ಸಪ್ತ ತೀರ್ಥಗಳು: ಪಾಂಡವ ತೀರ್ಥ, ರಾಮತೀರ್ಥ, ಲಕ್ಷ್ಮಣ ತೀರ್ಥ, ಮರಳು ತೀರ್ಥ, ಹಾಲು ತೀರ್ಥ, ಸಕ್ಕರೆ ತೀರ್ಥ ಮತ್ತು ಸಂಗಮ ತೀರ್ಥ ಎಂಬ ಏಳು ತೀರ್ಥಗಳಿಂದ ಮುದನೂರು ಪ್ರಸಿದ್ಧಿ ಪಡೆದಿದೆ. ಇಲ್ಲಿನ ಸಪ್ತ ತೀರ್ಥಗಳಲ್ಲಿ ಒಂದು ತೀರ್ಥದಲ್ಲಿ ಹಾಲಿನಂತೆ ನೀರು ಇರುವುದರಿಂದ ಅದಕ್ಕೆ ಹಾಲು ತೀರ್ಥ, ಸಕ್ಕರೆಯಂತೆ ನೀರು ಸಿಹಿಯಾಗಿರುವುದರಿಂದ ಅದಕ್ಕೆ ಸಕ್ಕರೆ ತೀರ್ಥವೆಂದು ಹೆಸರಿಸಲಾಗಿದೆ.