<p><strong>ಸುರಪುರ</strong>: ತಾಲ್ಲೂಕಿನ ಹಾಲಗೇರಾ ಗ್ರಾಮದ ಭತ್ತದ ಗದ್ದೆಯಲ್ಲಿ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ಸಹಕಾರದಿಂದ ಸೋಮವಾರ ಎರಡು ಮೊಸಳೆ ಸೆರೆ ಹಿಡಿದಿದ್ದಾರೆ.</p>.<p>ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾದ ಕಾರಣ ಮೊಸಳೆಗಳು ಆಹಾರ ಅರಸಿ ಕೆರೆ, ಹಳ್ಳಕೊಳ್ಳ ಮತ್ತು ಹೊಲಗಳಿಗೆ ನುಗ್ಗುತ್ತಿವೆ. ತಾಲ್ಲೂಕಿನ ಹಾಲಗೇರಾ ಗ್ರಾಮ ವ್ಯಾಪ್ತಿಯ ಕೆರೆಗೆ ಕಾಲುವೆಯಿಂದ ನೀರು ಬರುತ್ತದೆ. ಕೆರೆಯ ಕೆಳಭಾಗದಲ್ಲಿರುವ ಭತ್ತದ ಗದ್ದೆಗಳಿಗೆ ಮೊಸಳೆ ನುಗ್ಗಿವೆ. </p>.<p>ಅಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕರು ನೋಡಿ ಕರವೇ ಸದಸ್ಯ ಭೀಮರಾಯ ಚಿಕ್ಕಮೇಟಿ ಅವರಿಗೆ ತಿಳಿಸಿದಾಗ ಅವರು ವಲಯ ಅರಣ್ಯ ಅಧಿಕಾರಿ ಗುಂಡುಸಿಂಗ್ ಗಮನಕ್ಕೆ ತಂದಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಬಸವರಾಜ ನಾಯಕ ನೇತೃತ್ವದಲ್ಲಿ ತಂಡ ರಚಿಸಿ ಮೊಸಳೆಗಳನ್ನು ಸೆರೆ ಹಿಡಿದಿದ್ದಾರೆ. </p>.<p>’ಒಂದು ಮೊಸಳೆ 40 ಕೆಜಿ ಭಾರವಿದ್ದು, 5 ಅಡಿ ಉದ್ದವಿದೆ. ಇನ್ನೊಂದು 60 ಕೆಜಿ ಭಾರವಿದ್ದು, 7 ಅಡಿ ಉದ್ದ ಇದೆ. ಮೊಸಳೆಗಳನ್ನು ಸೆರೆ ಹಿಡಿದು ಮಂಗಳವಾರ ನಾರಾಯಣಪುರದ ಜಲಾಶಯದ ಹಿನ್ನೀರಿನಲ್ಲಿ ಬಿಡಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಗುಂಡುಸಿಂಗ್ ತಿಳಿಸಿದ್ದಾರೆ.</p>.<p>ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಬಸವರಾಜ ನಾಯಕ, ಗಸ್ತು ವನಪಾಲಕ ರಾಜಪ್ಪ, ಅರಣ್ಯ ವೀಕ್ಷಕರಾದ ಬಸವರಾಜ, ವರುಣ, ಶಿವರಾಜ, ಸಿಬ್ಬಂದಿ ಗಳಾದ ಹಣಮಂತನಾಯಕ, ಮೌನೇಶ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ತಾಲ್ಲೂಕಿನ ಹಾಲಗೇರಾ ಗ್ರಾಮದ ಭತ್ತದ ಗದ್ದೆಯಲ್ಲಿ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ಸಹಕಾರದಿಂದ ಸೋಮವಾರ ಎರಡು ಮೊಸಳೆ ಸೆರೆ ಹಿಡಿದಿದ್ದಾರೆ.</p>.<p>ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾದ ಕಾರಣ ಮೊಸಳೆಗಳು ಆಹಾರ ಅರಸಿ ಕೆರೆ, ಹಳ್ಳಕೊಳ್ಳ ಮತ್ತು ಹೊಲಗಳಿಗೆ ನುಗ್ಗುತ್ತಿವೆ. ತಾಲ್ಲೂಕಿನ ಹಾಲಗೇರಾ ಗ್ರಾಮ ವ್ಯಾಪ್ತಿಯ ಕೆರೆಗೆ ಕಾಲುವೆಯಿಂದ ನೀರು ಬರುತ್ತದೆ. ಕೆರೆಯ ಕೆಳಭಾಗದಲ್ಲಿರುವ ಭತ್ತದ ಗದ್ದೆಗಳಿಗೆ ಮೊಸಳೆ ನುಗ್ಗಿವೆ. </p>.<p>ಅಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕರು ನೋಡಿ ಕರವೇ ಸದಸ್ಯ ಭೀಮರಾಯ ಚಿಕ್ಕಮೇಟಿ ಅವರಿಗೆ ತಿಳಿಸಿದಾಗ ಅವರು ವಲಯ ಅರಣ್ಯ ಅಧಿಕಾರಿ ಗುಂಡುಸಿಂಗ್ ಗಮನಕ್ಕೆ ತಂದಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಬಸವರಾಜ ನಾಯಕ ನೇತೃತ್ವದಲ್ಲಿ ತಂಡ ರಚಿಸಿ ಮೊಸಳೆಗಳನ್ನು ಸೆರೆ ಹಿಡಿದಿದ್ದಾರೆ. </p>.<p>’ಒಂದು ಮೊಸಳೆ 40 ಕೆಜಿ ಭಾರವಿದ್ದು, 5 ಅಡಿ ಉದ್ದವಿದೆ. ಇನ್ನೊಂದು 60 ಕೆಜಿ ಭಾರವಿದ್ದು, 7 ಅಡಿ ಉದ್ದ ಇದೆ. ಮೊಸಳೆಗಳನ್ನು ಸೆರೆ ಹಿಡಿದು ಮಂಗಳವಾರ ನಾರಾಯಣಪುರದ ಜಲಾಶಯದ ಹಿನ್ನೀರಿನಲ್ಲಿ ಬಿಡಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಗುಂಡುಸಿಂಗ್ ತಿಳಿಸಿದ್ದಾರೆ.</p>.<p>ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಬಸವರಾಜ ನಾಯಕ, ಗಸ್ತು ವನಪಾಲಕ ರಾಜಪ್ಪ, ಅರಣ್ಯ ವೀಕ್ಷಕರಾದ ಬಸವರಾಜ, ವರುಣ, ಶಿವರಾಜ, ಸಿಬ್ಬಂದಿ ಗಳಾದ ಹಣಮಂತನಾಯಕ, ಮೌನೇಶ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>