<p><strong>ಯಾದಗಿರಿ</strong>: ನಗರಸಭೆಯ 2022-23ನೇ ಸಾಲಿನ ₹43.49 ಲಕ್ಷ ಕೊರತೆ ಬಜೆಟ್ ಮಂಡನೆ ಮಾಡಲಾಯಿತು.</p>.<p>ಅಧ್ಯಕ್ಷ ಸುರೇಶ ಅಂಬಿಗೇರ ಅಧ್ಯಕ್ಷತೆಯಲ್ಲಿ ಗುರುವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಅನುಮತಿ ಪಡೆದುಕೊಂಡು ಸಭೆಯಲ್ಲಿ ಲೆಕ್ಕಾಧಿಕಾರಿ ವೆಂಕಟೇಶ್ ಅವರು ಬಜೆಟ್ ವಾಚನ ಮಾಡಿದರು.</p>.<p>ಸರ್ಕಾರದ ಅನುದಾನದಲ್ಲಿ ಎಸ್ಎಫ್ಸಿ ವೇತನ, ಎಸ್ಎಫ್ಸಿ ವಿದ್ಯುತ್, ಎಸ್ಎಫ್ಸಿ ಮುಕ್ತನಿಧಿ, ಎಸ್ಸಿಪಿ, ಟಿಎಸ್ಪಿ, ಕುಡಿಯುವ ನೀರು ಪರಿಹಾರ ನಿಧಿ 15 ನೇ ಹಣಕಾಸು ಅನುದಾನ, ಇನ್ನಿತರ ಅನುದಾನವನ್ನು ಈಗಾಗಲೇ ಸರ್ಕಾರದ ಮುಂಗಡ ಪತ್ರದಲ್ಲಿ ನಗರಸಭೆಗೆ ಹಂಚಿಕೆಯಾದ ಮೊತ್ತಕ್ಕೆ ಅನುಸಾರವಾಗಿ ₹19.45 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದರು.</p>.<p>ಒಟ್ಟಾರೆಯಾಗಿ ಈ ಸಾಲಿನ ಬಜೆಟ್ ₹26.27 ಕೋಟಿ ಆದಾಯ ನಿರೀಕ್ಷಿಸಿದ್ದು, ₹26.72 ಕೋಟಿ ಖರ್ಚಿನ ಅಂದಾಜು ಮಾಡಲಾಗಿದೆ. ಹೀಗಾಗಿ ಹಿಂದಿನ ವರ್ಷಗಳ ಆಸ್ತಿ ತೆರಿಗೆ ಇನ್ನಿತರ ತೆರಿಗಳನ್ನು ವಸೂಲಿ ಮಾಡಿ ಕೊರತೆ ಸರಿದೂಗಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.</p>.<p class="Subhead"><strong>ಆದಾಯ ನಿರೀಕ್ಷೆ: </strong>ನಗರಸಭೆ ನೀತಿಯಲ್ಲಿ ವಿವಿಧ ತೆರಿಗೆಗಳಿಂದ ಒಟ್ಟು ಕೋಟಿ ₹6.81 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.</p>.<p>ಈ ಆಯವ್ಯಯದಲ್ಲಿ ಯಾದಗಿರಿ ನಗರದ ಸಾರ್ವಜನಿಕರಿಂದ ಹಾಗೂ ನಗರಸಭೆ ಸದಸ್ಯರಿಂದ ಸಲಹೆಗಳನ್ನು ಗಮನಕ್ಕೆ ತೆಗೆದುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಈ ಹಿಂದಿನ ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಈ ವರ್ಷ ಹಲವಾರು ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.</p>.<p>ಸಾರ್ವಜನಿಕ ಶೌಚಾಲಯ ಸ್ವಚ್ಛತೆಗಾಗಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಾಗೂ ಅಂಗವಿಕಲರ ಸಮಸ್ಯೆಗಳನ್ನು ನೀಗಿಸಲು, ಪೌರಕಾರ್ಮಿಕರ ಶೈಕ್ಷಣಿಕ ಅನುಕೂಲಕ್ಕಾಗಿ ಹಾಗೂ ಪತ್ರಿಕಾ ಮಾಧ್ಯಮದವರಿಗಾಗಿ ಧನಸಹಾಯ ಮಾಡುವುದು ಹಾಗೂ ಉದ್ಯಾನಗಳ ನಿರ್ವಹಣೆ ಮಾಡಲಾಗುವುದು ಎಂದರು.</p>.<p>ಈ ವೇಳೆ ಉಪಾಧ್ಯಕ್ಷೆ ಚಂದ್ರಕಲಾ ಮಡ್ಡಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯರಾದ ವಿಲಾಸ ಪಾಟೀಲ, ಚೆನ್ನಕೇಶವ ಬಾಣತಿಹಾಳ, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಪ್ರಭಾವತಿ ಕಲಾಲ್, ಮಹಾದೇವಮ್ಮ ಬೀರನೂರ, ವೆಂಕಟರೆಡ್ಡಿ ವನಿಕೇರಿ, ಮಂಜುನಾಥ ದಾಸನಕೇರಿ, ಆನಂದ ಗಡ್ಡಿಮನಿ, ಅಜಯ್ ಸಿನ್ನೂರ ಇದ್ದರು.</p>.<p><strong>ಪತ್ರಕರ್ತರ ಅನುದಾನಕ್ಕೆ ಆಕ್ಷೇಪ</strong><br />ಈ ಬಾರಿಯ ಬಜೆಟ್ನಲ್ಲಿ ಪತ್ರಕರ್ತರ ಆರೋಗ್ಯ ನಿಧಿಗೆ ₹10 ಲಕ್ಷ ತೆಗೆದಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.</p>.<p>ಆಗ ಮಧ್ಯೆ ಪ್ರವೇಶಿಸಿದ ಸದಸ್ಯೆ ಲಲಿತಾ ಅನಪುರ, ಕಳೆದ ವರ್ಷದ ಬಜೆಟ್ನಲ್ಲಿ ತೆಗೆದಿರಿಸಿದ್ದ ₹5 ಲಕ್ಷಗಳಲ್ಲಿ ಪತ್ರಕರ್ತರೊಬ್ಬರು ಒಂದು ಲಕ್ಷ ರೂಪಾಯಿ ಆರೋಗ್ಯ ನಿಧಿ ಅನುದಾನ ಪಡೆದುಕೊಂಡಿದ್ದಾರೆ. ಅದಕ್ಕೆ ಪೂರಕವಾದ ವೈದ್ಯಕೀಯ ವೆಚ್ಚದ ದಾಖಲಾತಿಗಳನ್ನು ಒದಗಿಸಿಲ್ಲ. ಇದಕ್ಕೆ ಯಾರು ಹೊಣೆ.ಈ ಸಲದ ಬಜೆಟ್ನಲ್ಲಿ ₹10 ಲಕ್ಷನಿಗದಿ ಮಾಡಿರುವುದಕ್ಕೆ ವೈಯಕ್ತಿಕವಾಗಿ ತಮ್ಮ ವಿರೋಧವಿದೆಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಆಗ ಉತ್ತರಿಸಿದ ಪೌರಾಯುಕ್ತ ಶರಣಪ್ಪ, ಹಿಂದೆ ಕೆಲವೊಂದು ಲೋಪದೋಷಗಳಾಗಿವೆ. ಹೀಗಾಗಿ ಮುಂದೆ ಹಾಗಾಗದಂತೆ ನೋಡಿಕೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತ ಪರಿಶೀಲಿಸಲಾಗುವುದು ಎಂದರು.</p>.<p>ಮಧ್ಯೆ ಪ್ರವೇಶ ಮಾಡಿದ ಸುರೇಶ್ ಅಂಬಿಗೇರ ಈಗಾಗಲೇ ₹10 ಲಕ್ಷ ಅನುದಾನ ನಿಗದಿಪಡಿಸಲು ನಿರ್ಧಾರ ಮಾಡಲಾಗಿದೆ. ಮುಂದಿನ ಸಭೆಯಲ್ಲಿ ಚರ್ಚೆ ಮಾಡಿ ಅನುಮೋದನೆ ನೀಡೋಣ ಎಂದು ಚರ್ಚೆಗೆ ಮಂಗಳ ಹಾಡಿದರು. ಇದಕ್ಕೆ ಇತರೇ ಸದಸ್ಯರು ಒಪ್ಪಿಗೆ ಸೂಚಿಸಿದರು.</p>.<p>***</p>.<p>ನಗರದ ಮುಖ್ಯ ರಸ್ತೆಗಳ ಮಧ್ಯೆ ಗಿಡ ನೆಡುವುದು, ನೀರು ಸರಬರಾಜು ಹಾಗೂ ನಿರ್ವಹಣೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗಾಗಿ ಹಣ ನಿಗದಿಪಡಿಸಲಾಗಿದೆ.<br /><em><strong>-ಸುರೇಶ ಅಂಬಿಗೇರ, ನಗರಸಭೆ ಅಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ನಗರಸಭೆಯ 2022-23ನೇ ಸಾಲಿನ ₹43.49 ಲಕ್ಷ ಕೊರತೆ ಬಜೆಟ್ ಮಂಡನೆ ಮಾಡಲಾಯಿತು.</p>.<p>ಅಧ್ಯಕ್ಷ ಸುರೇಶ ಅಂಬಿಗೇರ ಅಧ್ಯಕ್ಷತೆಯಲ್ಲಿ ಗುರುವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಅನುಮತಿ ಪಡೆದುಕೊಂಡು ಸಭೆಯಲ್ಲಿ ಲೆಕ್ಕಾಧಿಕಾರಿ ವೆಂಕಟೇಶ್ ಅವರು ಬಜೆಟ್ ವಾಚನ ಮಾಡಿದರು.</p>.<p>ಸರ್ಕಾರದ ಅನುದಾನದಲ್ಲಿ ಎಸ್ಎಫ್ಸಿ ವೇತನ, ಎಸ್ಎಫ್ಸಿ ವಿದ್ಯುತ್, ಎಸ್ಎಫ್ಸಿ ಮುಕ್ತನಿಧಿ, ಎಸ್ಸಿಪಿ, ಟಿಎಸ್ಪಿ, ಕುಡಿಯುವ ನೀರು ಪರಿಹಾರ ನಿಧಿ 15 ನೇ ಹಣಕಾಸು ಅನುದಾನ, ಇನ್ನಿತರ ಅನುದಾನವನ್ನು ಈಗಾಗಲೇ ಸರ್ಕಾರದ ಮುಂಗಡ ಪತ್ರದಲ್ಲಿ ನಗರಸಭೆಗೆ ಹಂಚಿಕೆಯಾದ ಮೊತ್ತಕ್ಕೆ ಅನುಸಾರವಾಗಿ ₹19.45 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದರು.</p>.<p>ಒಟ್ಟಾರೆಯಾಗಿ ಈ ಸಾಲಿನ ಬಜೆಟ್ ₹26.27 ಕೋಟಿ ಆದಾಯ ನಿರೀಕ್ಷಿಸಿದ್ದು, ₹26.72 ಕೋಟಿ ಖರ್ಚಿನ ಅಂದಾಜು ಮಾಡಲಾಗಿದೆ. ಹೀಗಾಗಿ ಹಿಂದಿನ ವರ್ಷಗಳ ಆಸ್ತಿ ತೆರಿಗೆ ಇನ್ನಿತರ ತೆರಿಗಳನ್ನು ವಸೂಲಿ ಮಾಡಿ ಕೊರತೆ ಸರಿದೂಗಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.</p>.<p class="Subhead"><strong>ಆದಾಯ ನಿರೀಕ್ಷೆ: </strong>ನಗರಸಭೆ ನೀತಿಯಲ್ಲಿ ವಿವಿಧ ತೆರಿಗೆಗಳಿಂದ ಒಟ್ಟು ಕೋಟಿ ₹6.81 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.</p>.<p>ಈ ಆಯವ್ಯಯದಲ್ಲಿ ಯಾದಗಿರಿ ನಗರದ ಸಾರ್ವಜನಿಕರಿಂದ ಹಾಗೂ ನಗರಸಭೆ ಸದಸ್ಯರಿಂದ ಸಲಹೆಗಳನ್ನು ಗಮನಕ್ಕೆ ತೆಗೆದುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಈ ಹಿಂದಿನ ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಈ ವರ್ಷ ಹಲವಾರು ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.</p>.<p>ಸಾರ್ವಜನಿಕ ಶೌಚಾಲಯ ಸ್ವಚ್ಛತೆಗಾಗಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಾಗೂ ಅಂಗವಿಕಲರ ಸಮಸ್ಯೆಗಳನ್ನು ನೀಗಿಸಲು, ಪೌರಕಾರ್ಮಿಕರ ಶೈಕ್ಷಣಿಕ ಅನುಕೂಲಕ್ಕಾಗಿ ಹಾಗೂ ಪತ್ರಿಕಾ ಮಾಧ್ಯಮದವರಿಗಾಗಿ ಧನಸಹಾಯ ಮಾಡುವುದು ಹಾಗೂ ಉದ್ಯಾನಗಳ ನಿರ್ವಹಣೆ ಮಾಡಲಾಗುವುದು ಎಂದರು.</p>.<p>ಈ ವೇಳೆ ಉಪಾಧ್ಯಕ್ಷೆ ಚಂದ್ರಕಲಾ ಮಡ್ಡಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯರಾದ ವಿಲಾಸ ಪಾಟೀಲ, ಚೆನ್ನಕೇಶವ ಬಾಣತಿಹಾಳ, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಪ್ರಭಾವತಿ ಕಲಾಲ್, ಮಹಾದೇವಮ್ಮ ಬೀರನೂರ, ವೆಂಕಟರೆಡ್ಡಿ ವನಿಕೇರಿ, ಮಂಜುನಾಥ ದಾಸನಕೇರಿ, ಆನಂದ ಗಡ್ಡಿಮನಿ, ಅಜಯ್ ಸಿನ್ನೂರ ಇದ್ದರು.</p>.<p><strong>ಪತ್ರಕರ್ತರ ಅನುದಾನಕ್ಕೆ ಆಕ್ಷೇಪ</strong><br />ಈ ಬಾರಿಯ ಬಜೆಟ್ನಲ್ಲಿ ಪತ್ರಕರ್ತರ ಆರೋಗ್ಯ ನಿಧಿಗೆ ₹10 ಲಕ್ಷ ತೆಗೆದಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.</p>.<p>ಆಗ ಮಧ್ಯೆ ಪ್ರವೇಶಿಸಿದ ಸದಸ್ಯೆ ಲಲಿತಾ ಅನಪುರ, ಕಳೆದ ವರ್ಷದ ಬಜೆಟ್ನಲ್ಲಿ ತೆಗೆದಿರಿಸಿದ್ದ ₹5 ಲಕ್ಷಗಳಲ್ಲಿ ಪತ್ರಕರ್ತರೊಬ್ಬರು ಒಂದು ಲಕ್ಷ ರೂಪಾಯಿ ಆರೋಗ್ಯ ನಿಧಿ ಅನುದಾನ ಪಡೆದುಕೊಂಡಿದ್ದಾರೆ. ಅದಕ್ಕೆ ಪೂರಕವಾದ ವೈದ್ಯಕೀಯ ವೆಚ್ಚದ ದಾಖಲಾತಿಗಳನ್ನು ಒದಗಿಸಿಲ್ಲ. ಇದಕ್ಕೆ ಯಾರು ಹೊಣೆ.ಈ ಸಲದ ಬಜೆಟ್ನಲ್ಲಿ ₹10 ಲಕ್ಷನಿಗದಿ ಮಾಡಿರುವುದಕ್ಕೆ ವೈಯಕ್ತಿಕವಾಗಿ ತಮ್ಮ ವಿರೋಧವಿದೆಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಆಗ ಉತ್ತರಿಸಿದ ಪೌರಾಯುಕ್ತ ಶರಣಪ್ಪ, ಹಿಂದೆ ಕೆಲವೊಂದು ಲೋಪದೋಷಗಳಾಗಿವೆ. ಹೀಗಾಗಿ ಮುಂದೆ ಹಾಗಾಗದಂತೆ ನೋಡಿಕೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತ ಪರಿಶೀಲಿಸಲಾಗುವುದು ಎಂದರು.</p>.<p>ಮಧ್ಯೆ ಪ್ರವೇಶ ಮಾಡಿದ ಸುರೇಶ್ ಅಂಬಿಗೇರ ಈಗಾಗಲೇ ₹10 ಲಕ್ಷ ಅನುದಾನ ನಿಗದಿಪಡಿಸಲು ನಿರ್ಧಾರ ಮಾಡಲಾಗಿದೆ. ಮುಂದಿನ ಸಭೆಯಲ್ಲಿ ಚರ್ಚೆ ಮಾಡಿ ಅನುಮೋದನೆ ನೀಡೋಣ ಎಂದು ಚರ್ಚೆಗೆ ಮಂಗಳ ಹಾಡಿದರು. ಇದಕ್ಕೆ ಇತರೇ ಸದಸ್ಯರು ಒಪ್ಪಿಗೆ ಸೂಚಿಸಿದರು.</p>.<p>***</p>.<p>ನಗರದ ಮುಖ್ಯ ರಸ್ತೆಗಳ ಮಧ್ಯೆ ಗಿಡ ನೆಡುವುದು, ನೀರು ಸರಬರಾಜು ಹಾಗೂ ನಿರ್ವಹಣೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗಾಗಿ ಹಣ ನಿಗದಿಪಡಿಸಲಾಗಿದೆ.<br /><em><strong>-ಸುರೇಶ ಅಂಬಿಗೇರ, ನಗರಸಭೆ ಅಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>