<p><strong>ಸುರಪುರ:</strong> ‘ನಾವೆಲ್ಲರೂ ಕನ್ನಡದ ನೆಲದಲ್ಲಿ ಹುಟ್ಟಿದ್ದೇವೆ. ಕನ್ನಡವನ್ನು ಪ್ರೀತಿಸಬೇಕು. ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಕನ್ನಡ ಭಾಷೆ ಕಲಿಸಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಾಡಿನ ಪ್ರತಿಯೊಬ್ಬರ ಮೇಲಿದೆ’ ಎಂದು ಪ್ರಭು ಕಾಲೇಜಿನ ಪ್ರಾಚಾರ್ಯ ವಾರಿಸ್ ಕುಂಡಾಲೆ ನುಡಿದರು. </p>.<p>ಸಮೀಪದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ 83ನೇ ನಾಡಹಬ್ಬ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ರಂಗಂಪೇಟೆ ಕನ್ನಡ ಸಾಹಿತ್ಯ ಸಂಘ ಸತತ 83 ವರ್ಷಗಳಿಂದ ನಾಡಹಬ್ಬ ಉತ್ಸವದ ಆಚರಿಸುತ್ತಿರುವುದು ಶ್ಲಾಘನೀಯ. ನಾಡಿನ ಹೆಸರಾಂತ ಸಾಹಿತಿ ದಿಗ್ಗಜರು, ಕವಿಗಳು, ವಿಮರ್ಶಕರು, ಪಂಡಿತರು ಈ ಸಂಘದ ನಾಡಹಬ್ಬ ಉತ್ಸವದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿರುವ ಕ್ಷಣಗಳು ಅವಿಸ್ಮರಣೀಯ’ ಎಂದರು.</p>.<p>‘ಮಕ್ಕಳನ್ನು ಮೊಬೈಲ್ ಪೋನ್ಗಳ ಗೀಳಿನಿಂದ ದೂರ ಮಾಡಬೇಕು. ಮೊಬೈಲ್ನಿಂದ ಅಭ್ಯಾಸ ಕುಂಠಿತಗೊಳ್ಳುತ್ತದೆ. ಮಾನಸಿಕ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಪುಸ್ತಕ ಓದುವ, ಬರವಣಿಗೆ ಹವ್ಯಾಸ ಮೂಡಿಸಬೇಕು’ ಎಂದು ಸಲಹೆ ನೀಡಿದರು.</p>.<p>ಸಾಹಿತಿ ಶರಣಗೌಡ ಪಾಟೀಲ ಜೈನಾಪುರ ಮಾತನಾಡಿ, ಸಂಘದ ಅಧ್ಯಕ್ಷ ಸುಗೂರೇಶ ವಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. </p>.<p>ವಿವಿಧ ಕ್ಷೇತ್ರಗಳ ಸಾಧಕರಾದ ಮೊಹ್ಮದ್ ವಾರೀಸ್ ಕುಂಡಾಲೆ, ಗಿರೀಶ ಶಾಬಾದಿ, ತನ್ವಿರ್ ಅಹ್ಮದ್ ಬೋಡೆ, ರಾಕೇಶ ಚಿನ್ನಾಕಾರ, ಪ್ರಕಾಶ ಗುಳಗಿ, ಹೊನ್ನಪ್ಪ ತೇಲ್ಕರ್ಗೆ ಸನ್ಮಾನಿಸಲಾಯಿತು. </p>.<p>ಪ್ರಮುಖರಾದ ವಾಸುದೇವ ಒಬಳಶೆಟ್ಟಿ, ಶ್ರೀರಂಗ ಮಿರಿಯಾಲ್, ಮಾಧುರಿ ಕಲ್ಕೊಂಡ ವೇದಿಕೆಯಲ್ಲಿದ್ದರು. ಸಂಗಮೇಶ ಗುಳಗಿ ಪ್ರಾರ್ಥನೆ ಗೀತೆ ಹಾಡಿದರು. ಪ್ರಕಾಶ ಅಲಬನೂರ ನಿರೂಪಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ‘ನಾವೆಲ್ಲರೂ ಕನ್ನಡದ ನೆಲದಲ್ಲಿ ಹುಟ್ಟಿದ್ದೇವೆ. ಕನ್ನಡವನ್ನು ಪ್ರೀತಿಸಬೇಕು. ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಕನ್ನಡ ಭಾಷೆ ಕಲಿಸಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಾಡಿನ ಪ್ರತಿಯೊಬ್ಬರ ಮೇಲಿದೆ’ ಎಂದು ಪ್ರಭು ಕಾಲೇಜಿನ ಪ್ರಾಚಾರ್ಯ ವಾರಿಸ್ ಕುಂಡಾಲೆ ನುಡಿದರು. </p>.<p>ಸಮೀಪದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ 83ನೇ ನಾಡಹಬ್ಬ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ರಂಗಂಪೇಟೆ ಕನ್ನಡ ಸಾಹಿತ್ಯ ಸಂಘ ಸತತ 83 ವರ್ಷಗಳಿಂದ ನಾಡಹಬ್ಬ ಉತ್ಸವದ ಆಚರಿಸುತ್ತಿರುವುದು ಶ್ಲಾಘನೀಯ. ನಾಡಿನ ಹೆಸರಾಂತ ಸಾಹಿತಿ ದಿಗ್ಗಜರು, ಕವಿಗಳು, ವಿಮರ್ಶಕರು, ಪಂಡಿತರು ಈ ಸಂಘದ ನಾಡಹಬ್ಬ ಉತ್ಸವದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿರುವ ಕ್ಷಣಗಳು ಅವಿಸ್ಮರಣೀಯ’ ಎಂದರು.</p>.<p>‘ಮಕ್ಕಳನ್ನು ಮೊಬೈಲ್ ಪೋನ್ಗಳ ಗೀಳಿನಿಂದ ದೂರ ಮಾಡಬೇಕು. ಮೊಬೈಲ್ನಿಂದ ಅಭ್ಯಾಸ ಕುಂಠಿತಗೊಳ್ಳುತ್ತದೆ. ಮಾನಸಿಕ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಪುಸ್ತಕ ಓದುವ, ಬರವಣಿಗೆ ಹವ್ಯಾಸ ಮೂಡಿಸಬೇಕು’ ಎಂದು ಸಲಹೆ ನೀಡಿದರು.</p>.<p>ಸಾಹಿತಿ ಶರಣಗೌಡ ಪಾಟೀಲ ಜೈನಾಪುರ ಮಾತನಾಡಿ, ಸಂಘದ ಅಧ್ಯಕ್ಷ ಸುಗೂರೇಶ ವಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. </p>.<p>ವಿವಿಧ ಕ್ಷೇತ್ರಗಳ ಸಾಧಕರಾದ ಮೊಹ್ಮದ್ ವಾರೀಸ್ ಕುಂಡಾಲೆ, ಗಿರೀಶ ಶಾಬಾದಿ, ತನ್ವಿರ್ ಅಹ್ಮದ್ ಬೋಡೆ, ರಾಕೇಶ ಚಿನ್ನಾಕಾರ, ಪ್ರಕಾಶ ಗುಳಗಿ, ಹೊನ್ನಪ್ಪ ತೇಲ್ಕರ್ಗೆ ಸನ್ಮಾನಿಸಲಾಯಿತು. </p>.<p>ಪ್ರಮುಖರಾದ ವಾಸುದೇವ ಒಬಳಶೆಟ್ಟಿ, ಶ್ರೀರಂಗ ಮಿರಿಯಾಲ್, ಮಾಧುರಿ ಕಲ್ಕೊಂಡ ವೇದಿಕೆಯಲ್ಲಿದ್ದರು. ಸಂಗಮೇಶ ಗುಳಗಿ ಪ್ರಾರ್ಥನೆ ಗೀತೆ ಹಾಡಿದರು. ಪ್ರಕಾಶ ಅಲಬನೂರ ನಿರೂಪಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>