ಶಹಾಪುರ: ‘ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ. ವಿಶ್ವಕರ್ಮ ಸಮುದಾಯ ಪ್ರತಿಯೊಂದು ಕಸುಬಿನ ಮೂಲ. ಇಂದಿಗೂ ಪಂಚ ಕಸುಬುಗಳನ್ನು ಅನುಸರಿಸುವ ಸಮುದಾಯ ಎಲ್ಲ ವರ್ಗದ ಜನರಿಗೂ ಅಗತ್ಯವಾದ ವಸ್ತುಗಳನ್ನು ತಯಾರಿಸಿ ಕೊಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ’ ಎಂದು ಅಜೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಕಾಳಿಕಾದೇವಿ ದೇವಸ್ಥಾನ ಆವರಣದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಂಕರ್ ಗುತ್ತರಗಿ, ರವೀಂದ್ರನಾಥ ಪತ್ತಾರ್, ದೇವಿಂದ್ರಪ್ಪ ಕನ್ಯಾಕೊಳ್ಳುರ, ಕಾಳಹಸ್ತಿ, ಗಂಗಾಧರ ವಿಶ್ವಕರ್ಮ, ಸುಧಾಕರ ಅಣಿಕೇರಿ, ರಾಜು ಬೊಮ್ಮನಹಳ್ಳಿ, ಅಶೋಕ್ ಹಳಿಪೇಠ, ಬಸವರಾಜ ಬೊಮ್ಮನಹಳ್ಳಿ, ರವಿ ದೋರನಹಳ್ಳಿ ಇದ್ದರು.