<p><strong>ಯಾದಗಿರಿ</strong>: ತಾಲ್ಲೂಕಿನ ಠಾಣಾಗುಂದಿ (ವಿಶ್ವಾಸಪುರ ನಗರದ) ಆರಾಧ್ಯ ದೈವ ವೀರಾಂಜನೇಯ ಸ್ವಾಮಿಯ 16ನೇ ವರ್ಷದ ಜಾತ್ರಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.</p>.<p>ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಗಂಟೆಗೆ ಸ್ವಾಮಿಗೆ ಚೆನ್ನವೀರಯ್ಯ ಸ್ವಾಮಿ, ಶರಣಪ್ಪ ಪೂಜಾರಿ, ಲಕ್ಷ್ಮಣ ಪವಾರ್ ಇವರಿಂದ ರುದ್ರಾಭಿಷೇಕ ನೆರವೇರಿತು. ನಂತರ ಬೆಳಿಗ್ಗೆ 8.30ಕ್ಕೆ ಹೇಳಿಕೆ ಕಾರ್ಯಕ್ರಮ ಜರುಗಿತು. ಸಂಜೆ 4-35ಕ್ಕೆ ಸುಮಂಗಲಿಯರಿಂದ ಪೂರ್ಣಕುಂಭ ಮೆರವಣಿಗೆಯ ಮಧ್ಯೆ ವೀರಾಂಜನೇಯಸ್ವಾಮಿ ಸ್ವಾಮಿಯ ಮೂರ್ತಿಯ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.</p>.<p>ವಾದ್ಯ ಮೇಳಗಳೊಂದಿಗೆ ಸಂಜೆ 6 ಗಂಟೆಗೆ ರಥೋತ್ಸವ ಜರುಗಿತು. ನಂತರ ಅನ್ನದಾಸೋಹ ಪ್ರಸಾದ ಜರುಗಿದ್ದವು. ತದನಂತ ಧರ್ಮಸಭೆ ಜರುಗಿತು. ಸಭೆಯಲ್ಲಿ ರೆಡ್ಡಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಶರಣಪ್ಪ ಪೂಜಾರಿ ಠಾಣಾಗುಂದಿ, ಗೋವಿಂದಪ್ಪ ಭಾಗವಹಿಸಿದ್ದರು.</p>.<p>ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ಅವರು 16 ನೇ ವರ್ಷದ ರಥೋತ್ಸವ ಅದ್ಧೂರಿಯಾಗಿ ಜರುಗಿತು. ಈ ಪುಣ್ಯ ಕ್ಷೇತ್ರಕ್ಕೆ ಸರ್ಕಾರದ ಸೌಲಭ್ಯ ಸಿಗಬೇಕು. ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ ಆದರೆ ಬಡವರಿಗೆ ಅನುಕೂಲ ಆಗುತ್ತೆಂಬ ಭಾವನೆ ವ್ಯಕ್ತಪಡಿಸಿದರು.</p>.<p>ಈ ಕಾರ್ಯಕ್ರಮದಲ್ಲಿ ಖೇಮ್ ಸಿಂಗ್, ಲಕ್ಷ್ಮಣ್, ರವಿ, ಭೀಮಸಿಂಗ್ ಮನೋಹರ್, ಬೋಜು, ಶರಣು ಗೋಪಾಲ್ ಸೇರಿ ಅನೇಕ ಸಾರ್ವಜನಿಕರು ಜಾತ್ರೆಯಲ್ಲಿ ಭಾಗಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ತಾಲ್ಲೂಕಿನ ಠಾಣಾಗುಂದಿ (ವಿಶ್ವಾಸಪುರ ನಗರದ) ಆರಾಧ್ಯ ದೈವ ವೀರಾಂಜನೇಯ ಸ್ವಾಮಿಯ 16ನೇ ವರ್ಷದ ಜಾತ್ರಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.</p>.<p>ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಗಂಟೆಗೆ ಸ್ವಾಮಿಗೆ ಚೆನ್ನವೀರಯ್ಯ ಸ್ವಾಮಿ, ಶರಣಪ್ಪ ಪೂಜಾರಿ, ಲಕ್ಷ್ಮಣ ಪವಾರ್ ಇವರಿಂದ ರುದ್ರಾಭಿಷೇಕ ನೆರವೇರಿತು. ನಂತರ ಬೆಳಿಗ್ಗೆ 8.30ಕ್ಕೆ ಹೇಳಿಕೆ ಕಾರ್ಯಕ್ರಮ ಜರುಗಿತು. ಸಂಜೆ 4-35ಕ್ಕೆ ಸುಮಂಗಲಿಯರಿಂದ ಪೂರ್ಣಕುಂಭ ಮೆರವಣಿಗೆಯ ಮಧ್ಯೆ ವೀರಾಂಜನೇಯಸ್ವಾಮಿ ಸ್ವಾಮಿಯ ಮೂರ್ತಿಯ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.</p>.<p>ವಾದ್ಯ ಮೇಳಗಳೊಂದಿಗೆ ಸಂಜೆ 6 ಗಂಟೆಗೆ ರಥೋತ್ಸವ ಜರುಗಿತು. ನಂತರ ಅನ್ನದಾಸೋಹ ಪ್ರಸಾದ ಜರುಗಿದ್ದವು. ತದನಂತ ಧರ್ಮಸಭೆ ಜರುಗಿತು. ಸಭೆಯಲ್ಲಿ ರೆಡ್ಡಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಶರಣಪ್ಪ ಪೂಜಾರಿ ಠಾಣಾಗುಂದಿ, ಗೋವಿಂದಪ್ಪ ಭಾಗವಹಿಸಿದ್ದರು.</p>.<p>ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ಅವರು 16 ನೇ ವರ್ಷದ ರಥೋತ್ಸವ ಅದ್ಧೂರಿಯಾಗಿ ಜರುಗಿತು. ಈ ಪುಣ್ಯ ಕ್ಷೇತ್ರಕ್ಕೆ ಸರ್ಕಾರದ ಸೌಲಭ್ಯ ಸಿಗಬೇಕು. ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ ಆದರೆ ಬಡವರಿಗೆ ಅನುಕೂಲ ಆಗುತ್ತೆಂಬ ಭಾವನೆ ವ್ಯಕ್ತಪಡಿಸಿದರು.</p>.<p>ಈ ಕಾರ್ಯಕ್ರಮದಲ್ಲಿ ಖೇಮ್ ಸಿಂಗ್, ಲಕ್ಷ್ಮಣ್, ರವಿ, ಭೀಮಸಿಂಗ್ ಮನೋಹರ್, ಬೋಜು, ಶರಣು ಗೋಪಾಲ್ ಸೇರಿ ಅನೇಕ ಸಾರ್ವಜನಿಕರು ಜಾತ್ರೆಯಲ್ಲಿ ಭಾಗಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>