<p><strong>ಕೆಂಭಾವಿ:</strong> ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಬಳಸುತ್ತಿರುವ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಮತ್ತು ಅರ್ಸೇನಿಕ್ ಅಂಶ ಪತ್ತೆಯಾಗಿದ್ದು, ರಾಸಾಯನಿಕ ವಸ್ತುಗಳು ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಗ್ರಾಮಗಳ ಜನರಿಗೆ ಶುದ್ಧ ನೀರು ಒದಗಿಸುವ ದೃಷ್ಟಿಯಿಂದ ಜಿಲ್ಲಾಡಳಿತವು ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ.<br /> <br /> ಪಟ್ಟಣದಲ್ಲಿ ನಿರ್ಮಿಸಲಾದ ನೀರು ಶುದ್ಧೀಕರಣ ಘಟಕದ ಪೂರ್ಣಗೊಂಡಿದ್ದರೂ, ಉಪಯೋಗಕ್ಕೆ ಬರದಂತಾಗಿದೆ. ಗೋಗಿ, ಕೆಂಭಾವಿ, ಸಗರ, ಕಿರದಳ್ಳಿ, ಅಮ್ಮಾಪುರ, ಮುದನೂರು ಗ್ರಾಮಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಿಕೊಂಡಿರುವ ಜಿಲ್ಲಾಡಳಿತವು ಪ್ರತಿ ಗ್ರಾಮಗಳಿಗೆ ಸುಮಾರು ರೂ. 15 ಲಕ್ಷ ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಮುಂದಾಗಿದೆ.<br /> <br /> ಆದರೆ ಕೆಂಭಾವಿಯಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು, ಇದುವರೆಗೂ ಉದ್ಘಾಟನೆ ಆಗದೇ, ಯಂತ್ರಗಳು ತುಕ್ಕು ಹಿಡಿಯುವ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. <br /> <br /> ನೀರಿನಲ್ಲಿ ಪ್ಲೋರೈಡ್ ಮತ್ತು ಅರ್ಸೇನಿಕ್ ಅಂಶ ಇರುವುದರಿಂದ ಈ ಭಾಗದ ಬಹುತೇಕ ಗ್ರಾಮಗಳ ಜನರಿಗೆ ಹಲ್ಲು ಕೆಂಪಾಗುವುದು, ಮೊಣಕಾಲು, ಸೊಂಟ, ಕೀಲು ನೋವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. <br /> <br /> ವೈದ್ಯಕೀಯ ತಪಾಸಣೆಯಿಂದಲೂ ಇದು ಸ್ಪಷ್ಟವಾಗಿದೆ. ನೀರಿನಿಂದಲೇ ಈ ಎಲ್ಲ ರೋಗಗಳು ಬರುತ್ತವೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೂ ಅನಿವಾರ್ಯವಾಗಿ ಜನ ರಾಸಾಯನಿಕ ಯುಕ್ತ ನೀರನ್ನೇ ಕುಡಿಯುವಂತಾಗಿದೆ. <br /> <br /> ಈಚೆಗೆ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕವೊಂದು ಪ್ರಾರಂಭವಾಗುತ್ತದೆ ಎಂದು ತಿಳಿದ ಜನತೆಗೆ ಸಂತಸವಾಗಿತ್ತು. ಇನ್ನಾದರೂ ನಮಗೆ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದು ಸಂತಸಪಟ್ಟಿದ್ದ ಜನರ ಸಂತೋಷ ಸ್ವಲ್ಪದರಲ್ಲಿಯೇ ಮರೆಯಾಯಿತು. <br /> <br /> ನೀರು ಶುದ್ಧೀಕರಣ ಘಟಕದ ಪೂರ್ಣಗೊಂಡಿದ್ದರೂ, ಅದು ಪ್ರಾರಂಭವಾಗದೇ ಇರುವುದೇ ಜನರ ನಿರಾಸೆಗೆ ಕಾರಣವಾಗಿದೆ. <br /> <br /> ಈ ಕಾಮಗಾರಿಯನ್ನು ನಾಂದಿ ಫೌಂಡೆಶನ್ ಅವರಿಗೆ ನೀಡಲಾಗಿದ್ದು, ಈ ಘಟಕ ಪ್ರಾರಂಭವಾದರೆ ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು, ಪ್ರತಿ 20 ಲೀಟರ್ಗೆ ಕೇವಲ ನಾಲ್ಕು ರೂಪಾಯಿಗಳಲ್ಲಿ ಸಿಗಲಿದೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದರು.<br /> <br /> ಮನೆಯ ಬಾಗಿಲಿಗೆ ಶುದ್ಧ ಕುಡಿಯುವ ನೀರು ಬರಲಿದೆ ಎಂದುಕೊಂಡಿದ್ದ ಜನರಿಗೆ ಈಗ ನಿರಾಸೆ ಅನುಭವಿಸುವಂತಾಗಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಸರ್ಕಾರ ಈ ಯೋಜನೆ ಸರಿಯಾದ ಸಮಯದಲ್ಲಿ ಜನರಿಗೆ ತಲುಪುವಂತಾಗಲಿ ಎನ್ನುವುದು ಗ್ರಾಮಸ್ಥರ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಭಾವಿ:</strong> ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಬಳಸುತ್ತಿರುವ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಮತ್ತು ಅರ್ಸೇನಿಕ್ ಅಂಶ ಪತ್ತೆಯಾಗಿದ್ದು, ರಾಸಾಯನಿಕ ವಸ್ತುಗಳು ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಗ್ರಾಮಗಳ ಜನರಿಗೆ ಶುದ್ಧ ನೀರು ಒದಗಿಸುವ ದೃಷ್ಟಿಯಿಂದ ಜಿಲ್ಲಾಡಳಿತವು ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ.<br /> <br /> ಪಟ್ಟಣದಲ್ಲಿ ನಿರ್ಮಿಸಲಾದ ನೀರು ಶುದ್ಧೀಕರಣ ಘಟಕದ ಪೂರ್ಣಗೊಂಡಿದ್ದರೂ, ಉಪಯೋಗಕ್ಕೆ ಬರದಂತಾಗಿದೆ. ಗೋಗಿ, ಕೆಂಭಾವಿ, ಸಗರ, ಕಿರದಳ್ಳಿ, ಅಮ್ಮಾಪುರ, ಮುದನೂರು ಗ್ರಾಮಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಿಕೊಂಡಿರುವ ಜಿಲ್ಲಾಡಳಿತವು ಪ್ರತಿ ಗ್ರಾಮಗಳಿಗೆ ಸುಮಾರು ರೂ. 15 ಲಕ್ಷ ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಮುಂದಾಗಿದೆ.<br /> <br /> ಆದರೆ ಕೆಂಭಾವಿಯಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು, ಇದುವರೆಗೂ ಉದ್ಘಾಟನೆ ಆಗದೇ, ಯಂತ್ರಗಳು ತುಕ್ಕು ಹಿಡಿಯುವ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. <br /> <br /> ನೀರಿನಲ್ಲಿ ಪ್ಲೋರೈಡ್ ಮತ್ತು ಅರ್ಸೇನಿಕ್ ಅಂಶ ಇರುವುದರಿಂದ ಈ ಭಾಗದ ಬಹುತೇಕ ಗ್ರಾಮಗಳ ಜನರಿಗೆ ಹಲ್ಲು ಕೆಂಪಾಗುವುದು, ಮೊಣಕಾಲು, ಸೊಂಟ, ಕೀಲು ನೋವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. <br /> <br /> ವೈದ್ಯಕೀಯ ತಪಾಸಣೆಯಿಂದಲೂ ಇದು ಸ್ಪಷ್ಟವಾಗಿದೆ. ನೀರಿನಿಂದಲೇ ಈ ಎಲ್ಲ ರೋಗಗಳು ಬರುತ್ತವೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೂ ಅನಿವಾರ್ಯವಾಗಿ ಜನ ರಾಸಾಯನಿಕ ಯುಕ್ತ ನೀರನ್ನೇ ಕುಡಿಯುವಂತಾಗಿದೆ. <br /> <br /> ಈಚೆಗೆ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕವೊಂದು ಪ್ರಾರಂಭವಾಗುತ್ತದೆ ಎಂದು ತಿಳಿದ ಜನತೆಗೆ ಸಂತಸವಾಗಿತ್ತು. ಇನ್ನಾದರೂ ನಮಗೆ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದು ಸಂತಸಪಟ್ಟಿದ್ದ ಜನರ ಸಂತೋಷ ಸ್ವಲ್ಪದರಲ್ಲಿಯೇ ಮರೆಯಾಯಿತು. <br /> <br /> ನೀರು ಶುದ್ಧೀಕರಣ ಘಟಕದ ಪೂರ್ಣಗೊಂಡಿದ್ದರೂ, ಅದು ಪ್ರಾರಂಭವಾಗದೇ ಇರುವುದೇ ಜನರ ನಿರಾಸೆಗೆ ಕಾರಣವಾಗಿದೆ. <br /> <br /> ಈ ಕಾಮಗಾರಿಯನ್ನು ನಾಂದಿ ಫೌಂಡೆಶನ್ ಅವರಿಗೆ ನೀಡಲಾಗಿದ್ದು, ಈ ಘಟಕ ಪ್ರಾರಂಭವಾದರೆ ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು, ಪ್ರತಿ 20 ಲೀಟರ್ಗೆ ಕೇವಲ ನಾಲ್ಕು ರೂಪಾಯಿಗಳಲ್ಲಿ ಸಿಗಲಿದೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದರು.<br /> <br /> ಮನೆಯ ಬಾಗಿಲಿಗೆ ಶುದ್ಧ ಕುಡಿಯುವ ನೀರು ಬರಲಿದೆ ಎಂದುಕೊಂಡಿದ್ದ ಜನರಿಗೆ ಈಗ ನಿರಾಸೆ ಅನುಭವಿಸುವಂತಾಗಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಸರ್ಕಾರ ಈ ಯೋಜನೆ ಸರಿಯಾದ ಸಮಯದಲ್ಲಿ ಜನರಿಗೆ ತಲುಪುವಂತಾಗಲಿ ಎನ್ನುವುದು ಗ್ರಾಮಸ್ಥರ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>