ಯಾದಗಿರಿ ತಾಲ್ಲೂಕು ವೈದ್ಯಾಧಿಕಾರಿ ನೇತೃತ್ವದಲ್ಲಿ ಈಚೆಗೆ ಪರವಾನಗಿ ಇಲ್ಲದೇ ಕ್ಲಿನಿಕ್ಗಳಿಗೆ ಭೇಟಿ ನೀಡಿ ಪರವಾನಗಿ ಪಡೆದುಕೊಳ್ಳಲು ಜಾಗೃತಿ ಮೂಡಿಸಲಾಯಿತು
ಯಾದಗಿರಿ ನಗರ ಸೇರಿ ತಾಲ್ಲೂಕು ವ್ಯಾಪ್ತಿಯ 10 ಅನಧಿಕೃತ ಲ್ಯಾಬ್ ಕ್ಲಿನಿಕ್ಗಳ ಮೇಲೆ ದಾಳಿ ಮಾಡಿ ನೋಟಿಸ್ ನೀಡಲಾಗಿದೆ. ಪರವಾನಗಿ ಪಡೆದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಗುರುಮಠಕಲ್ ತಾಲ್ಲೂಕಿನಲ್ಲಿಯೂ ದಾಳಿ ಮಾಡಿ ನೋಟಿಸ್ ನೀಡಲಾಗುವುದು. ಸಂಬಂಧಿಸಿದವರು ಪರವಾನಗಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಕ್ರಮಕ್ಕೆ ಶಿಫಾರಸು ಮಾಡಲಾಗುವುದು.
-ಡಾ.ಹಣಮಂತರೆಡ್ಡಿ ತಾಲ್ಲೂಕು ವೈದ್ಯಾಧಿಕಾರಿ ಯಾದಗಿರಿ
ಕೆಪಿಎಂಇ ಕಾಯ್ದೆ ಅಡಿ ಅನಧಿಕೃತ ಆಸ್ಪತ್ರೆ ಕ್ಲಿನಿಕ್ ಪ್ರಯೋಗಾಲಯಗಳು ಹಾಗೂ ನಕಲಿ ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಮೇಲಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಅನಧಿಕೃತ ಕೇಂದ್ರದ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.
- ಡಾ.ರಮೇಶ ಗುತ್ತೆದಾರ ತಾಲ್ಲೂಕು ವೈದ್ಯಾಧಿಕಾರಿ ಶಹಾಪುರ
ವೈದ್ಯಕೀಯ ಪದವಿ ಪಡೆದ ವೈದ್ಯರು ಮತ್ತು ಸೂಕ್ತ ಪ್ರಮಾಣ ಪತ್ರ ಹೊಂದಿರುವವರು ಲ್ಯಾಬ್ ನಡೆಸುತ್ತಿದ್ದರೆ ಅಂತವರಿಗೆ ನೋಂದಣಿ ಮಾಡಿಸಿಕೊಳ್ಳಲು 10 ದಿನ ಕಾಲಾವಕಾಶ ನೀಡಲಾಗುತ್ತದೆ. ಅನರ್ಹರ ಆಸ್ಪತ್ರೆ ಲ್ಯಾಬ್ಗಳನ್ನು ಬಂದ್ ಮಾಡಿ ಅವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ.
-ಡಾ.ರಾಜಾ ವೆಂಕಪ್ಪನಾಯಕ ಸುರಪುರ ತಾಲ್ಲೂಕು ವೈದ್ಯಾಧಿಕಾರಿ
ಗ್ರಾಮೀಣ ಸೇವೆ ನೀಡುತ್ತಿರುವ ಆರ್ಎಂಪಿ ವೈದ್ಯರಿಂದ ಸಾಕಷ್ಟು ಅನುಕೂಲಗಳಿವೆ. ಆರೋಗ್ಯ ಇಲಾಖೆಯು ನುರಿತ ಆರ್ಎಂಪಿ ವೈದ್ಯರಿಗೆ ತರಬೇತಿ ನೀಡಿ ಸೇವೆ ನೀಡುವ ಅವಕಾಶ ನೀಡಬೇಕು. ನಾಟಿ ವೈದ್ಯರಿಗೂ ಪ್ರಾಶಸ್ತ್ಯ ನೀಡಬೇಕು.