ಭಾಗ ಮುರಿದಂತಾಗಿ ತರುಚಿದ ಗಾಯವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>