<p><strong>ಸುರಪುರ: </strong>ಯುರಿಯಾ ಖರೀದಿಸಲು ರೈತರು ಪ್ರತಿನಿತ್ಯ ಗೊಬ್ಬರದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ದೃಶ್ಯ ನಿತ್ಯ ಕಂಡು ಬರುತ್ತಿದೆ. </p><p>ಯುರಿಯಾ ಈ ಅಂಗಡಿಯಲ್ಲಿ ದೊರಕುತ್ತಿದೆ ಎಂಬ ವದಂತಿ ಹರಡುತ್ತಿದ್ದಂತೆ ರೈತರು ತಂಡೋಪತಂಡವಾಗಿ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ.</p><p>ಒಂದು ಅಂಗಡಿಯಲ್ಲಿ ಒಂದು ಲೋಡ್ ಯುರಿಯಾ ದೊರೆತರೆ ದೊಡ್ಡದು. ಹೀಗಾಗಿ ರೈತರ ನೂಕುನುಗ್ಗಲು ಉಂಟಾಗುತ್ತಿದೆ. ರೈತರ ಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.</p><p>ಬುಧವಾರ ನಗರದ ವೇಣುಗೋಪಾಲಸ್ವಾಮಿ ರಸ್ತೆಯ ಅಂಗಡಿಯೊಂದರ ಮುಂದೆ ರೈತರ ಗುಂಪು ಹೆಚ್ಚಾಗಿತ್ತು. ಗೊಬ್ಬರ ನನಗೆ ಬೇಕು ತನಗೆ ಬೇಕು ಎಂದು ಗಲಾಟೆ ಆರಂಭವಾಯಿತು. ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ರೈತನೊಬ್ಬನಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.</p><p>ಹತ್ತಿ, ತೊಗರಿ, ಶೇಂಗಾ, ಹೆಸರು, ಜೋಳ ಸೇರಿದಂತೆ ವಿವಿಧ ಬೆಳೆಗಳು ಬೆಳೆದು ನಿಂತಿದ್ದು, ಯುರಿಯಾ ಗೊಬ್ಬರ ಹಾಕಬೇಕಾಗಿದೆ. ಹಾಕದಿದ್ದರೆ ಇಳುವರಿ ಕುಂಠಿತವಾಗುತ್ತದೆ ಎನ್ನುತ್ತಾರೆ ರೈತರು.</p><p>ಒಬ್ಬ ರೈತನಿಗೆ ಎರಡು ಚೀಲ ಮಾತ್ರ ಯುರಿಯಾ ಕೊಡಲಾಗುತ್ತಿದೆ. ಬೆಲೆಯೂ ಹೆಚ್ಚಿಗೆ ತೆಗೆದುಕೊಳ್ಳುತ್ತಿದ್ದಾರೆ. ತಕ್ಷಣ ಜನಪ್ರತಿನಿಧಿಗಳು ನೆರವಿಗೆ ಬರಬೇಕು ಎಂದು ರೈತರು ಆಗ್ರಹಿಸುತ್ತಾರೆ.</p><p>ರೈತರ ಸಂಖ್ಯೆ ಹೆಚ್ಚಿರುವ ಅಂಗಡಿಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ರಸಗೊಬ್ಬರಗಳ ಬದಲಿಗೆ ನ್ಯಾನೋ ಗೊಬ್ಬರಗಳನ್ನು ಬಳಿಸಿ. ಇದರಿಂದ ಬೆಲೆಯೂ ಕಡಿಮೆ, ಇಳುವರಿ ಹೆಚ್ಚಾಗುತ್ತದೆ. ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಹೇಳುವ ತಿಳಿವಳಿಕೆಯನ್ನು ರೈತರು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ: </strong>ಯುರಿಯಾ ಖರೀದಿಸಲು ರೈತರು ಪ್ರತಿನಿತ್ಯ ಗೊಬ್ಬರದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ದೃಶ್ಯ ನಿತ್ಯ ಕಂಡು ಬರುತ್ತಿದೆ. </p><p>ಯುರಿಯಾ ಈ ಅಂಗಡಿಯಲ್ಲಿ ದೊರಕುತ್ತಿದೆ ಎಂಬ ವದಂತಿ ಹರಡುತ್ತಿದ್ದಂತೆ ರೈತರು ತಂಡೋಪತಂಡವಾಗಿ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ.</p><p>ಒಂದು ಅಂಗಡಿಯಲ್ಲಿ ಒಂದು ಲೋಡ್ ಯುರಿಯಾ ದೊರೆತರೆ ದೊಡ್ಡದು. ಹೀಗಾಗಿ ರೈತರ ನೂಕುನುಗ್ಗಲು ಉಂಟಾಗುತ್ತಿದೆ. ರೈತರ ಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.</p><p>ಬುಧವಾರ ನಗರದ ವೇಣುಗೋಪಾಲಸ್ವಾಮಿ ರಸ್ತೆಯ ಅಂಗಡಿಯೊಂದರ ಮುಂದೆ ರೈತರ ಗುಂಪು ಹೆಚ್ಚಾಗಿತ್ತು. ಗೊಬ್ಬರ ನನಗೆ ಬೇಕು ತನಗೆ ಬೇಕು ಎಂದು ಗಲಾಟೆ ಆರಂಭವಾಯಿತು. ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ರೈತನೊಬ್ಬನಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.</p><p>ಹತ್ತಿ, ತೊಗರಿ, ಶೇಂಗಾ, ಹೆಸರು, ಜೋಳ ಸೇರಿದಂತೆ ವಿವಿಧ ಬೆಳೆಗಳು ಬೆಳೆದು ನಿಂತಿದ್ದು, ಯುರಿಯಾ ಗೊಬ್ಬರ ಹಾಕಬೇಕಾಗಿದೆ. ಹಾಕದಿದ್ದರೆ ಇಳುವರಿ ಕುಂಠಿತವಾಗುತ್ತದೆ ಎನ್ನುತ್ತಾರೆ ರೈತರು.</p><p>ಒಬ್ಬ ರೈತನಿಗೆ ಎರಡು ಚೀಲ ಮಾತ್ರ ಯುರಿಯಾ ಕೊಡಲಾಗುತ್ತಿದೆ. ಬೆಲೆಯೂ ಹೆಚ್ಚಿಗೆ ತೆಗೆದುಕೊಳ್ಳುತ್ತಿದ್ದಾರೆ. ತಕ್ಷಣ ಜನಪ್ರತಿನಿಧಿಗಳು ನೆರವಿಗೆ ಬರಬೇಕು ಎಂದು ರೈತರು ಆಗ್ರಹಿಸುತ್ತಾರೆ.</p><p>ರೈತರ ಸಂಖ್ಯೆ ಹೆಚ್ಚಿರುವ ಅಂಗಡಿಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ರಸಗೊಬ್ಬರಗಳ ಬದಲಿಗೆ ನ್ಯಾನೋ ಗೊಬ್ಬರಗಳನ್ನು ಬಳಿಸಿ. ಇದರಿಂದ ಬೆಲೆಯೂ ಕಡಿಮೆ, ಇಳುವರಿ ಹೆಚ್ಚಾಗುತ್ತದೆ. ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಹೇಳುವ ತಿಳಿವಳಿಕೆಯನ್ನು ರೈತರು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>