<p><strong>ಯಾದಗಿರಿ: </strong>ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ವಿಡಿಯೊ ಸಂವಾದ ನಡೆಸಿದರು.</p>.<p>ಕೋವಿಡ್ ಹೆಚ್ಚುತ್ತಿರುವುದರಿಂದ ಸೂಕ್ತ ಕ್ರಮವಹಿಸಿ ಎಂದು ಯಾದಗಿರಿ ಪೌರಾಯುಕ್ತರಿಗೆ ಸೂಚಿಸಿದರು.</p>.<p>ತರಕಾರಿ ದಿನಸಿ ಅಂಗಡಿಗಳ ಮುಂಭಾಗದಲ್ಲಿ ಜನದಟ್ಟಣೆ ಆಗದಂತೆ ಕ್ರಮ ಕೈಗೊಳ್ಳಬೇಕು. ಕ್ವಾರಂಟೈನ್ಸ್ ವಾಚ್ ಆ್ಯಪ್ನಲ್ಲಿರುವವರ ಮನೆಗಳಿಗೆ ಪ್ರತಿ ದಿನ ಭೇಟಿ ನೀಡಿ ಹಾಗೂ ಅವರ ಪೋಟೋಗಳನ್ನು ಅಪ್ಲೋಡ್ ಮಾಡುವಂತೆ ಸೂಚಿಸಿದರು.</p>.<p>ಅನವಶ್ಯಕವಾಗಿ ಸಂಚರಿಸುವ ಜನರಿಗೆ ಹಾಗೂ ಮಾಸ್ಕ್ ಧರಿಸದಿದ್ದರೆ ಅಂತ ವ್ಯಕ್ತಿಗೆ ದಂಡ ಹಾಕಿ ಎಂದು ಸುರಪುರ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.</p>.<p>ಅಂಗಡಿ ವ್ಯಾಪಾರದ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ಸೂಕ್ತ ಕ್ರಮ ಕೈಗೊಳ್ಳಿ. ಕೋವಿಡ್ ರೋಗ ಅತಿ ವೇಗವಾಗಿ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮವಹಿಸಬೇಕು. ಬಾರ್, ಅಂಗಡಿ ಮತ್ತು ಇನ್ನೂ ಇತರ ಅಂಗಡಿಗಳು ವ್ಯಾಪಾರದ ವೇಳೆ ಕಟ್ಟುನಿಟ್ಟಿನ ಕ್ರಮ ವಹಿಸಿ ದಂಡ ಹಾಕಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.</p>.<p>ಕೊಡೇಕಲ್ ಜಿಲ್ಲಾ ಪಂಚಾಯಿತಿ ಹಾಗೂ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಕೋವಿಡ್-19 ರೋಗ ಹರಡದಂತೆ ಕಠಿಣ ಕ್ರಮ ವಹಿಸಿ ಎಂದು ಹೇಳಿದರು.</p>.<p>ಜನರು ಕೋವಿಡ್-19 ನಿಯಮ ಉಲ್ಲಂಘಿಸದಂತೆ ಜಾಗೃತಿ ಮೂಡಿಸಿ ದಂಡ ಹಾಕಿ ಎಂದು ಗುರುಮಠಕಲ್ ಪೌರಾಯುಕ್ತರಿಗೆ ಎಚ್ಚರಿಸಿದರು.</p>.<p>ಪೌರ ಕಾರ್ಮಿಕರು ಸ್ವಚ್ಛತೆ ಕಾಪಾಡಬೇಕು. ಪೊಲೀಸ್ ಸಿಬ್ಬಂದಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಜನರ ಓಡಾಟಕ್ಕೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.</p>.<p>ಕೆಂಭಾವಿ ಹಾಗೂ ಕಕ್ಕೇರಾ ಮುಖ್ಯಾಧಿಕಾರಿಗೆ ವಿಡಿಯೊ ಮುಖಾಂತರ ಜಿಲ್ಲಾಧಿಕಾರಿ ಮಾತನಾಡಿ, ಕೋವಿಡ್ -19 ರೋಗ ಅತಿ ವೇಗವಾಗಿ ಹರಡುವುದನ್ನು ತಡೆಗಟಲು ಮಾಸ್ಕ್ ಧರಿಸದಿದ್ದರೆ ಅಂತ ಜನರಿಗೆ ಕಠಿಣ ಕ್ರಮವಹಿಸಿ ಎಂದು ಡಾ.ರಾಗಪ್ರಿಯಾ.ಆರ್ ಹೇಳಿದರು.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಹಾಗೂ ಇತರ ಅಧಿಕಾರಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ವಿಡಿಯೊ ಸಂವಾದ ನಡೆಸಿದರು.</p>.<p>ಕೋವಿಡ್ ಹೆಚ್ಚುತ್ತಿರುವುದರಿಂದ ಸೂಕ್ತ ಕ್ರಮವಹಿಸಿ ಎಂದು ಯಾದಗಿರಿ ಪೌರಾಯುಕ್ತರಿಗೆ ಸೂಚಿಸಿದರು.</p>.<p>ತರಕಾರಿ ದಿನಸಿ ಅಂಗಡಿಗಳ ಮುಂಭಾಗದಲ್ಲಿ ಜನದಟ್ಟಣೆ ಆಗದಂತೆ ಕ್ರಮ ಕೈಗೊಳ್ಳಬೇಕು. ಕ್ವಾರಂಟೈನ್ಸ್ ವಾಚ್ ಆ್ಯಪ್ನಲ್ಲಿರುವವರ ಮನೆಗಳಿಗೆ ಪ್ರತಿ ದಿನ ಭೇಟಿ ನೀಡಿ ಹಾಗೂ ಅವರ ಪೋಟೋಗಳನ್ನು ಅಪ್ಲೋಡ್ ಮಾಡುವಂತೆ ಸೂಚಿಸಿದರು.</p>.<p>ಅನವಶ್ಯಕವಾಗಿ ಸಂಚರಿಸುವ ಜನರಿಗೆ ಹಾಗೂ ಮಾಸ್ಕ್ ಧರಿಸದಿದ್ದರೆ ಅಂತ ವ್ಯಕ್ತಿಗೆ ದಂಡ ಹಾಕಿ ಎಂದು ಸುರಪುರ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.</p>.<p>ಅಂಗಡಿ ವ್ಯಾಪಾರದ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ಸೂಕ್ತ ಕ್ರಮ ಕೈಗೊಳ್ಳಿ. ಕೋವಿಡ್ ರೋಗ ಅತಿ ವೇಗವಾಗಿ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮವಹಿಸಬೇಕು. ಬಾರ್, ಅಂಗಡಿ ಮತ್ತು ಇನ್ನೂ ಇತರ ಅಂಗಡಿಗಳು ವ್ಯಾಪಾರದ ವೇಳೆ ಕಟ್ಟುನಿಟ್ಟಿನ ಕ್ರಮ ವಹಿಸಿ ದಂಡ ಹಾಕಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.</p>.<p>ಕೊಡೇಕಲ್ ಜಿಲ್ಲಾ ಪಂಚಾಯಿತಿ ಹಾಗೂ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಕೋವಿಡ್-19 ರೋಗ ಹರಡದಂತೆ ಕಠಿಣ ಕ್ರಮ ವಹಿಸಿ ಎಂದು ಹೇಳಿದರು.</p>.<p>ಜನರು ಕೋವಿಡ್-19 ನಿಯಮ ಉಲ್ಲಂಘಿಸದಂತೆ ಜಾಗೃತಿ ಮೂಡಿಸಿ ದಂಡ ಹಾಕಿ ಎಂದು ಗುರುಮಠಕಲ್ ಪೌರಾಯುಕ್ತರಿಗೆ ಎಚ್ಚರಿಸಿದರು.</p>.<p>ಪೌರ ಕಾರ್ಮಿಕರು ಸ್ವಚ್ಛತೆ ಕಾಪಾಡಬೇಕು. ಪೊಲೀಸ್ ಸಿಬ್ಬಂದಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಜನರ ಓಡಾಟಕ್ಕೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.</p>.<p>ಕೆಂಭಾವಿ ಹಾಗೂ ಕಕ್ಕೇರಾ ಮುಖ್ಯಾಧಿಕಾರಿಗೆ ವಿಡಿಯೊ ಮುಖಾಂತರ ಜಿಲ್ಲಾಧಿಕಾರಿ ಮಾತನಾಡಿ, ಕೋವಿಡ್ -19 ರೋಗ ಅತಿ ವೇಗವಾಗಿ ಹರಡುವುದನ್ನು ತಡೆಗಟಲು ಮಾಸ್ಕ್ ಧರಿಸದಿದ್ದರೆ ಅಂತ ಜನರಿಗೆ ಕಠಿಣ ಕ್ರಮವಹಿಸಿ ಎಂದು ಡಾ.ರಾಗಪ್ರಿಯಾ.ಆರ್ ಹೇಳಿದರು.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಹಾಗೂ ಇತರ ಅಧಿಕಾರಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>