<p><strong>ಸೈದಾಪುರ (ಯಾದಗಿರಿ ಜಿಲ್ಲೆ):</strong>ಇಲ್ಲಿಗೆ ಸಮೀಪದ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿರುವ ಎಸ್.ಬಿ. ಪ್ರಾರಲೆಸಸ್ ಕಾರ್ಖಾನೆಯಲ್ಲಿ ಮಂಗಳವಾರ ಬಾಯ್ಲರ್ ಸ್ಫೋಟಗೊಂಡು ಎಂಟು ಕಾರ್ಮಿಕರಿಗೆ ಗಾಯಗಳಾಗಿವೆ.</p>.<p>ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೈದರಾಬಾದ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಹುಸೇನ್ ಸಾಬ್, ಆರೀಫ್, ಸೂಪಿಯಾನ್, ಸಮೀರ್, ಇಮ್ರಾನ್, ಇಮ್ರಾನ್ ಶಬ್ಬೀರ್, ರವಿಕುಮಾರ, ವಿಜಯ್ ಗಾಯಗೊಂಡವರು. ಆರು ಜನ ಕಡೇಚೂರು, ಉಳಿದವರು ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಮೂಲದವರು.</p>.<p>ಹಳೆ ಟೈರ್ಗಳನ್ನು ತಂದುಈ ಕಾರ್ಖಾನೆಯಲ್ಲಿ ಕರಗಿಸಿ ಅದರಿಂದ ಬರುವ ಆಯಿಲ್ ಮತ್ತು ಕಾರ್ಬನ್ ಅನ್ನು ಸಿಮೆಂಟ್ ಫ್ಯಾಕ್ಟರಿಗಳಿಗೆ, ಟೈರ್ ಒಳಗಿರುವ ತಂತಿಗಳನ್ನು ಗುಜರಿ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.</p>.<p class="Subhead">ಘಟನೆ ವಿವರ: ‘ಬಾಯ್ಲರ್ನಲ್ಲಿ 8 ಕಾರ್ಮಿಕರು ಹಳೆ ಟೈರ್ಗಳನ್ನ ಸುಟ್ಟು ಆಯಿಲ್ ತೆಗೆಯುವ ಟೆಸ್ಟಿಂಗ್ ಕೆಲಸ ಮಾಡುತ್ತಿದ್ದರು. ಆದರೆ, ಬಾಯ್ಲರ್ನ ಮುಚ್ಚಳ ತೆರೆದುಕೊಂಡಿಲ್ಲ. ಆಗ ಎಲ್ಲಾ ಕಾರ್ಮಿಕರು ಸೇರಿ ತೆರೆಯಲು ಯತ್ನಿಸಿದಾಗ ಸ್ಫೋಟಗೊಂಡಿದೆ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೈದಾಪುರ (ಯಾದಗಿರಿ ಜಿಲ್ಲೆ):</strong>ಇಲ್ಲಿಗೆ ಸಮೀಪದ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿರುವ ಎಸ್.ಬಿ. ಪ್ರಾರಲೆಸಸ್ ಕಾರ್ಖಾನೆಯಲ್ಲಿ ಮಂಗಳವಾರ ಬಾಯ್ಲರ್ ಸ್ಫೋಟಗೊಂಡು ಎಂಟು ಕಾರ್ಮಿಕರಿಗೆ ಗಾಯಗಳಾಗಿವೆ.</p>.<p>ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೈದರಾಬಾದ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಹುಸೇನ್ ಸಾಬ್, ಆರೀಫ್, ಸೂಪಿಯಾನ್, ಸಮೀರ್, ಇಮ್ರಾನ್, ಇಮ್ರಾನ್ ಶಬ್ಬೀರ್, ರವಿಕುಮಾರ, ವಿಜಯ್ ಗಾಯಗೊಂಡವರು. ಆರು ಜನ ಕಡೇಚೂರು, ಉಳಿದವರು ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಮೂಲದವರು.</p>.<p>ಹಳೆ ಟೈರ್ಗಳನ್ನು ತಂದುಈ ಕಾರ್ಖಾನೆಯಲ್ಲಿ ಕರಗಿಸಿ ಅದರಿಂದ ಬರುವ ಆಯಿಲ್ ಮತ್ತು ಕಾರ್ಬನ್ ಅನ್ನು ಸಿಮೆಂಟ್ ಫ್ಯಾಕ್ಟರಿಗಳಿಗೆ, ಟೈರ್ ಒಳಗಿರುವ ತಂತಿಗಳನ್ನು ಗುಜರಿ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.</p>.<p class="Subhead">ಘಟನೆ ವಿವರ: ‘ಬಾಯ್ಲರ್ನಲ್ಲಿ 8 ಕಾರ್ಮಿಕರು ಹಳೆ ಟೈರ್ಗಳನ್ನ ಸುಟ್ಟು ಆಯಿಲ್ ತೆಗೆಯುವ ಟೆಸ್ಟಿಂಗ್ ಕೆಲಸ ಮಾಡುತ್ತಿದ್ದರು. ಆದರೆ, ಬಾಯ್ಲರ್ನ ಮುಚ್ಚಳ ತೆರೆದುಕೊಂಡಿಲ್ಲ. ಆಗ ಎಲ್ಲಾ ಕಾರ್ಮಿಕರು ಸೇರಿ ತೆರೆಯಲು ಯತ್ನಿಸಿದಾಗ ಸ್ಫೋಟಗೊಂಡಿದೆ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>