<p><strong>ಸುರಪುರ</strong>: ತಾಲ್ಲೂಕಿನ ದೇವರಗೋನಾಲ ಗ್ರಾಮದಲ್ಲಿ ನಡೆದ ಮೌನೇಶ್ವರ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಕುಸ್ತಿ ಪಂದ್ಯಗಳು ಜನ ಮನ ಸೂರೆಗೊಂಡವು.</p>.<p>ಬೊಮ್ಮನಳ್ಳಿ, ವನದುರ್ಗ, ಹೋತಪೇಟ, ಗೋಗಿ, ಸಿದ್ದಾಪುರ, ದೋರನಹಳ್ಳಿ, ಶಹಾಪುರ, ಹಳಿಸಗರ, ಮಾಚಗುಂಡಾಳ, ಮಲ್ಲಿಭಾವಿ ಇತರೆಡೆಯಿಂದ ಹಲವು ಜಟ್ಟಿಗಳು ಭಾಗವಹಿಸಿದ್ದರು.</p>.<p>ಬೆಳಿಗ್ಗೆ ಆರಂಭವಾದ ಪಂದ್ಯಗಳು ಸಂಜೆವರೆಗೂ ನಡೆದವು. ಜಟ್ಟಿಗಳ ಸೆಣಸಾಟ, ಪೇಚು ಮನಸೆಳೆದವು. ಸೇರಿದ್ದ ನೂರಾರು ಜನ ಹೋ ಎಂದು ಪೈಲ್ವಾನರನ್ನು ಹುರಿದುಂಬಿಸುತ್ತಿದ್ದರು.</p>.<p>ಅಂತಿಮವಾಗಿ ದೇವರಗೋನಾಲದ ಶೆಳ್ಳಿಗೆಪ್ಪ ಹಳಿಸಗರ ಮತ್ತು ಗೋಗಿಯ ಭೀಮಣ್ಣ ಮಧ್ಯೆ ರೋಚಕ ಸೆಣಸಾಟ ನಡೆಯಿತು. ಇಬ್ಬರೂ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ.<br /> ಇನ್ನೇನು ಸೋತೆಬಿಟ್ಟರೂ ಎನ್ನುವಷ್ಟರಲ್ಲಿ ಮತ್ತೇ ಪುಟಿದೆದ್ದು ಎದುರಾಳಿಗೆ ಪೆಟ್ಟು ನೀಡುತ್ತಿದ್ದರು. ಇಬ್ಬರೂ ಜಗಜಟ್ಟಿಗಳಂತೆ ಕಾದಾಡಿದರು. ಕೊನೆಗೆ ಗೋಗಿಯ ಭೀಮಣ್ಣ ಗೆಲುವಿನ ನಗೆ ಬೀರಿದರು.</p>.<p>ವಿಜೇತ ಪೈಲ್ವಾನ ಭೀಮಣ್ಣ ಅವರಿಗೆ ಬೆಳ್ಳಿ ಕಡಗ, ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ತಾಲ್ಲೂಕಿನ ದೇವರಗೋನಾಲ ಗ್ರಾಮದಲ್ಲಿ ನಡೆದ ಮೌನೇಶ್ವರ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಕುಸ್ತಿ ಪಂದ್ಯಗಳು ಜನ ಮನ ಸೂರೆಗೊಂಡವು.</p>.<p>ಬೊಮ್ಮನಳ್ಳಿ, ವನದುರ್ಗ, ಹೋತಪೇಟ, ಗೋಗಿ, ಸಿದ್ದಾಪುರ, ದೋರನಹಳ್ಳಿ, ಶಹಾಪುರ, ಹಳಿಸಗರ, ಮಾಚಗುಂಡಾಳ, ಮಲ್ಲಿಭಾವಿ ಇತರೆಡೆಯಿಂದ ಹಲವು ಜಟ್ಟಿಗಳು ಭಾಗವಹಿಸಿದ್ದರು.</p>.<p>ಬೆಳಿಗ್ಗೆ ಆರಂಭವಾದ ಪಂದ್ಯಗಳು ಸಂಜೆವರೆಗೂ ನಡೆದವು. ಜಟ್ಟಿಗಳ ಸೆಣಸಾಟ, ಪೇಚು ಮನಸೆಳೆದವು. ಸೇರಿದ್ದ ನೂರಾರು ಜನ ಹೋ ಎಂದು ಪೈಲ್ವಾನರನ್ನು ಹುರಿದುಂಬಿಸುತ್ತಿದ್ದರು.</p>.<p>ಅಂತಿಮವಾಗಿ ದೇವರಗೋನಾಲದ ಶೆಳ್ಳಿಗೆಪ್ಪ ಹಳಿಸಗರ ಮತ್ತು ಗೋಗಿಯ ಭೀಮಣ್ಣ ಮಧ್ಯೆ ರೋಚಕ ಸೆಣಸಾಟ ನಡೆಯಿತು. ಇಬ್ಬರೂ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ.<br /> ಇನ್ನೇನು ಸೋತೆಬಿಟ್ಟರೂ ಎನ್ನುವಷ್ಟರಲ್ಲಿ ಮತ್ತೇ ಪುಟಿದೆದ್ದು ಎದುರಾಳಿಗೆ ಪೆಟ್ಟು ನೀಡುತ್ತಿದ್ದರು. ಇಬ್ಬರೂ ಜಗಜಟ್ಟಿಗಳಂತೆ ಕಾದಾಡಿದರು. ಕೊನೆಗೆ ಗೋಗಿಯ ಭೀಮಣ್ಣ ಗೆಲುವಿನ ನಗೆ ಬೀರಿದರು.</p>.<p>ವಿಜೇತ ಪೈಲ್ವಾನ ಭೀಮಣ್ಣ ಅವರಿಗೆ ಬೆಳ್ಳಿ ಕಡಗ, ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>