<p><strong>ಸುರಪುರ</strong>: ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಮರಡಿ ಮಲ್ಲಿಕಾರ್ಜುನ ದೇವರ ಜಾತ್ರೆ ಅದ್ದೂರಿಯಾಗಿ ಜರುಗಿತು.</p>.<p>ಐದು ದಿನಗಳ ಜಾತ್ರೆಯಲ್ಲಿ ಹಲವು ಕಾರ್ಯಕ್ರಮಗಳು ಜರುಗಿದವು. ಮೂರು ದಿನಗಳ ಉಚ್ಚಾಯಿ ಹಾಗೂ ಪುರವಂತರ ಮಹಾ ಸೇವಾ ಕಾರ್ಯಕ್ರಮ ಜರುಗಿದವು. ಕಳೆದ ಎರಡು ವಾರಗಳಿಂದ ನಿರಂತರವಾಗಿ ದಿನಾಲು ಸಂಜೆ ಶರಣಬಸವೇಶ್ವರರ ಪುರಾಣ ನಡೆಯಿತು.</p>.<p>ಶನಿವಾರ ದೇವರ ರಥೋತ್ಸವದ ಅಂಗವಾಗಿ ಬೆಳಿಗ್ಗೆ ಮಲ್ಲಿಕಾರ್ಜುನ ದೇವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ನಂತರ ರಥಕ್ಕೆ ಕಳಸಾರೋಹಣ ಕಾರ್ಯಕ್ರಮ ನಡೆಯಿತು.<br> ಸಂಜೆ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ತಿಂಥಣಿ ಕೈಲಾಸ ಕಟ್ಟಿಯ ಗೂಳಿ ಮೌನಯ್ಯ ತಾತಾ, ಪೇಠ ಅಮ್ಮಾಪುರ ರಾಮಲಿಂಗೇಶ್ವರ ಮಠದ ರಾಮ ಶರಣರು, ಹಾಲಭಾವಿ, ಅಮರಯ್ಯಸ್ವಾಮಿ, ಬಸಯ್ಯಸ್ವಾಮಿ ಮತ್ತು ಸಾವಿರಾರು ಭಕ್ತರ ಮಧ್ಯೆ ರಥೋತ್ಸವ ಜರುಗಿತು.</p>.<p>ಭಕ್ತರು ರಥಕ್ಕೆ ಹಣ್ಣು, ಕಬ್ಬು, ಉತ್ತತ್ತಿ ಎಸೆದು ಹರಕೆ ಸಲ್ಲಿಸಿದರು. ಪಟಾಕಿ ಬಾಣಗಳ ಸದ್ದು ಎಲ್ಲರಲ್ಲಿ ಹರ್ಷ ಮೂಡಿಸಿತು. ಮಕ್ಕಳು ಹಾಗೂ ಮಹಿಳೆಯರು ಬಳೆ,ಆಟದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.<br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಮರಡಿ ಮಲ್ಲಿಕಾರ್ಜುನ ದೇವರ ಜಾತ್ರೆ ಅದ್ದೂರಿಯಾಗಿ ಜರುಗಿತು.</p>.<p>ಐದು ದಿನಗಳ ಜಾತ್ರೆಯಲ್ಲಿ ಹಲವು ಕಾರ್ಯಕ್ರಮಗಳು ಜರುಗಿದವು. ಮೂರು ದಿನಗಳ ಉಚ್ಚಾಯಿ ಹಾಗೂ ಪುರವಂತರ ಮಹಾ ಸೇವಾ ಕಾರ್ಯಕ್ರಮ ಜರುಗಿದವು. ಕಳೆದ ಎರಡು ವಾರಗಳಿಂದ ನಿರಂತರವಾಗಿ ದಿನಾಲು ಸಂಜೆ ಶರಣಬಸವೇಶ್ವರರ ಪುರಾಣ ನಡೆಯಿತು.</p>.<p>ಶನಿವಾರ ದೇವರ ರಥೋತ್ಸವದ ಅಂಗವಾಗಿ ಬೆಳಿಗ್ಗೆ ಮಲ್ಲಿಕಾರ್ಜುನ ದೇವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ನಂತರ ರಥಕ್ಕೆ ಕಳಸಾರೋಹಣ ಕಾರ್ಯಕ್ರಮ ನಡೆಯಿತು.<br> ಸಂಜೆ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ತಿಂಥಣಿ ಕೈಲಾಸ ಕಟ್ಟಿಯ ಗೂಳಿ ಮೌನಯ್ಯ ತಾತಾ, ಪೇಠ ಅಮ್ಮಾಪುರ ರಾಮಲಿಂಗೇಶ್ವರ ಮಠದ ರಾಮ ಶರಣರು, ಹಾಲಭಾವಿ, ಅಮರಯ್ಯಸ್ವಾಮಿ, ಬಸಯ್ಯಸ್ವಾಮಿ ಮತ್ತು ಸಾವಿರಾರು ಭಕ್ತರ ಮಧ್ಯೆ ರಥೋತ್ಸವ ಜರುಗಿತು.</p>.<p>ಭಕ್ತರು ರಥಕ್ಕೆ ಹಣ್ಣು, ಕಬ್ಬು, ಉತ್ತತ್ತಿ ಎಸೆದು ಹರಕೆ ಸಲ್ಲಿಸಿದರು. ಪಟಾಕಿ ಬಾಣಗಳ ಸದ್ದು ಎಲ್ಲರಲ್ಲಿ ಹರ್ಷ ಮೂಡಿಸಿತು. ಮಕ್ಕಳು ಹಾಗೂ ಮಹಿಳೆಯರು ಬಳೆ,ಆಟದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.<br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>