<p><strong>ಹತ್ತಿಕುಣಿ (ಯರಗೋಳ</strong>) ಸಫಲ್ ಮಾರಾಟ ಕೇಂದ್ರದಲ್ಲಿ ಜನರಿಗೆ ಸಿಗುವ ಗುಣಮಟ್ಟದ ಸಿರಿಧಾನ್ಯಗಳು ಮತ್ತು ಖಾದ್ಯ ತೈಲಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಮಾರಾಟ ಹೆಚ್ಚಳಕ್ಕೆ ಗಮನ ಹರಿಸಲಾಗುವುದು’ ಎಂದು ಹತ್ತಿಕುಣಿ ಕೆಓಎಂ ಅಧ್ಯಕ್ಷ ಶರಣಪ್ಪ ಸೋಮಣ್ಣೋರ ಹೇಳಿದರು.</p>.<p>ಸಂಘದ ಕಚೇರಿಯಲ್ಲಿ ನಡೆದ ಸಂಘದ 3ನೇ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.</p>.<p>‘ಈಗಾಗಲೇ ಸಂಘದ ಹೊಸ ಆಡಳಿತ ಮಂಡಳಿ ಅವರು ಕೂಡಿ, ಹೊಸ ಕಾಯಕಲ್ಪ ನೀಡುವ ಉದ್ದೇಶದಿಂದ ಸಭೆ ಕರೆದು ನಿರ್ದೇಶಕರ ಜೊತೆ ರಚನಾತ್ಮಕ ವಿಷಯಗಳನ್ನು ಚರ್ಚಿಸಿ, ಸಂಘದ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.</p>.<p>ಸಂಘದ ಕಾರ್ಯದರ್ಶಿ ವೈಜನಾಥರಡ್ಡಿ ಪಾಟೀಲ್ ಮಾತನಾಡಿ,‘ಸಂಘದ ಸಫಲ್ ಮಾರಾಟ ಕೇಂದ್ರದ ಮೂಲಕ 2 ತಿಂಗಳಲ್ಲಿ 1 ಸಾವಿರ ಲೀಟರ್ಗೂ ಹೆಚ್ಚು ಶೇಂಗಾ, ಸೂರ್ಯಕಾಂತಿ ತೈಲ ಮಾರಾಟ ಹಾಗೂ ಜನರು ದೈನಂದಿನ ಬಳಕೆಗೆ ಬೇಕಾಗುವ ಆಹಾರ ಪದಾರ್ಥಗಳ ಮಾರಾಟದಲ್ಲಿ ಪ್ರಗತಿ ಕಂಡಿದ್ದೇವೆ’ ಎಂದರು.</p>.<p>ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಖಾಜಾ ಮೈನೋದ್ದೀನ್ ಇನಾಂದಾರ, ನಿರ್ದೇಶಕರಾದ ಕೀರಲಿಂಗಪ್ಪ ದೇವಕರ್, ಶರಣಪ್ಪ ಬಡ್ಡರ್, ಶರಣಪ್ಪ ದ್ಯಾರನೋರ, ಚಂದಪ್ಪ ತಮ್ಮಣ್ಣೋರ, ಶಿವಪ್ಪ ಗಣಪೂರ, ಶರಣಪ್ಪ ಗಂಡೆನೋರ, ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹತ್ತಿಕುಣಿ (ಯರಗೋಳ</strong>) ಸಫಲ್ ಮಾರಾಟ ಕೇಂದ್ರದಲ್ಲಿ ಜನರಿಗೆ ಸಿಗುವ ಗುಣಮಟ್ಟದ ಸಿರಿಧಾನ್ಯಗಳು ಮತ್ತು ಖಾದ್ಯ ತೈಲಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಮಾರಾಟ ಹೆಚ್ಚಳಕ್ಕೆ ಗಮನ ಹರಿಸಲಾಗುವುದು’ ಎಂದು ಹತ್ತಿಕುಣಿ ಕೆಓಎಂ ಅಧ್ಯಕ್ಷ ಶರಣಪ್ಪ ಸೋಮಣ್ಣೋರ ಹೇಳಿದರು.</p>.<p>ಸಂಘದ ಕಚೇರಿಯಲ್ಲಿ ನಡೆದ ಸಂಘದ 3ನೇ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.</p>.<p>‘ಈಗಾಗಲೇ ಸಂಘದ ಹೊಸ ಆಡಳಿತ ಮಂಡಳಿ ಅವರು ಕೂಡಿ, ಹೊಸ ಕಾಯಕಲ್ಪ ನೀಡುವ ಉದ್ದೇಶದಿಂದ ಸಭೆ ಕರೆದು ನಿರ್ದೇಶಕರ ಜೊತೆ ರಚನಾತ್ಮಕ ವಿಷಯಗಳನ್ನು ಚರ್ಚಿಸಿ, ಸಂಘದ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.</p>.<p>ಸಂಘದ ಕಾರ್ಯದರ್ಶಿ ವೈಜನಾಥರಡ್ಡಿ ಪಾಟೀಲ್ ಮಾತನಾಡಿ,‘ಸಂಘದ ಸಫಲ್ ಮಾರಾಟ ಕೇಂದ್ರದ ಮೂಲಕ 2 ತಿಂಗಳಲ್ಲಿ 1 ಸಾವಿರ ಲೀಟರ್ಗೂ ಹೆಚ್ಚು ಶೇಂಗಾ, ಸೂರ್ಯಕಾಂತಿ ತೈಲ ಮಾರಾಟ ಹಾಗೂ ಜನರು ದೈನಂದಿನ ಬಳಕೆಗೆ ಬೇಕಾಗುವ ಆಹಾರ ಪದಾರ್ಥಗಳ ಮಾರಾಟದಲ್ಲಿ ಪ್ರಗತಿ ಕಂಡಿದ್ದೇವೆ’ ಎಂದರು.</p>.<p>ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಖಾಜಾ ಮೈನೋದ್ದೀನ್ ಇನಾಂದಾರ, ನಿರ್ದೇಶಕರಾದ ಕೀರಲಿಂಗಪ್ಪ ದೇವಕರ್, ಶರಣಪ್ಪ ಬಡ್ಡರ್, ಶರಣಪ್ಪ ದ್ಯಾರನೋರ, ಚಂದಪ್ಪ ತಮ್ಮಣ್ಣೋರ, ಶಿವಪ್ಪ ಗಣಪೂರ, ಶರಣಪ್ಪ ಗಂಡೆನೋರ, ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>