ಬಿಸಿಲಿನ ಬೇಗೆಯಿಂದ ತಾತ್ಕಾಲಿಕ ಶಮನ ಪಡೆಯಲು ಜನರಿಗೆ ಈಗ ಎಳನೀರು, ತಂಪು ಪಾನೀಯ, ಐಸ್ಕ್ರೀಮ್ ಸಿಗುತ್ತಿಲ್ಲ. ಕೋವಿಡ್ ನಿಯಮಗಳು ಜಾರಿಯಲ್ಲಿರುವುದರಿಂದ ಈ ಅಂಗಡಿಗಳು ತೆರೆಯುತ್ತಿಲ್ಲ. ನಗರದಲ್ಲಿ ಸಾಕಷ್ಟು ಬಾವಿಗಳು ಇವೆ. ಈ ಎಲ್ಲ ಬಾವಿಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಯುವಕರು, ಮಕ್ಕಳು ಬಿಸಿಲ ಜಳದಿಂದ ಪಾರಾಗಲು ಈಜಾಡುವ ದೃಶ್ಯ ಕಂಡು ಬರುತ್ತಿದೆ.