<p><strong>ಯಾದಗಿರಿ:</strong> ಕಳೆದ ವಾರ ದಸರಾ ಹಬ್ಬದ ಸಂದರ್ಭದಲ್ಲಿ ತರಕಾರಿ ಬೆಲೆ ಗಗನಕ್ಕೆ ಏರಿಕೆಯಾಗಿತ್ತು. ಈ ವಾರ ತರಕಾರಿ ಬೆಲೆ ಕೊಂಚ ಇಳಿಕೆಯಾಗಿದ್ದು, ಗ್ರಾಹಕರಿಗೆ ಕೊಂಚ ಸಮಾಧಾನ ಮೂಡಿಸಿದೆ.</p>.<p>ಹಬ್ಬದ ಸಂದರ್ಭದಲ್ಲಿ ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸಿದ್ದರು. ಕಡಿಮೆ ಪ್ರಮಾಣದಲ್ಲಿ ಖರೀದಿಸಿರುವುದು ಕಂಡುಬಂದಿತು.</p>.<p>ನಗರದ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ಕೆ.ಜಿಗೆ ₹30 ಇಳಿಕೆಯಾಗಿ ಈಗ ₹70 ಕೆ.ಜಿ ಮಾರಾಟವಾಗುತ್ತಿದೆ. ಕಳೆದ ವಾರಕ್ಕಿಂತ ಬೀನ್ಸ್ ಕೆ.ಜಿಗೆ ₹20 ಹೆಚ್ಚಳವಾಗಿ ₹100 ದರವಿದೆ.</p>.<p>ಗೋಬಿ ಕಳೆದ ವಾರ ₹100 ಕೆ.ಜಿ ಇತ್ತು. ಈ ವಾರ ₹80ಗೆ ಇಳಿಕೆಯಾಗಿದೆ. ಚವಳೆಕಾಯಿ ಕಳೆದ ವಾರಕ್ಕಿಂತ ₹40 ಇಳಿಕೆಯಾಗಿ ₹80 ಕೆ.ಜಿಗೆ ಮಾರಾಟವಾಗುತ್ತಿದೆ.</p>.<p>ಮೆಣಸಿನಕಾಯಿ ₹30 ಕೆ.ಜಿ, ಸೋರೆಕಾಯಿ ₹80 ಇದ್ದಿದ್ದು, ₹40ಗೆ ಇಳಿಕೆಯಾಗಿದೆ.</p>.<p class="Subhead">ದರ ಏರಿಕೆ: ದೊಣ್ಣೆಮೆಣಸಿನಕಾಯಿ ಕಳೆದ ವಾರ ₹60 ಕೆ.ಜಿ ಇದ್ದಿದ್ದು, ಈ ವಾರ ₹80ಗೆ ಏರಿಕೆಯಾಗಿದೆ. ಬಿಟ್ರೂಟ್ ಕಳೆದ ವಾರಕ್ಕಿಂತ ಕೆ.ಜಿಗೆ ₹20 ಹೆಚ್ಚಳವಾಗಿದೆ. ಸದ್ಯ ₹80ಗೆ ಕೆಜಿ ಇದೆ.ಹಾಗಲಕಾಯಿಕೆ.ಜಿಗೆ ₹80,ತೊಂಡೆಕಾಯಿ₹80 ಇದ್ದು, ಕೆ.ಜಿಗೆ ₹20 ಹೆಚ್ಚಳವಾಗಿದೆ.</p>.<p>ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಆಲೂಗಡ್ಡೆ, ಕ್ಯಾಬೇಜ್, ಗಜ್ಜರಿ, ಸೌತೆಕಾಯಿ, ಹೀರೆಕಾಯಿ, ಹಾಗಲಕಾಯಿ, ತೊಂಡೆಕಾಯಿ ಕಳೆದ ವಾರದಂತೆ ಈ ವಾರವೂ ದರ ಸ್ಥಿರವಾಗಿದೆ.</p>.<p class="Subhead"><strong>ಸೊಪ್ಪುಗಳ ದರ:</strong><br />ಕೊತಂಬರಿ ಸೊಪ್ಪು ಒಂದು ಕಟ್ಟುಗೆ ₹30, ಪುದೀನಾ ₹30 ಗೆ ಒಂದು ಕಟ್ಟು ಮಾರಾಟವಾಗುತ್ತಿದೆ. ಮೆಂತೆ ₹20ಗೆ 3 ಕಟ್ಟು, ಪಲಾಕ್ ಒಂದು ಕಟ್ಟು ಖರೀದಿಸಿದರೆ ₹10,ಎರಡು ಕಟ್ಟು ಖರೀದಿಸಿದರೆ ₹15ಗೆ ಸಿಗುತ್ತಿದೆ. ಪುಂಡಿಪಲ್ಯೆ, ರಾಜಗಿರಿ ಸೊಪ್ಪು ₹5ಗೆ ಒಂದು ಕಟ್ಟು ಮಾರಾವಾಗುತ್ತಿದೆ.</p>.<p class="Subhead">***</p>.<p class="Subhead">ಕಳೆದ ವಾರದ ಹಬ್ಬದ ಸೀಸನ್ ಇರುವ ಕಾರಣ ತರಕಾರಿ ಬೆಲೆ ಹೆಚ್ಚಳವಾಗಿತ್ತು. ಈ ವಾರ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದ್ದು, ಗ್ರಾಹಕರಿಗೆ ಸಮಾಧಾನ ಮೂಡಿಸಿದೆ</p>.<p class="Subhead"><strong>ದೇವಿಂದ್ರ, ಗ್ರಾಹಕ</strong></p>.<p class="Subhead">***</p>.<p class="Subhead">ತರಕಾರಿ ಬೆಲೆ ಇಳಿಕೆಯಾಗಿದ್ದರೂ ಕೆಲ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಆವಕ ಜಾಸ್ತಿ ಬರುತ್ತಿಲ್ಲ. ಇದರಿಂದ ದರಗಳಲ್ಲಿ ಏರಿಳಿಕೆ ಆಗುತ್ತಿದೆ</p>.<p class="Subhead"><strong>ಶೇಖ ಹೈಮದ್, ವ್ಯಾಪಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಕಳೆದ ವಾರ ದಸರಾ ಹಬ್ಬದ ಸಂದರ್ಭದಲ್ಲಿ ತರಕಾರಿ ಬೆಲೆ ಗಗನಕ್ಕೆ ಏರಿಕೆಯಾಗಿತ್ತು. ಈ ವಾರ ತರಕಾರಿ ಬೆಲೆ ಕೊಂಚ ಇಳಿಕೆಯಾಗಿದ್ದು, ಗ್ರಾಹಕರಿಗೆ ಕೊಂಚ ಸಮಾಧಾನ ಮೂಡಿಸಿದೆ.</p>.<p>ಹಬ್ಬದ ಸಂದರ್ಭದಲ್ಲಿ ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸಿದ್ದರು. ಕಡಿಮೆ ಪ್ರಮಾಣದಲ್ಲಿ ಖರೀದಿಸಿರುವುದು ಕಂಡುಬಂದಿತು.</p>.<p>ನಗರದ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ಕೆ.ಜಿಗೆ ₹30 ಇಳಿಕೆಯಾಗಿ ಈಗ ₹70 ಕೆ.ಜಿ ಮಾರಾಟವಾಗುತ್ತಿದೆ. ಕಳೆದ ವಾರಕ್ಕಿಂತ ಬೀನ್ಸ್ ಕೆ.ಜಿಗೆ ₹20 ಹೆಚ್ಚಳವಾಗಿ ₹100 ದರವಿದೆ.</p>.<p>ಗೋಬಿ ಕಳೆದ ವಾರ ₹100 ಕೆ.ಜಿ ಇತ್ತು. ಈ ವಾರ ₹80ಗೆ ಇಳಿಕೆಯಾಗಿದೆ. ಚವಳೆಕಾಯಿ ಕಳೆದ ವಾರಕ್ಕಿಂತ ₹40 ಇಳಿಕೆಯಾಗಿ ₹80 ಕೆ.ಜಿಗೆ ಮಾರಾಟವಾಗುತ್ತಿದೆ.</p>.<p>ಮೆಣಸಿನಕಾಯಿ ₹30 ಕೆ.ಜಿ, ಸೋರೆಕಾಯಿ ₹80 ಇದ್ದಿದ್ದು, ₹40ಗೆ ಇಳಿಕೆಯಾಗಿದೆ.</p>.<p class="Subhead">ದರ ಏರಿಕೆ: ದೊಣ್ಣೆಮೆಣಸಿನಕಾಯಿ ಕಳೆದ ವಾರ ₹60 ಕೆ.ಜಿ ಇದ್ದಿದ್ದು, ಈ ವಾರ ₹80ಗೆ ಏರಿಕೆಯಾಗಿದೆ. ಬಿಟ್ರೂಟ್ ಕಳೆದ ವಾರಕ್ಕಿಂತ ಕೆ.ಜಿಗೆ ₹20 ಹೆಚ್ಚಳವಾಗಿದೆ. ಸದ್ಯ ₹80ಗೆ ಕೆಜಿ ಇದೆ.ಹಾಗಲಕಾಯಿಕೆ.ಜಿಗೆ ₹80,ತೊಂಡೆಕಾಯಿ₹80 ಇದ್ದು, ಕೆ.ಜಿಗೆ ₹20 ಹೆಚ್ಚಳವಾಗಿದೆ.</p>.<p>ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಆಲೂಗಡ್ಡೆ, ಕ್ಯಾಬೇಜ್, ಗಜ್ಜರಿ, ಸೌತೆಕಾಯಿ, ಹೀರೆಕಾಯಿ, ಹಾಗಲಕಾಯಿ, ತೊಂಡೆಕಾಯಿ ಕಳೆದ ವಾರದಂತೆ ಈ ವಾರವೂ ದರ ಸ್ಥಿರವಾಗಿದೆ.</p>.<p class="Subhead"><strong>ಸೊಪ್ಪುಗಳ ದರ:</strong><br />ಕೊತಂಬರಿ ಸೊಪ್ಪು ಒಂದು ಕಟ್ಟುಗೆ ₹30, ಪುದೀನಾ ₹30 ಗೆ ಒಂದು ಕಟ್ಟು ಮಾರಾಟವಾಗುತ್ತಿದೆ. ಮೆಂತೆ ₹20ಗೆ 3 ಕಟ್ಟು, ಪಲಾಕ್ ಒಂದು ಕಟ್ಟು ಖರೀದಿಸಿದರೆ ₹10,ಎರಡು ಕಟ್ಟು ಖರೀದಿಸಿದರೆ ₹15ಗೆ ಸಿಗುತ್ತಿದೆ. ಪುಂಡಿಪಲ್ಯೆ, ರಾಜಗಿರಿ ಸೊಪ್ಪು ₹5ಗೆ ಒಂದು ಕಟ್ಟು ಮಾರಾವಾಗುತ್ತಿದೆ.</p>.<p class="Subhead">***</p>.<p class="Subhead">ಕಳೆದ ವಾರದ ಹಬ್ಬದ ಸೀಸನ್ ಇರುವ ಕಾರಣ ತರಕಾರಿ ಬೆಲೆ ಹೆಚ್ಚಳವಾಗಿತ್ತು. ಈ ವಾರ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದ್ದು, ಗ್ರಾಹಕರಿಗೆ ಸಮಾಧಾನ ಮೂಡಿಸಿದೆ</p>.<p class="Subhead"><strong>ದೇವಿಂದ್ರ, ಗ್ರಾಹಕ</strong></p>.<p class="Subhead">***</p>.<p class="Subhead">ತರಕಾರಿ ಬೆಲೆ ಇಳಿಕೆಯಾಗಿದ್ದರೂ ಕೆಲ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಆವಕ ಜಾಸ್ತಿ ಬರುತ್ತಿಲ್ಲ. ಇದರಿಂದ ದರಗಳಲ್ಲಿ ಏರಿಳಿಕೆ ಆಗುತ್ತಿದೆ</p>.<p class="Subhead"><strong>ಶೇಖ ಹೈಮದ್, ವ್ಯಾಪಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>