<p><strong>ಸುರಪುರ:</strong> ‘ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಕರ ಪಾವತಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ತಿಳಿಸಿದರು.</p>.<p>ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಅವರು, ‘ಒಟ್ಟು 42 ಪಂಚಾಯಿತಿಗಳಿಂದ ಡಿಸೆಂಬರ್ ತಿಂಗಳ ಅಂತ್ಯದವರೆಗೆ ₹65.69 ಲಕ್ಷ ಕರ ಸಂಗ್ರಹವಾಗಿದೆ’ ಎಂದು ತಿಳಿಸಿದರು.</p>.<p>‘ಈ ಮೊದಲು ಕರ ಸಂಗ್ರಹವಾಗುತ್ತಿರಲಿಲ್ಲ. ತೆರಿಗೆ ಸಂಗ್ರಹದ ಕುರಿತು ಮಾಹಿತಿ ನೀಡಲು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ಒಂದು ತಂಡವನ್ನು ರಚಿಸಿ ಡಿಸೆಂಬರ್ ತಿಂಗಳಲ್ಲಿ ಕರಸಂಗ್ರಹ ಮಾಸಾಚರಣೆ ಮಾಡಲಾಯಿತು’ ಎಂದು ಮಾಹಿತಿ ನೀಡಿದರು.</p>.<p>‘ಇದರಿಂದ ಪಂಚಾಯಿತಿಗಳಲ್ಲ್ಲಿ ಕೆಲಸ ನಿರ್ವಹಿಸುತ್ತಿರುವ ಡಿ. ಗ್ರುಪ್ ನೌಕರರ ಶೇಕಡ 40 ರಷ್ಟು ಸಂಬಳ ನೀಡಬಹುದು. ಉಳಿದ 60 ರಷ್ಟು ಹಣವನ್ನು ಗ್ರಾಮಗಳ ಅಭಿವೃದ್ಧಿಗೆ ಉಪಯೋಗಿಸಿ ಕೊಳ್ಳಬಹುದಾಗಿದೆ. ಈ ಮೊದಲು ಕರ ಪಾವತಿಸಿದಾಗ ರಸೀದಿ ನೀಡಲಾಗುತ್ತಿತ್ತು. ಈಗ ಆನಲೈನ್ ಮುಖಾಂತರ ಚಲನ್ ಕರ ವಸೂಲಾತಿಗೆ ಚಾಲನೆ ನೀಡಲಾಗಿದೆ. ಇದರಿಂದ ಜನರಲ್ಲಿಯೂ ತಾವು ಪಾವತಿಸಿದ ಕರ ಸರ್ಕಾರಕ್ಕೆ ತಲುಪುತ್ತಿದೆ ಎನ್ನುವ ಭಾವನೆ ಹಾಗೂ ಅದರ ಸದುಪಯೋಗದ ಕುರಿತು ನಂಬಿಕೆ ಮೂಡಿದೆ’ ಎಂದು ತಿಳಿಸಿದರು.</p>.<p>‘ಹುಣಸಗಿ ಪಂಚಾಯಿತಿಯಲ್ಲಿ ಅತಿ ಹೆಚ್ಚು ₹6.59 ಲಕ್ಷ ಕರ ಸಂಗ್ರಹವಾಗಿದೆ. ದೇವಪುರ ಪಂಚಾಯಿತಿ ₹ 3.60 ಲಕ್ಷ ಕರ ಸಂಗ್ರಹ ಮಾಡಿ ದ್ವಿತೀಯ ಸ್ಥಾನದಲ್ಲಿದೆ’ ಎಂದರು. ‘ಕರ ಸಂಗ್ರಹ ಅಭಿಯಾನ ಜನವರಿ 15ಕ್ಕೆ ಅಂತ್ಯವಾಗುತ್ತದೆ. ಅಷ್ಟರೊಳಗೆ ಸಾರ್ವಜನಿಕರು ತಮ್ಮ ಮನೆ, ನಿವೇಶನ ಹಾಗೂ ನೀರಿನ ತೆರಿಗೆಯನ್ನು ಪಾವತಿಸಿ ಸಹಕರಿಸಬೇಕು. ಜನ ಪ್ರತಿನಿಧಿಗಳು ಇದಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ‘ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಕರ ಪಾವತಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ತಿಳಿಸಿದರು.</p>.<p>ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಅವರು, ‘ಒಟ್ಟು 42 ಪಂಚಾಯಿತಿಗಳಿಂದ ಡಿಸೆಂಬರ್ ತಿಂಗಳ ಅಂತ್ಯದವರೆಗೆ ₹65.69 ಲಕ್ಷ ಕರ ಸಂಗ್ರಹವಾಗಿದೆ’ ಎಂದು ತಿಳಿಸಿದರು.</p>.<p>‘ಈ ಮೊದಲು ಕರ ಸಂಗ್ರಹವಾಗುತ್ತಿರಲಿಲ್ಲ. ತೆರಿಗೆ ಸಂಗ್ರಹದ ಕುರಿತು ಮಾಹಿತಿ ನೀಡಲು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ಒಂದು ತಂಡವನ್ನು ರಚಿಸಿ ಡಿಸೆಂಬರ್ ತಿಂಗಳಲ್ಲಿ ಕರಸಂಗ್ರಹ ಮಾಸಾಚರಣೆ ಮಾಡಲಾಯಿತು’ ಎಂದು ಮಾಹಿತಿ ನೀಡಿದರು.</p>.<p>‘ಇದರಿಂದ ಪಂಚಾಯಿತಿಗಳಲ್ಲ್ಲಿ ಕೆಲಸ ನಿರ್ವಹಿಸುತ್ತಿರುವ ಡಿ. ಗ್ರುಪ್ ನೌಕರರ ಶೇಕಡ 40 ರಷ್ಟು ಸಂಬಳ ನೀಡಬಹುದು. ಉಳಿದ 60 ರಷ್ಟು ಹಣವನ್ನು ಗ್ರಾಮಗಳ ಅಭಿವೃದ್ಧಿಗೆ ಉಪಯೋಗಿಸಿ ಕೊಳ್ಳಬಹುದಾಗಿದೆ. ಈ ಮೊದಲು ಕರ ಪಾವತಿಸಿದಾಗ ರಸೀದಿ ನೀಡಲಾಗುತ್ತಿತ್ತು. ಈಗ ಆನಲೈನ್ ಮುಖಾಂತರ ಚಲನ್ ಕರ ವಸೂಲಾತಿಗೆ ಚಾಲನೆ ನೀಡಲಾಗಿದೆ. ಇದರಿಂದ ಜನರಲ್ಲಿಯೂ ತಾವು ಪಾವತಿಸಿದ ಕರ ಸರ್ಕಾರಕ್ಕೆ ತಲುಪುತ್ತಿದೆ ಎನ್ನುವ ಭಾವನೆ ಹಾಗೂ ಅದರ ಸದುಪಯೋಗದ ಕುರಿತು ನಂಬಿಕೆ ಮೂಡಿದೆ’ ಎಂದು ತಿಳಿಸಿದರು.</p>.<p>‘ಹುಣಸಗಿ ಪಂಚಾಯಿತಿಯಲ್ಲಿ ಅತಿ ಹೆಚ್ಚು ₹6.59 ಲಕ್ಷ ಕರ ಸಂಗ್ರಹವಾಗಿದೆ. ದೇವಪುರ ಪಂಚಾಯಿತಿ ₹ 3.60 ಲಕ್ಷ ಕರ ಸಂಗ್ರಹ ಮಾಡಿ ದ್ವಿತೀಯ ಸ್ಥಾನದಲ್ಲಿದೆ’ ಎಂದರು. ‘ಕರ ಸಂಗ್ರಹ ಅಭಿಯಾನ ಜನವರಿ 15ಕ್ಕೆ ಅಂತ್ಯವಾಗುತ್ತದೆ. ಅಷ್ಟರೊಳಗೆ ಸಾರ್ವಜನಿಕರು ತಮ್ಮ ಮನೆ, ನಿವೇಶನ ಹಾಗೂ ನೀರಿನ ತೆರಿಗೆಯನ್ನು ಪಾವತಿಸಿ ಸಹಕರಿಸಬೇಕು. ಜನ ಪ್ರತಿನಿಧಿಗಳು ಇದಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>