<p><strong>ಶಹಾಪುರ:</strong> ತಾಲ್ಲೂಕಿನ ಗೋಗಿ (ಕೆ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಅಕ್ಕನಾಗಮ್ಮ ಹಾಗೂ ಲಕ್ಷ್ಮಿಬಾಯಿ ಅವರು ಮನೆ ಮನೆ ಭೇಟಿ ನೀಡಿ ತೆರಿಗೆ ನೀಡಿದ ಕುಟುಂಬಸ್ಥರಿಗೆ ರಕ್ಷಾಬಂಧನ ಅಂಗವಾಗಿ ರಾಖಿ ಕಟ್ಟುವ ಮೂಲಕ ತೆರಿಗೆ ಪಾವತಿಯ ಅಭಿಯಾನ ಶುರು ಮಾಡಿದ್ದಾರೆ.</p>.<p>ಗೋಗಿ(ಕೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಒಂದೇ ದಿನದಲ್ಲಿ ₹ 2.40 ಲಕ್ಷ ಕರವಸೂಲಿ ಮಾಡಲಾಗಿದೆ. ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಕರ ಪಾವತಿಸಲು ಆಗಮಿಸುತ್ತಿದ್ದಾರೆ. ಬಾಕಿ ಕರವನ್ನು ಪಾವತಿಸಿದ ಕುಟುಂಬದ ಸದಸ್ಯರಿಗೆ ಸನ್ಮಾನಿಸಲಾಯಿತು ಎಂದು ಪಿಡಿಒ ಲಕ್ಷ್ಮಿಬಾಯಿ ತಿಳಿಸಿದರು.</p>.<p>‘ಸ್ಥಳೀಯ ಅನುದಾನ ಲಭ್ಯವಾಗದಿದ್ದರೆ ಅಭಿವೃದ್ಧಿ ಕಾಮಗಾರಿ ಕುಂಠಿತವಾಗುತ್ತವೆ. ಜನತೆಗೆ ತೆರಿಗೆ ಪಾವತಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಬಾಕಿ ಉಳಿದ ತೆರಿಗೆಯನ್ನು ಪಾವತಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಶರಬೈ ಮನವಿ ಮಾಡಿದರು.</p>.<p>ಗ್ರಾಪಂ ಸಿಬ್ಬಂದಿಗಳಾದ ಬಸಲಿಂಗಪ್ಪ, ಸಿದ್ದಲಿಂಗರೆಡ್ಡಿ, ಭೀಮರೆಡ್ಡಿ, ಗೀತಾ, ವಿಜಯಲಕ್ಷ್ಮಿ, ನಿರ್ಮಲಾ, ಚಂದ್ರಕಲಾ ಭಾಗವಹಿಸಿದ್ದರು.</p>.<div><blockquote>ಕರ ಬಾಕಿ ಇರುವ ಮನೆ ಮನೆಗೆ ಭೇಟಿ ನೀಡಿದೆ. ತೆರಿಗೆ ಪಾವತಿಸಿದ ಕುಟುಂಬದ ಮುಸ್ಥಸ್ಥರಿಗೆ ಸನ್ಮಾನಿಸಲಾಗುತ್ತಿದೆ</blockquote><span class="attribution">- ಬಸವರಾಜ ಶರಬೈ, ತಾಲ್ಲೂಕು ಪಂಚಾಯಿತಿ ಇಒ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ:</strong> ತಾಲ್ಲೂಕಿನ ಗೋಗಿ (ಕೆ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಅಕ್ಕನಾಗಮ್ಮ ಹಾಗೂ ಲಕ್ಷ್ಮಿಬಾಯಿ ಅವರು ಮನೆ ಮನೆ ಭೇಟಿ ನೀಡಿ ತೆರಿಗೆ ನೀಡಿದ ಕುಟುಂಬಸ್ಥರಿಗೆ ರಕ್ಷಾಬಂಧನ ಅಂಗವಾಗಿ ರಾಖಿ ಕಟ್ಟುವ ಮೂಲಕ ತೆರಿಗೆ ಪಾವತಿಯ ಅಭಿಯಾನ ಶುರು ಮಾಡಿದ್ದಾರೆ.</p>.<p>ಗೋಗಿ(ಕೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಒಂದೇ ದಿನದಲ್ಲಿ ₹ 2.40 ಲಕ್ಷ ಕರವಸೂಲಿ ಮಾಡಲಾಗಿದೆ. ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಕರ ಪಾವತಿಸಲು ಆಗಮಿಸುತ್ತಿದ್ದಾರೆ. ಬಾಕಿ ಕರವನ್ನು ಪಾವತಿಸಿದ ಕುಟುಂಬದ ಸದಸ್ಯರಿಗೆ ಸನ್ಮಾನಿಸಲಾಯಿತು ಎಂದು ಪಿಡಿಒ ಲಕ್ಷ್ಮಿಬಾಯಿ ತಿಳಿಸಿದರು.</p>.<p>‘ಸ್ಥಳೀಯ ಅನುದಾನ ಲಭ್ಯವಾಗದಿದ್ದರೆ ಅಭಿವೃದ್ಧಿ ಕಾಮಗಾರಿ ಕುಂಠಿತವಾಗುತ್ತವೆ. ಜನತೆಗೆ ತೆರಿಗೆ ಪಾವತಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಬಾಕಿ ಉಳಿದ ತೆರಿಗೆಯನ್ನು ಪಾವತಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಶರಬೈ ಮನವಿ ಮಾಡಿದರು.</p>.<p>ಗ್ರಾಪಂ ಸಿಬ್ಬಂದಿಗಳಾದ ಬಸಲಿಂಗಪ್ಪ, ಸಿದ್ದಲಿಂಗರೆಡ್ಡಿ, ಭೀಮರೆಡ್ಡಿ, ಗೀತಾ, ವಿಜಯಲಕ್ಷ್ಮಿ, ನಿರ್ಮಲಾ, ಚಂದ್ರಕಲಾ ಭಾಗವಹಿಸಿದ್ದರು.</p>.<div><blockquote>ಕರ ಬಾಕಿ ಇರುವ ಮನೆ ಮನೆಗೆ ಭೇಟಿ ನೀಡಿದೆ. ತೆರಿಗೆ ಪಾವತಿಸಿದ ಕುಟುಂಬದ ಮುಸ್ಥಸ್ಥರಿಗೆ ಸನ್ಮಾನಿಸಲಾಗುತ್ತಿದೆ</blockquote><span class="attribution">- ಬಸವರಾಜ ಶರಬೈ, ತಾಲ್ಲೂಕು ಪಂಚಾಯಿತಿ ಇಒ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>