<p><strong>ಕಡೂರು: </strong>ತಾಲ್ಲೂಕಿನ ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯಲ್ಲಿ ಮಹಿಳೆಯೊಬ್ಬಳು ಇಬ್ಬರು ಮಕ್ಕಳೊಂದಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.<br /> <br /> ಗೃಹಿಣಿ ಲತಾ (28), ಮಕ್ಕಳಾದ ನಯನಾ (5) ಮತ್ತು ಸಂಜು (3) ಜತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. <br /> ತರೀಕೆರೆ ತಾಲ್ಲೂಕು ಅಜ್ಜಂಪುರ ಹೋಬಳಿಯ ಹೆಗ್ಗಡೆಹಳ್ಳಿಯ ಲತಾ ಯಗಟಿಯ ರಮೇಶ ಅವರನ್ನು ವಿವಾಹವಾಗಿದ್ದರು. ಮನೆಯ ಗೋಡೆಯ ಮೇಲೆ `ನನ್ನ ಸಾವಿಗೆ ಗಂಡನೇ ಕಾರಣ~ ಎಂದು ಬರೆದಿದ್ದುದು ಕಂಡುಬಂತು.<br /> <br /> ಬೆಳಗಿನ 7.30ರ ವೇಳೆಯಲ್ಲಿ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ಗ್ರಾಮಸ್ಥರು ಮನೆಯ ಸಮೀಪ ಬಂದಾಗ ಮುಂಬಾಗಿಲು ಒಳಗಿನಿಂದ ಚಿಲಕ ಹಾಕಿತ್ತು. ಹಿತ್ತಲು ಕಡೆ ತೆರಳಿ ಮನೆ ಹೆಂಚು ತೆಗೆದು ಒಳಗೆ ಇಳಿದಾಗ ಮಹಿಳೆಯು ಮಕ್ಕಳೊಂದಿಗೆ ಮೃತಪಟ್ಟಿರುವುದು ಕಂಡುಬಂತು ಎಂದು ಗ್ರಾಮಸ್ಥರು ತಿಳಿಸಿದರು. <br /> ಮೃತ ಮಹಿಳೆಯ ಚಿಕ್ಕಪ್ಪ ಕುಬೇಂದ್ರಪ್ಪ ನೀಡಿದ ದೂರಿನ ಅನ್ವಯ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಲತಾ ಅವರ ಪತಿ ರಮೇಶ, ಮಾವ ಕರಿಯಪ್ಪ ಮತ್ತು ಅತ್ತೆ ಜಯಮ್ಮ ಅವರನ್ನು ಯಗಟಿ ಸಬ್ ಇನ್ಸ್ಪೆಕ್ಟರ್ ಶಾಮಾ ನಾಯ್ಕ ಬಂಧಿಸಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು: </strong>ತಾಲ್ಲೂಕಿನ ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯಲ್ಲಿ ಮಹಿಳೆಯೊಬ್ಬಳು ಇಬ್ಬರು ಮಕ್ಕಳೊಂದಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.<br /> <br /> ಗೃಹಿಣಿ ಲತಾ (28), ಮಕ್ಕಳಾದ ನಯನಾ (5) ಮತ್ತು ಸಂಜು (3) ಜತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. <br /> ತರೀಕೆರೆ ತಾಲ್ಲೂಕು ಅಜ್ಜಂಪುರ ಹೋಬಳಿಯ ಹೆಗ್ಗಡೆಹಳ್ಳಿಯ ಲತಾ ಯಗಟಿಯ ರಮೇಶ ಅವರನ್ನು ವಿವಾಹವಾಗಿದ್ದರು. ಮನೆಯ ಗೋಡೆಯ ಮೇಲೆ `ನನ್ನ ಸಾವಿಗೆ ಗಂಡನೇ ಕಾರಣ~ ಎಂದು ಬರೆದಿದ್ದುದು ಕಂಡುಬಂತು.<br /> <br /> ಬೆಳಗಿನ 7.30ರ ವೇಳೆಯಲ್ಲಿ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ಗ್ರಾಮಸ್ಥರು ಮನೆಯ ಸಮೀಪ ಬಂದಾಗ ಮುಂಬಾಗಿಲು ಒಳಗಿನಿಂದ ಚಿಲಕ ಹಾಕಿತ್ತು. ಹಿತ್ತಲು ಕಡೆ ತೆರಳಿ ಮನೆ ಹೆಂಚು ತೆಗೆದು ಒಳಗೆ ಇಳಿದಾಗ ಮಹಿಳೆಯು ಮಕ್ಕಳೊಂದಿಗೆ ಮೃತಪಟ್ಟಿರುವುದು ಕಂಡುಬಂತು ಎಂದು ಗ್ರಾಮಸ್ಥರು ತಿಳಿಸಿದರು. <br /> ಮೃತ ಮಹಿಳೆಯ ಚಿಕ್ಕಪ್ಪ ಕುಬೇಂದ್ರಪ್ಪ ನೀಡಿದ ದೂರಿನ ಅನ್ವಯ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಲತಾ ಅವರ ಪತಿ ರಮೇಶ, ಮಾವ ಕರಿಯಪ್ಪ ಮತ್ತು ಅತ್ತೆ ಜಯಮ್ಮ ಅವರನ್ನು ಯಗಟಿ ಸಬ್ ಇನ್ಸ್ಪೆಕ್ಟರ್ ಶಾಮಾ ನಾಯ್ಕ ಬಂಧಿಸಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>