ವಿದ್ಯುತ್ ಸಮರ್ಪಕವಾಗಿ ಸರಬರಾಜು ಮಾಡದೇ ಇರುವುದರಿಂದ ನಾಟಿ ಮಾಡಿದ ಭತ್ತಕ್ಕೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. 7 ಗಂಟೆ ವಿದ್ಯುತ್ ಸರಬರಾಜು ಮಾಡದಿದ್ದರೆ ಹೋರಾಟ ಮಾಡುತ್ತೇವೆ
ಸಂಗಾರೆಡ್ಡಿ, ಗೊಡಿಹಾಳ ರೈತ
ತಾಲ್ಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು ರೈತರು ತೀವ್ರ ಕಂಗಾಲಾಗಿದ್ದಾರೆ. ಕೂಡಲೇ ಸಮರ್ಪಕ ವಿದ್ಯುತ್ ಒದಗಿಸಬೇಕು. ರೈತನ ಬಗ್ಗೆ ಸರ್ಕಾರಗಳು ಮೊದಲು ಕಾಳಜಿ ವಹಿಸಬೇಕು.
ಮಂಜುನಾಥ ರೆಡ್ಡಿ ಚೆನ್ನೂರ, ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಆಷಾಢ ಗಾಳಿಯಿಂದ ಲೈನ್ಟ್ರಿಪ್ ಆಗುತ್ತಿದೆ. ಇದರಿಂದಾಗಿ ಸತತವಾಗಿ 7 ಗಂಟೆ ವಿದ್ಯುತ್ ಕೊಡಲು ತೊಂದರೆಯಾಗುತ್ತಿದೆ. ಆದರೂ ಬೆಳಿಗ್ಗೆ ಹಾಗೂ ರಾತ್ರಿ ವಿದ್ಯುತ್ ಸರಬರಾಜು ಮಾಡುತ್ತಿದ್ದೇವೆ.