<p><strong>ಕಕ್ಕೇರಾ</strong>: ವರದಕ್ಷಿಣೆಯ ಬಂಗಾರ ತರುವಂತ ಪೀಡಿಸಿ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಗೃಹಿಣಿಯ ತಂದೆ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದಾರೆ.</p>.<p>ಪಟ್ಟಣದ ಬೂದಗುಂಪೇರದೊಡ್ಡಿಯ ಗೃಹಿಣಿ ಅಯ್ಯಮ್ಮ ಅಂಬರೇಶ (21) ಕೊಲೆಯಾದವರು. ಆಕೆಯ ಗಂಡ ಅಂಬರೇಶ ನಿಂಗಪ್ಪನನ್ನು ಬಂಧಿಸಲಾಗಿದ್ದು, ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಅಯ್ಯಮ್ಮ ಅವರ ಮಾವ ನಿಂಗಪ್ಪ ಯಮನಪ್ಪ, ಅತ್ತೆ ನಿಂಗಮ್ಮ ನಿಂಗಪ್ಪ, ಸುನಂದಮ್ಮ ನಿಂಗಪ್ಪ ಹಾಗೂ ಸುನಂದಮ್ಮ ಪತಿ ನಿಂಗಪ್ಪ ದೇವಿಂದ್ರಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.</p>.<p>ಎರಡು ವರ್ಷಗಳ ಹಿಂದ ವೆಂಕಟಾಪುರದ ಬಸಪ್ಪ ಅವರ ಪುತ್ರಿ ಅಯ್ಯಮ್ಮ ಜೊತೆಗೆ ಬೂದಗುಂಪೇರದೊಡ್ಡಿಯ ಅಂಬರೇಶ ಅವರೊಂದಿಗೆ ವಿವಾಹ ಆಗಿತ್ತು. ಮದುವೆಯಲ್ಲಿ ವರನಿಗೆ 3 ತೊಲ ಬಂಗಾರ, ಸಾಮಗ್ರಿಗಳನ್ನು ಕೊಡಲಾಗಿತ್ತು. ಗಂಡನ ಮನೆಯವರು ಒಂದು ವರ್ಷ ಸೊಸೆಯನ್ನು ಚೆನ್ನಾಗಿ ನೋಡಿಕೊಂಡಿದ್ದು, ಬಳಿಕ ವರದಕ್ಷಿಣೆ ತರುವಂತೆ ಕಿರುಕುಳ ಕೊಡಲು ಆರಂಭಿಸಿದರು. ಮದುವೆಯಲ್ಲಿ ಕೇಳಿದಷ್ಟು ಬಂಗಾರ ಕೊಟ್ಟಿಲ್ಲ. ತವರು ಮನೆಯಿಂದ 2 ತೊಲ ಬಂಗಾರ ಹಾಗೂ ₹ 2 ಲಕ್ಷ ತರುವಂತೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳಕೊಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.</p>.<p>ಕೇಳಿದಷ್ಟು ವರದಕ್ಷಿಣೆ ತರಲಿಲ್ಲ ಎಂದು ಸೋಮವಾರ ರಾತ್ರಿ ಅಯ್ಯಮ್ಮ ಅವರಿಗೆ ಹೊಡೆದು, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಗಂಡ ಸೇರಿ ಐವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮೃತರ ಪೋಷಕರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಎಸ್ಪಿ ಧರಣೇಶ, ಸುರಪುರ ಡಿವೈಎಸ್ಪಿ ಜಾವೀದ್ ಇನಾಂದಾರ್, ಹುಣಸಗಿ ಸಿಪಿಐ ರವಿಕುಮಾರ ಎಸ್.ಎನ್., ಕೊಡೇಕಲ್ ಪಿಎಸ್ಐ ಅಯ್ಯಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ</strong>: ವರದಕ್ಷಿಣೆಯ ಬಂಗಾರ ತರುವಂತ ಪೀಡಿಸಿ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಗೃಹಿಣಿಯ ತಂದೆ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದಾರೆ.</p>.<p>ಪಟ್ಟಣದ ಬೂದಗುಂಪೇರದೊಡ್ಡಿಯ ಗೃಹಿಣಿ ಅಯ್ಯಮ್ಮ ಅಂಬರೇಶ (21) ಕೊಲೆಯಾದವರು. ಆಕೆಯ ಗಂಡ ಅಂಬರೇಶ ನಿಂಗಪ್ಪನನ್ನು ಬಂಧಿಸಲಾಗಿದ್ದು, ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಅಯ್ಯಮ್ಮ ಅವರ ಮಾವ ನಿಂಗಪ್ಪ ಯಮನಪ್ಪ, ಅತ್ತೆ ನಿಂಗಮ್ಮ ನಿಂಗಪ್ಪ, ಸುನಂದಮ್ಮ ನಿಂಗಪ್ಪ ಹಾಗೂ ಸುನಂದಮ್ಮ ಪತಿ ನಿಂಗಪ್ಪ ದೇವಿಂದ್ರಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.</p>.<p>ಎರಡು ವರ್ಷಗಳ ಹಿಂದ ವೆಂಕಟಾಪುರದ ಬಸಪ್ಪ ಅವರ ಪುತ್ರಿ ಅಯ್ಯಮ್ಮ ಜೊತೆಗೆ ಬೂದಗುಂಪೇರದೊಡ್ಡಿಯ ಅಂಬರೇಶ ಅವರೊಂದಿಗೆ ವಿವಾಹ ಆಗಿತ್ತು. ಮದುವೆಯಲ್ಲಿ ವರನಿಗೆ 3 ತೊಲ ಬಂಗಾರ, ಸಾಮಗ್ರಿಗಳನ್ನು ಕೊಡಲಾಗಿತ್ತು. ಗಂಡನ ಮನೆಯವರು ಒಂದು ವರ್ಷ ಸೊಸೆಯನ್ನು ಚೆನ್ನಾಗಿ ನೋಡಿಕೊಂಡಿದ್ದು, ಬಳಿಕ ವರದಕ್ಷಿಣೆ ತರುವಂತೆ ಕಿರುಕುಳ ಕೊಡಲು ಆರಂಭಿಸಿದರು. ಮದುವೆಯಲ್ಲಿ ಕೇಳಿದಷ್ಟು ಬಂಗಾರ ಕೊಟ್ಟಿಲ್ಲ. ತವರು ಮನೆಯಿಂದ 2 ತೊಲ ಬಂಗಾರ ಹಾಗೂ ₹ 2 ಲಕ್ಷ ತರುವಂತೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳಕೊಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.</p>.<p>ಕೇಳಿದಷ್ಟು ವರದಕ್ಷಿಣೆ ತರಲಿಲ್ಲ ಎಂದು ಸೋಮವಾರ ರಾತ್ರಿ ಅಯ್ಯಮ್ಮ ಅವರಿಗೆ ಹೊಡೆದು, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಗಂಡ ಸೇರಿ ಐವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮೃತರ ಪೋಷಕರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಎಸ್ಪಿ ಧರಣೇಶ, ಸುರಪುರ ಡಿವೈಎಸ್ಪಿ ಜಾವೀದ್ ಇನಾಂದಾರ್, ಹುಣಸಗಿ ಸಿಪಿಐ ರವಿಕುಮಾರ ಎಸ್.ಎನ್., ಕೊಡೇಕಲ್ ಪಿಎಸ್ಐ ಅಯ್ಯಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>