<p><strong>ಸುರಪುರ:</strong> ‘ವಿಶ್ವವಿಖ್ಯಾತಿ ಹೊಂದಿರುವ ಸುರಪುರ ಸಂಸ್ಥಾನದ ಗರುಡಾದ್ರಿ ಕಲೆಗೆ ಸಾಟಿ ಇಲ್ಲ. ಆಧುನಿಕ ಕಲೆಯ ಪ್ರಭುತ್ವದಿಂದ ನಶಿಸಿ ಹೋಗುತ್ತಿರುವ ಈ ಅನನ್ಯ ಕಲೆಯನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಧಾರವಾಡ ಕರಕುಶಲ ವಿಭಾಗದ ನಿರ್ದೇಶಕ ಕಿರಣಕುಮಾರ ಅಭಿಪ್ರಾಯಪಟ್ಟರು.</p>.<p>ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಭಾರತ ಸರ್ಕಾರದ ವಸ್ತ್ರ ಮಂತ್ರಾಲಯದ ಸಹಯೋಗದಲ್ಲಿ ಧಾರವಾಡ ಕರಕುಶಲ ವಿಭಾಗ ಹಮ್ಮಿಕೊಂಡಿದ್ದ ‘ಸುರಪುರ ಪೇಟಿಂಗ್ ಕಲೆಯ ಬಗ್ಗೆ ಕ್ರಾಫ್ಟ್ ಸ್ಟಡಿ ರಿಪೋರ್ಟ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಈ ಭಾಗದ ಆಸಕ್ತ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೇಟಿಂಗ್ ತರಬೇತಿ ಕೇಂದ್ರ ಆರಂಭಿಸುವ ಉದ್ದೇಶವಿದೆ. ಸಂಘ ಸಂಸ್ಥೆಯವರು ಮುಂದೆ ಬಂದಲ್ಲಿ ಅಥವಾ ಅರಸು ಮನೆತನದವರು ಆಸಕ್ತಿ ವಹಿಸಿದಲ್ಲಿ ಸುರಪುರದಲ್ಲಿಯೇ ತರಬೇತಿ ಕೇಂದ್ರ ಆರಂಭಿಸಲಾಗುವುದು’ ಎಂದರು.</p>.<p>ಅಂತರರಾಷ್ಟ್ರೀಯ ಕಲಾವಿದ ರಹೆಮಾನ ಪಟೇಲ ಮಾತನಾಡಿ, ‘ಸುರಪುರದ ಗರುಡಾದ್ರಿ ಚಿತ್ರಕಲೆ 300 ವರ್ಷಕ್ಕಿಂತ ಹೆಚ್ಚು ಇತಿಹಾಸ ಹೊಂದಿದೆ. ಈ ಕಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ. ದೇಶದ ಸಂಸತ ಭವನದಲ್ಲಿಯೂ ಅನಾವರಣಗೊಂಡಿದೆ. ಲಂಡನ್ ಮ್ಯೂಸಿಯಂನಲ್ಲಿಯೂ ಇದೆ. ಈ ಕಲೆ ಉಳಿಸಿ ಬೆಳೆಸಿದ ಕೀರ್ತಿ ಅಂತರರಾಷ್ಟ್ರೀಯ ಕಲಾವಿದ ವಿಜಯ ಹಾಗರಗುಂಡಗಿ ಅವರಿಗೆ ಸಲ್ಲುತ್ತದೆ’ ಎಂದರು.</p>.<p>‘ಇಲ್ಲಿಯ ಸಂಸ್ಥಾನದ ರಾಜಾಶ್ರಯ ಪಡೆದಿದ್ದ ಗರುಡಾದ್ರಿ ಕುಟುಂಬ ಈ ಕಲೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿತ್ತು. ಇದು ಅತ್ಯಂತ ನವಿರಾದ ಕಲೆಯಾಗಿದೆ’ ಎಂದು ತಿಳಿಸಿದರು.</p>.<p>ಕಲಾವಿದ ಜಗದೀಶ ಕಾಂಬ್ಳೆ, ಅಧ್ಯಕ್ಷತೆ ವಹಿಸಿದ್ದ ಶಾಂತಲಾ ನಿಷ್ಠಿ ಮಾತನಾಡಿದರು. ಸಂಸ್ಥಾನಿಕ ರಾಜಾ ಕೃಷ್ಣಪ್ಪ ನಾಯಕ ಪುಸ್ತಕ ಬಿಡುಗಡೆಗೊಳಿಸಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ನಿಷ್ಠಿ ಪ್ರಾಂಶುಪಾಲ ಶರಣಬಸಪ್ಪ ಸಾಲಿ, ಕಲಾವಿದ ಚಂದ್ರಶೇಖರ ವೇದಿಕೆಯಲ್ಲಿದ್ದರು. <br> ಕಲಾವಿದರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶರಣಬಸವ ಶಿಕ್ಷಣ ಸಂಸ್ಥೆಯ ಚಿತ್ರಕಲಾ ವಿಭಾಗವನ್ನು ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ಉದ್ಘಾಟಿಸಿದರು. ಶಿವಕುಮಾರ ಮಸ್ಕಿ ಸ್ವಾಗತಿಸಿದರು. ಪ್ರಕಾಶ ಅಂಗಡಿ ನಿರೂಪಿಸಿದರು. ಜಾವೇದ ಹುಸೇನ್ ಜಮಾದಾರ ವಂದಿಸಿದರು. </p>.<p><strong>ದೆಹಲಿಯ ಕರಕುಶಲ ಮಂಡಳಿಯಿಂದ ಆಯ್ಕೆ</strong></p><p>‘ದೇಶದ ಪ್ರತಿಷ್ಠಿತ ಸಂಸ್ಥಾನಗಳಿಂದ 19 ಕಲೆಗಳ ಮಾದರಿಗಳನ್ನು ದೆಹಲಿಯ ಕರ ಕುಶಲ ಮಂಡಳಿಯ ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು. ಅವುಗಳಲ್ಲಿ ಸುರಪುರದ ಗರುಡಾದ್ರಿ ಚಿತ್ರಕಲೆ ಆಯ್ಕೆಯಾಗಿದೆ. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುರಪುರದ ಘನತೆ ಗೌರವ ಹೆಚ್ಚಾಗಿದೆ’ ಎಂದು ಕಿರಣಕುಮಾರ ತಿಳಿಸಿದರು. </p>
<p><strong>ಸುರಪುರ:</strong> ‘ವಿಶ್ವವಿಖ್ಯಾತಿ ಹೊಂದಿರುವ ಸುರಪುರ ಸಂಸ್ಥಾನದ ಗರುಡಾದ್ರಿ ಕಲೆಗೆ ಸಾಟಿ ಇಲ್ಲ. ಆಧುನಿಕ ಕಲೆಯ ಪ್ರಭುತ್ವದಿಂದ ನಶಿಸಿ ಹೋಗುತ್ತಿರುವ ಈ ಅನನ್ಯ ಕಲೆಯನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಧಾರವಾಡ ಕರಕುಶಲ ವಿಭಾಗದ ನಿರ್ದೇಶಕ ಕಿರಣಕುಮಾರ ಅಭಿಪ್ರಾಯಪಟ್ಟರು.</p>.<p>ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಭಾರತ ಸರ್ಕಾರದ ವಸ್ತ್ರ ಮಂತ್ರಾಲಯದ ಸಹಯೋಗದಲ್ಲಿ ಧಾರವಾಡ ಕರಕುಶಲ ವಿಭಾಗ ಹಮ್ಮಿಕೊಂಡಿದ್ದ ‘ಸುರಪುರ ಪೇಟಿಂಗ್ ಕಲೆಯ ಬಗ್ಗೆ ಕ್ರಾಫ್ಟ್ ಸ್ಟಡಿ ರಿಪೋರ್ಟ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಈ ಭಾಗದ ಆಸಕ್ತ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೇಟಿಂಗ್ ತರಬೇತಿ ಕೇಂದ್ರ ಆರಂಭಿಸುವ ಉದ್ದೇಶವಿದೆ. ಸಂಘ ಸಂಸ್ಥೆಯವರು ಮುಂದೆ ಬಂದಲ್ಲಿ ಅಥವಾ ಅರಸು ಮನೆತನದವರು ಆಸಕ್ತಿ ವಹಿಸಿದಲ್ಲಿ ಸುರಪುರದಲ್ಲಿಯೇ ತರಬೇತಿ ಕೇಂದ್ರ ಆರಂಭಿಸಲಾಗುವುದು’ ಎಂದರು.</p>.<p>ಅಂತರರಾಷ್ಟ್ರೀಯ ಕಲಾವಿದ ರಹೆಮಾನ ಪಟೇಲ ಮಾತನಾಡಿ, ‘ಸುರಪುರದ ಗರುಡಾದ್ರಿ ಚಿತ್ರಕಲೆ 300 ವರ್ಷಕ್ಕಿಂತ ಹೆಚ್ಚು ಇತಿಹಾಸ ಹೊಂದಿದೆ. ಈ ಕಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ. ದೇಶದ ಸಂಸತ ಭವನದಲ್ಲಿಯೂ ಅನಾವರಣಗೊಂಡಿದೆ. ಲಂಡನ್ ಮ್ಯೂಸಿಯಂನಲ್ಲಿಯೂ ಇದೆ. ಈ ಕಲೆ ಉಳಿಸಿ ಬೆಳೆಸಿದ ಕೀರ್ತಿ ಅಂತರರಾಷ್ಟ್ರೀಯ ಕಲಾವಿದ ವಿಜಯ ಹಾಗರಗುಂಡಗಿ ಅವರಿಗೆ ಸಲ್ಲುತ್ತದೆ’ ಎಂದರು.</p>.<p>‘ಇಲ್ಲಿಯ ಸಂಸ್ಥಾನದ ರಾಜಾಶ್ರಯ ಪಡೆದಿದ್ದ ಗರುಡಾದ್ರಿ ಕುಟುಂಬ ಈ ಕಲೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿತ್ತು. ಇದು ಅತ್ಯಂತ ನವಿರಾದ ಕಲೆಯಾಗಿದೆ’ ಎಂದು ತಿಳಿಸಿದರು.</p>.<p>ಕಲಾವಿದ ಜಗದೀಶ ಕಾಂಬ್ಳೆ, ಅಧ್ಯಕ್ಷತೆ ವಹಿಸಿದ್ದ ಶಾಂತಲಾ ನಿಷ್ಠಿ ಮಾತನಾಡಿದರು. ಸಂಸ್ಥಾನಿಕ ರಾಜಾ ಕೃಷ್ಣಪ್ಪ ನಾಯಕ ಪುಸ್ತಕ ಬಿಡುಗಡೆಗೊಳಿಸಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ನಿಷ್ಠಿ ಪ್ರಾಂಶುಪಾಲ ಶರಣಬಸಪ್ಪ ಸಾಲಿ, ಕಲಾವಿದ ಚಂದ್ರಶೇಖರ ವೇದಿಕೆಯಲ್ಲಿದ್ದರು. <br> ಕಲಾವಿದರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶರಣಬಸವ ಶಿಕ್ಷಣ ಸಂಸ್ಥೆಯ ಚಿತ್ರಕಲಾ ವಿಭಾಗವನ್ನು ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ಉದ್ಘಾಟಿಸಿದರು. ಶಿವಕುಮಾರ ಮಸ್ಕಿ ಸ್ವಾಗತಿಸಿದರು. ಪ್ರಕಾಶ ಅಂಗಡಿ ನಿರೂಪಿಸಿದರು. ಜಾವೇದ ಹುಸೇನ್ ಜಮಾದಾರ ವಂದಿಸಿದರು. </p>.<p><strong>ದೆಹಲಿಯ ಕರಕುಶಲ ಮಂಡಳಿಯಿಂದ ಆಯ್ಕೆ</strong></p><p>‘ದೇಶದ ಪ್ರತಿಷ್ಠಿತ ಸಂಸ್ಥಾನಗಳಿಂದ 19 ಕಲೆಗಳ ಮಾದರಿಗಳನ್ನು ದೆಹಲಿಯ ಕರ ಕುಶಲ ಮಂಡಳಿಯ ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು. ಅವುಗಳಲ್ಲಿ ಸುರಪುರದ ಗರುಡಾದ್ರಿ ಚಿತ್ರಕಲೆ ಆಯ್ಕೆಯಾಗಿದೆ. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುರಪುರದ ಘನತೆ ಗೌರವ ಹೆಚ್ಚಾಗಿದೆ’ ಎಂದು ಕಿರಣಕುಮಾರ ತಿಳಿಸಿದರು. </p>