<p><strong>ಲಕ್ಷ್ಮೇಶ್ವರ:</strong> ಸರ್ಕಾರ ರಫ್ತು ನಿಷೇಧ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ತೀವ್ರ ಕುಸಿದಿದ್ದು ಇದನ್ನು ಖಂಡಿಸಿ ಮಂಗಳವಾರ ರೈತರು ಪಟ್ಟಣದ ಚಾವಡಿಗೆ ಕೀಲಿ ಜಡಿದು ಪ್ರತಿಭಟಿಸಿದರು.<br /> <br /> ಮುಂಜಾನೆ ಸ್ಥಳೀಯ ಭಾನು ಮಾರ್ಕೆಟ್ ಆವರಣದಲ್ಲಿ ಜಮಾಯಿಸಿದ ರೈತರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಕೆಲ ರೈತರು ಈರುಳ್ಳಿಯನ್ನು ರಸ್ತೆಗೆ ಚೆಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ರೈತರಾದ ಸೋಮಣ್ಣ ಮುಳಗುಂದ ಹಾಗೂ ಎಪಿಎಂಸಿ ಸದಸ್ಯ ವಿ.ಜಿ. ಪಡಗೇರಿ `ಸರ್ಕಾರಕ್ಕೆ ರೈತರ ಬಗ್ಗೆ ಎಳಷ್ಟೂ ಕಾಳಜಿ ಇಲ್ಲ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದರೂ ರೈತನ ಫಸಲಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ಇದರಿಂದಾಗಿ ರೈತರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು ಆತ್ಮಹತ್ಯೆಯತ್ತ ಮುಖ ಮಾಡುವಂತಾಗಿರುವುದು ವಿಷಾದನೀಯ~ ಎಂದರು. <br /> <br /> ಪುರಸಭೆ ಸದಸ್ಯ ಹಾಗೂ ರೈತ ಸೋಮನಗೌಡ ಪಾಟೀಲ ಮಾತನಾಡಿ `ಸರ್ಕಾರ ಕೂಡಲೇ ಈರುಳ್ಳಿಗೆ ಬೆಂಬಲ ಬೆಲೆ ಪ್ರಕಟಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು~ ಎಂದರು.<br /> <br /> ಶಂಕ್ರಪ್ಪ ಮ್ಯಾಗೇರಿ, ದೇವಣ್ಣ ಬಳಿಗಾರ, ಟಿಎಪಿಸಿಎಂಎಸ್ ಅಧ್ಯಕ್ಷ ಗದಿಗೆಪ್ಪ ಯತ್ನಳ್ಳಿ, ತಾಲ್ಲೂಕು ಪಂಚಾಯಿತಿ ಸದಸ್ಯ ಚೆನ್ನಪ್ಪ ಜಗಲಿ, ಗಂಗಾಧರ ಸಂಕಲಿ, ಸುಭಾನ್ ಹೊಂಬಳ, ಶೌಕತ್ ಮುಳಗುಂದ, ನಾಝಲ್ ಮುಳಗುಂದ, ಸುಲೇಮಾನ್ಸಾಬ್ ಕಣಕೆ, ಯಲ್ಲಪ್ಪ ಹಾದಿಮನಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ:</strong> ಸರ್ಕಾರ ರಫ್ತು ನಿಷೇಧ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ತೀವ್ರ ಕುಸಿದಿದ್ದು ಇದನ್ನು ಖಂಡಿಸಿ ಮಂಗಳವಾರ ರೈತರು ಪಟ್ಟಣದ ಚಾವಡಿಗೆ ಕೀಲಿ ಜಡಿದು ಪ್ರತಿಭಟಿಸಿದರು.<br /> <br /> ಮುಂಜಾನೆ ಸ್ಥಳೀಯ ಭಾನು ಮಾರ್ಕೆಟ್ ಆವರಣದಲ್ಲಿ ಜಮಾಯಿಸಿದ ರೈತರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಕೆಲ ರೈತರು ಈರುಳ್ಳಿಯನ್ನು ರಸ್ತೆಗೆ ಚೆಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ರೈತರಾದ ಸೋಮಣ್ಣ ಮುಳಗುಂದ ಹಾಗೂ ಎಪಿಎಂಸಿ ಸದಸ್ಯ ವಿ.ಜಿ. ಪಡಗೇರಿ `ಸರ್ಕಾರಕ್ಕೆ ರೈತರ ಬಗ್ಗೆ ಎಳಷ್ಟೂ ಕಾಳಜಿ ಇಲ್ಲ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದರೂ ರೈತನ ಫಸಲಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ಇದರಿಂದಾಗಿ ರೈತರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು ಆತ್ಮಹತ್ಯೆಯತ್ತ ಮುಖ ಮಾಡುವಂತಾಗಿರುವುದು ವಿಷಾದನೀಯ~ ಎಂದರು. <br /> <br /> ಪುರಸಭೆ ಸದಸ್ಯ ಹಾಗೂ ರೈತ ಸೋಮನಗೌಡ ಪಾಟೀಲ ಮಾತನಾಡಿ `ಸರ್ಕಾರ ಕೂಡಲೇ ಈರುಳ್ಳಿಗೆ ಬೆಂಬಲ ಬೆಲೆ ಪ್ರಕಟಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು~ ಎಂದರು.<br /> <br /> ಶಂಕ್ರಪ್ಪ ಮ್ಯಾಗೇರಿ, ದೇವಣ್ಣ ಬಳಿಗಾರ, ಟಿಎಪಿಸಿಎಂಎಸ್ ಅಧ್ಯಕ್ಷ ಗದಿಗೆಪ್ಪ ಯತ್ನಳ್ಳಿ, ತಾಲ್ಲೂಕು ಪಂಚಾಯಿತಿ ಸದಸ್ಯ ಚೆನ್ನಪ್ಪ ಜಗಲಿ, ಗಂಗಾಧರ ಸಂಕಲಿ, ಸುಭಾನ್ ಹೊಂಬಳ, ಶೌಕತ್ ಮುಳಗುಂದ, ನಾಝಲ್ ಮುಳಗುಂದ, ಸುಲೇಮಾನ್ಸಾಬ್ ಕಣಕೆ, ಯಲ್ಲಪ್ಪ ಹಾದಿಮನಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>