<p><strong>ಯಾದಗಿರಿ:</strong> ‘ಶ್ರಾವಣ ಮಾಸವು ವಿಶಿಷ್ಠ ಮಾಸವಾಗಿದ್ದು, ಪ್ರತಿ ದಿನವೂ ವೈಶಿಷ್ಟ್ಯವನ್ನು ಹೊಂದಿದೆ. ಶ್ರಾವಣದಲ್ಲಿ ಭಗವಂತನ ಪೂಜೆ, ಕೀರ್ತನೆ ಮತ್ತು ಶ್ರವಣದಿಂದ ಅಜ್ಞಾನ ನಶಿಸಿ, ಜ್ಞಾನವು ಸಿಗಲಿದೆ’ ಎಂದು ಪಂಡಿತ ನರಸಿಂಹಾಚಾರ್ಯ ಪುರಾಣಿಕ ಹೇಳಿದರು.</p>.<p>ನಗರದ ಉತ್ತರಾಧಿಮಠದ ರಾಘವೇಂದ್ರಸ್ವಾಮಿಗಳ ಪರಿಮಲ ಮಂಟಪದಲ್ಲಿ ಶುಕ್ರವಾರ ವಿಶ್ವಮಧ್ವ ಮಹಾ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಸಹಸ್ರ ದೀಪೋತ್ಸವ ಮತ್ತು ಶ್ರೀಲಕ್ಷ್ಮೀಗೆ ಕುಂಕುಮಾರ್ಚನೆ ಪೂಜೆ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.</p>.<p>ವರಮಹಾಲಕ್ಷ್ಮೀ ಎಂದರೆ ವಿಷ್ಣು ಭಗವಾನರ ಪತ್ನಿ ಮತ್ತು ಸಕಲ ಸಮೃದ್ಧಿಯ ದೇವತೆ. ಲಕ್ಷ್ಮೀ ಎಂದರೆ ಕೇವಲ ಹಣ ಮಾತ್ರವಲ್ಲದೆ ಜ್ಞಾನ, ಭಕ್ತಿ, ಸಂಪತ್ತು ನೀಡುವ ದೇವತೆಯಾಗಿದ್ದು, ಶ್ರಾವಣ ಮಾಸದ ಶುಕ್ರವಾರದಂದು ವರಮಹಾಲಕ್ಷ್ಮೀ ಉಪಾಸನೆ ಮಾಡಲಾಗುತ್ತದೆ ಎಂದರು.</p>.<p>ಸಮುದ್ರಮಥನದ ವೇಳೆ ವರಮಹಾಲಕ್ಷ್ಮಿ, ಮಹಾಲಕ್ಷ್ಮಿ ಅಥವಾ ವರಲಕ್ಷ್ಮೀ ಪ್ರಕಟವಾದಳು. ಕ್ಷೀರ ಸಾಗರದ ಮೈಬಣ್ಣ ಮತ್ತು ಉಡುಪನ್ನು ಧರಿಸಿದ ಲಕ್ಷ್ಮೀದೇವಿಯು ಭಕ್ತರನ್ನು ಉದ್ಧರಿಸುವಳೆಂಬುದು ಕಥೆಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.</p>.<p><strong>ಶನಿವಾರ ಯಜ್ಞೋಪವೀತ ಧಾರಣೆ: </strong>ಆ 9ರಂದು ನೂಲ ಹುಣ್ಣಿಮೆ ಹಿನ್ನಲೆಯಲ್ಲಿ ನಗರದ ಉತ್ತರಾಧಿಮಠದ ರಾಘವೇಂದ್ರಸ್ವಾಮಿಗಳ ಪರಿಮಳ ಮಂಟಪದಲ್ಲಿ ಸಾಮೂಹಿಕ ಯಜ್ಞೋಪವೀತ ಧಾರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಋಗ್ವೇದ ಉಪಕರ್ಣ ಬೆಳಿಗ್ಗೆ 7ರಿಂದ 9 ಗಂಟೆ, ಯಜುರ್ವೇದಿಗಳಿಗೆ ಬೆಳಿಗ್ಗೆ 9.30ರಿಂದ 11.30ರವರೆಗೆ ಜರುಗಲಿದೆ ಎಂದು ರಾಘವೇಂದ್ರ ಆಚಾರ ಜೋಶಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ‘ಶ್ರಾವಣ ಮಾಸವು ವಿಶಿಷ್ಠ ಮಾಸವಾಗಿದ್ದು, ಪ್ರತಿ ದಿನವೂ ವೈಶಿಷ್ಟ್ಯವನ್ನು ಹೊಂದಿದೆ. ಶ್ರಾವಣದಲ್ಲಿ ಭಗವಂತನ ಪೂಜೆ, ಕೀರ್ತನೆ ಮತ್ತು ಶ್ರವಣದಿಂದ ಅಜ್ಞಾನ ನಶಿಸಿ, ಜ್ಞಾನವು ಸಿಗಲಿದೆ’ ಎಂದು ಪಂಡಿತ ನರಸಿಂಹಾಚಾರ್ಯ ಪುರಾಣಿಕ ಹೇಳಿದರು.</p>.<p>ನಗರದ ಉತ್ತರಾಧಿಮಠದ ರಾಘವೇಂದ್ರಸ್ವಾಮಿಗಳ ಪರಿಮಲ ಮಂಟಪದಲ್ಲಿ ಶುಕ್ರವಾರ ವಿಶ್ವಮಧ್ವ ಮಹಾ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಸಹಸ್ರ ದೀಪೋತ್ಸವ ಮತ್ತು ಶ್ರೀಲಕ್ಷ್ಮೀಗೆ ಕುಂಕುಮಾರ್ಚನೆ ಪೂಜೆ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.</p>.<p>ವರಮಹಾಲಕ್ಷ್ಮೀ ಎಂದರೆ ವಿಷ್ಣು ಭಗವಾನರ ಪತ್ನಿ ಮತ್ತು ಸಕಲ ಸಮೃದ್ಧಿಯ ದೇವತೆ. ಲಕ್ಷ್ಮೀ ಎಂದರೆ ಕೇವಲ ಹಣ ಮಾತ್ರವಲ್ಲದೆ ಜ್ಞಾನ, ಭಕ್ತಿ, ಸಂಪತ್ತು ನೀಡುವ ದೇವತೆಯಾಗಿದ್ದು, ಶ್ರಾವಣ ಮಾಸದ ಶುಕ್ರವಾರದಂದು ವರಮಹಾಲಕ್ಷ್ಮೀ ಉಪಾಸನೆ ಮಾಡಲಾಗುತ್ತದೆ ಎಂದರು.</p>.<p>ಸಮುದ್ರಮಥನದ ವೇಳೆ ವರಮಹಾಲಕ್ಷ್ಮಿ, ಮಹಾಲಕ್ಷ್ಮಿ ಅಥವಾ ವರಲಕ್ಷ್ಮೀ ಪ್ರಕಟವಾದಳು. ಕ್ಷೀರ ಸಾಗರದ ಮೈಬಣ್ಣ ಮತ್ತು ಉಡುಪನ್ನು ಧರಿಸಿದ ಲಕ್ಷ್ಮೀದೇವಿಯು ಭಕ್ತರನ್ನು ಉದ್ಧರಿಸುವಳೆಂಬುದು ಕಥೆಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.</p>.<p><strong>ಶನಿವಾರ ಯಜ್ಞೋಪವೀತ ಧಾರಣೆ: </strong>ಆ 9ರಂದು ನೂಲ ಹುಣ್ಣಿಮೆ ಹಿನ್ನಲೆಯಲ್ಲಿ ನಗರದ ಉತ್ತರಾಧಿಮಠದ ರಾಘವೇಂದ್ರಸ್ವಾಮಿಗಳ ಪರಿಮಳ ಮಂಟಪದಲ್ಲಿ ಸಾಮೂಹಿಕ ಯಜ್ಞೋಪವೀತ ಧಾರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಋಗ್ವೇದ ಉಪಕರ್ಣ ಬೆಳಿಗ್ಗೆ 7ರಿಂದ 9 ಗಂಟೆ, ಯಜುರ್ವೇದಿಗಳಿಗೆ ಬೆಳಿಗ್ಗೆ 9.30ರಿಂದ 11.30ರವರೆಗೆ ಜರುಗಲಿದೆ ಎಂದು ರಾಘವೇಂದ್ರ ಆಚಾರ ಜೋಶಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>