<p><strong>ಸುರಪುರ: </strong>ಜೈನ ಧರ್ಮದ 10 ಸಾವಿರಕ್ಕೂ ಹೆಚ್ಚು ಶ್ಲೋಕಗಳನ್ನು10 ವರ್ಷ ವಯಸ್ಸಿನ ಧ್ರುವ ಮತ್ತು ಧೈರ್ಯ ಎಂಬ ಅವಳಿ ಜೈನ ಮುನಿಗಳು ಜ.10 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಇಲ್ಲಿನ ಆರಾಧನಾ ಭವನದಲ್ಲಿ ಶತಾವಧಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.</p>.<p>ಇವರು ಸಂಸ್ಕೃತ, ಪ್ರಾಕೃತ, ಹಿಂದಿ, ಗುಜರಾತಿ, ಮರಾಠಿ, ಮಾರ್ವಾಡಿ, ಇಂಗ್ಲಿಷ್, ಪಂಜಾಬಿ, ಕನ್ನಡ, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ನಿರ್ಗಗಳವಾಗಿ ಪ್ರವಚನ ನೀಡುತ್ತಾರೆ. 28 ರಾಜ್ಯದ 22 ಭಾಷೆ ಬಲ್ಲವರಾಗಿದ್ದಾರೆ. ಭಗವದ್ಗೀತೆ, ಕುರಾನ್, ಬೈಬಲ್, ಗುರು ಗ್ರಂಥಗಳನ್ನು ಸಂಪೂರ್ಣ ಕಂಠಪಾಠ ಮಾಡಿದ್ದಾರೆ.</p>.<p>ಪರಿಚಯ: ಈ ಮುನಿಗಳ ಜನ್ಮ ಸ್ಥಳ ಗುಜರಾತ್ನ ಸೂರತ್. ತಂದೆ ಪಿಯೂಷ್ ಭಾಯ್, ತಾಯಿ ಸೊಸೆಲ್ ಬೆನ್. ಮಕ್ಕಳು ಎಲ್ಲರಂತೆ ಟಿವಿ, ಮೊಬೈಲ್ಗೆ ಮಾರು ಹೋಗಲಿಲ್ಲ. ಅಧ್ಯಾತ್ಮದ ಶಕ್ತಿ ಅವರನ್ನು ಆಕರ್ಷಿಸಿಸಿತ್ತು.</p>.<p>ಗುಜರಾತಿ ಮಾಧ್ಯಮದಲ್ಲಿ 1 ನೇ ತರಗತಿ ಅಭ್ಯಸಿಸಿ ನಂತರ 1 ವರ್ಷ ಗುರುಕುಲದಲ್ಲಿ ಸನ್ಯಾಸ ಜೀವನದ ತರಬೇತಿ ಪಡೆದರು. ಅಭಿನಂದನಚಂದ್ರ ಸಾಗರಜಿ ಅವರಲ್ಲಿ ಸನ್ಯಾಸ ದೀಕ್ಷೆ ಪಡೆದರು.</p>.<p>ಎರಡು ವರ್ಷದ ಅಧ್ಯಾತ್ಮಿಕ ಜೀವನದಲ್ಲಿ 7 ಸಾವಿರ ಕಿ.ಮೀ ಪಾದಯಾತ್ರೆ ಕೈಗೊಂಡು ಜೈನ ಧರ್ಮ ಪ್ರಸಾರ ಕಾರ್ಯ ಕೈಗೊಂಡಿದ್ದಾರೆ. ದೇಶದ 28 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.</p>.<p><strong>ಎಲ್ಲ ವಿಯಷಗಳಲ್ಲಿ ಪರಿಣಿತಿ</strong></p>.<p>ದೇಶದ ಹೆಸರು, ರಾಜಧಾನಿ, ಅಲ್ಲಿನ ಮಾತೃಭಾಷೆ, ಇತರ ವಿಷಯ, ಗಣಿತದ ಸೂತ್ರ, ಒಗಟು ಸೇರಿದಂತೆ ಪ್ರೇಕ್ಷಕರು ಕೇಳುವ ಯಾವುದೇ ಪ್ರಶ್ನೆಗಳಿಗೆ ತಟ್ಟನೆ ಉತ್ತರ ನೀಡುತ್ತಾರೆ. ಕಣ್ಣಿಗೆ ಪಟ್ಟಿಕೊಂಡು ಪಿರಾಮಿಡ್ ಕ್ಯೂಬ್ ಸರಿಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ: </strong>ಜೈನ ಧರ್ಮದ 10 ಸಾವಿರಕ್ಕೂ ಹೆಚ್ಚು ಶ್ಲೋಕಗಳನ್ನು10 ವರ್ಷ ವಯಸ್ಸಿನ ಧ್ರುವ ಮತ್ತು ಧೈರ್ಯ ಎಂಬ ಅವಳಿ ಜೈನ ಮುನಿಗಳು ಜ.10 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಇಲ್ಲಿನ ಆರಾಧನಾ ಭವನದಲ್ಲಿ ಶತಾವಧಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.</p>.<p>ಇವರು ಸಂಸ್ಕೃತ, ಪ್ರಾಕೃತ, ಹಿಂದಿ, ಗುಜರಾತಿ, ಮರಾಠಿ, ಮಾರ್ವಾಡಿ, ಇಂಗ್ಲಿಷ್, ಪಂಜಾಬಿ, ಕನ್ನಡ, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ನಿರ್ಗಗಳವಾಗಿ ಪ್ರವಚನ ನೀಡುತ್ತಾರೆ. 28 ರಾಜ್ಯದ 22 ಭಾಷೆ ಬಲ್ಲವರಾಗಿದ್ದಾರೆ. ಭಗವದ್ಗೀತೆ, ಕುರಾನ್, ಬೈಬಲ್, ಗುರು ಗ್ರಂಥಗಳನ್ನು ಸಂಪೂರ್ಣ ಕಂಠಪಾಠ ಮಾಡಿದ್ದಾರೆ.</p>.<p>ಪರಿಚಯ: ಈ ಮುನಿಗಳ ಜನ್ಮ ಸ್ಥಳ ಗುಜರಾತ್ನ ಸೂರತ್. ತಂದೆ ಪಿಯೂಷ್ ಭಾಯ್, ತಾಯಿ ಸೊಸೆಲ್ ಬೆನ್. ಮಕ್ಕಳು ಎಲ್ಲರಂತೆ ಟಿವಿ, ಮೊಬೈಲ್ಗೆ ಮಾರು ಹೋಗಲಿಲ್ಲ. ಅಧ್ಯಾತ್ಮದ ಶಕ್ತಿ ಅವರನ್ನು ಆಕರ್ಷಿಸಿಸಿತ್ತು.</p>.<p>ಗುಜರಾತಿ ಮಾಧ್ಯಮದಲ್ಲಿ 1 ನೇ ತರಗತಿ ಅಭ್ಯಸಿಸಿ ನಂತರ 1 ವರ್ಷ ಗುರುಕುಲದಲ್ಲಿ ಸನ್ಯಾಸ ಜೀವನದ ತರಬೇತಿ ಪಡೆದರು. ಅಭಿನಂದನಚಂದ್ರ ಸಾಗರಜಿ ಅವರಲ್ಲಿ ಸನ್ಯಾಸ ದೀಕ್ಷೆ ಪಡೆದರು.</p>.<p>ಎರಡು ವರ್ಷದ ಅಧ್ಯಾತ್ಮಿಕ ಜೀವನದಲ್ಲಿ 7 ಸಾವಿರ ಕಿ.ಮೀ ಪಾದಯಾತ್ರೆ ಕೈಗೊಂಡು ಜೈನ ಧರ್ಮ ಪ್ರಸಾರ ಕಾರ್ಯ ಕೈಗೊಂಡಿದ್ದಾರೆ. ದೇಶದ 28 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.</p>.<p><strong>ಎಲ್ಲ ವಿಯಷಗಳಲ್ಲಿ ಪರಿಣಿತಿ</strong></p>.<p>ದೇಶದ ಹೆಸರು, ರಾಜಧಾನಿ, ಅಲ್ಲಿನ ಮಾತೃಭಾಷೆ, ಇತರ ವಿಷಯ, ಗಣಿತದ ಸೂತ್ರ, ಒಗಟು ಸೇರಿದಂತೆ ಪ್ರೇಕ್ಷಕರು ಕೇಳುವ ಯಾವುದೇ ಪ್ರಶ್ನೆಗಳಿಗೆ ತಟ್ಟನೆ ಉತ್ತರ ನೀಡುತ್ತಾರೆ. ಕಣ್ಣಿಗೆ ಪಟ್ಟಿಕೊಂಡು ಪಿರಾಮಿಡ್ ಕ್ಯೂಬ್ ಸರಿಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>