ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CET Results | ಸಿಇಟಿ ಫಲಿತಾಂಶ: ಐದೂ ವಿಭಾಗಗಳಲ್ಲಿ ಮೈಸೂರಿನ ಮೇಘನ್ ಪ್ರಥಮ

Last Updated 20 ಸೆಪ್ಟೆಂಬರ್ 2021, 18:09 IST
ಅಕ್ಷರ ಗಾತ್ರ

ಬೆಂಗಳೂರು:ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಆಗಸ್ಟ್‌ 28, 29ರಂದು ನಡೆದ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಮೈಸೂರಿನ ಪ್ರಮಥಿ ಹಿಲ್ ವ್ಯೂ ಅಕಾಡೆಮಿಯ ವಿದ್ಯಾರ್ಥಿ ಎಚ್‌.ಕೆ. ಮೇಘನ್ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಐದೂ ವಿಭಾಗಗಳಲ್ಲೂ ಮೊದಲ ರ‍್ಯಾಂಕ್‌ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ.

ಈ ಲಿಂಕ್ (https://cetonline.karnataka.gov.in/kea/) ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ.

ಎಂಜಿನಿಯರಿಂಗ್, ಪಶುವೈದ್ಯ, ಬಿಎಸ್ಸಿ (ಕೃಷಿ), ಬಿ- ಫಾರ್ಮಾ, ಡಿ- ಪಾರ್ಮಾ, ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಕೋರ್ಸ್‌ಗಳ ಪ್ರವೇಶಕ್ಕಾಗಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರಕಟಿಸಿದರು.

ಮೇಘನ್ ಎಚ್‌.ಕೆ.
ಮೇಘನ್ ಎಚ್‌.ಕೆ.

ಸುದ್ದಿಗೋಷ್ಠಿಯಲ್ಲಿ ಸಿಇಟಿ ಫಲಿತಾಂಶದ ಮಾಹಿತಿ ನೀಡಿದ ಸಚಿವರು, ‘ರಾಜ್ಯದ 530 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಒಟ್ಟು 1,93,447 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 95,462 ವಿದ್ಯಾರ್ಥಿಗಳು ಹಾಗೂ 97,985 ವಿದ್ಯಾರ್ಥಿನಿಯರಿದ್ದಾರೆ’ ಎಂದರು.

‘ಎಲ್ಲ ವಿಭಾಗಗಳಲ್ಲಿ ಒಬ್ಬನೇ ವಿದ್ಯಾರ್ಥಿ ಪ್ರಥಮ ಸ್ಥಾನ ಗಳಿಸಿರುವುದು ಹೊಸ ದಾಖಲೆಯಾಗಿದೆ’ ಎಂದರು.

ವಿಭಾಗವಾರು ಅರ್ಹತೆ ಪಡೆದವರು:

ಎಂಜಿನಿಯರಿಂಗ್ ವಿಭಾಗದಲ್ಲಿ 1,83,231, ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಕೋರ್ಸು ವಿಭಾಗದಲ್ಲಿ 1,55,910, ಪಶುವೈದ್ಯಕೀಯ (ವೆಟರ್ನರಿ) ವಿಭಾಗದಲ್ಲಿ 1,52,518, ಇನ್ನು ಬಿ-ಫಾರ್ಮಾ ಕೋರ್ಸಿನಲ್ಲಿ 1,86,638 ಹಾಗೂ ಡಿ-ಪಾರ್ಮಾ ಕೋರ್ಸುಗಳಲ್ಲಿ 1,86,638 ಅಭ್ಯರ್ಥಿಗಳು ರ್‍ಯಾಂಕ್ ಪಡೆದು ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

31,460 ಅಭ್ಯರ್ಥಿಗಳು ಪಿಸಿಎಂ, 3,836 ಅಭ್ಯರ್ಥಿಗಳು ಪಿಸಿಬಿಯಲ್ಲಿ ಹಾಗೂ 1,58,151 ಅಭ್ಯರ್ಥಿಗಳು ಪಿಸಿಎಂ-ಪಿಸಿಬಿಯಲ್ಲಿ ಪರೀಕ್ಷೆ ಬರೆದಿದ್ದರು.

55ಕ್ಕೂ ಹೆಚ್ಚು ಅಂಕ ಗಳಿಸಿದವರು:

ಭೌತವಿಜ್ಞಾನ ವಿಷಯದಲ್ಲಿ ಯಾವ ಅಭ್ಯರ್ಥಿಯೂ 55ಕ್ಕೂ ಹೆಚ್ಚಿನ ಅಂಕ ಪಡೆದಿಲ್ಲ. ಆದರೆ ರಸಾಯನ ವಿಜ್ಞಾನದಲ್ಲಿ 3, ಗಣಿತದಲ್ಲಿ 6 ಹಾಗೂ ಜೀವವಿಜ್ಞಾನ ವಿಷಯದಲ್ಲಿ 50 ವಿದ್ಯಾರ್ಥಿಗಳು 60 ಅಂಕ ಗಳಿಸಿದ್ದಾರೆ.

ಅಭ್ಯರ್ಥಿಗಳಿಗೆ ಸೌಲಭ್ಯ ಕೇಂದ್ರ:

ಮೂಲ ದಾಖಲಾತಿಗಳ ಪರಿಶೀಲನೆಗಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ʼಸೌಲಭ್ಯ ಕೇಂದ್ರʼಗಳನ್ನು ತೆರೆಯಲಾಗುವುದು ಎಂದ ಸಚಿವರು, ಇದೇ ಸೆ. 30ರಿಂದ ದಾಖಲಾತಿ ಪರಿಶೀಲನೆ ಆರಂಭಿಸಲಾಗುವುದು.

ಅಭ್ಯರ್ಥಿಗಳು ಹತ್ತಿರದ ಸೌಲಭ್ಯ ಕೇಂದ್ರಗಳಿಗೆ ಪರಿಶೀಲನೆಗೆ ಎಲ್ಲ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಅಗತ್ಯವಿರುವ ಎಲ್ಲ ಮೂಲ ದಾಖಲಾತಿಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಪ್ರಾಧಿಕಾರದ ವೆಬ್ʼಸೈಟಿನಲ್ಲಿ ಮೂಲ ದಾಖಲಾತಿಗಳ ವಿವರ ನೀಡಲಾಗಿದೆ. ಈ ಸೌಲಭ್ಯ ಕೇಂದ್ರಗಳಲ್ಲಿ ಆನ್‌ಲೈನ್‌ ಪರಿಶೀಲನೆ ಸಾಫ್ಟ್‌ವೇರ್‌ ಮೂಲಕ ದಾಖಲಾತಿಗಳನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ರ‍್ಯಾಂಕ್‌ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು ಕೆಇಎ ಕಚೇರಿಗೆ ಇ-ಮೇಲ್ keauthority-ka@nic.in ಮೂಲಕ ಅಥವಾ ಖುದ್ದಾಗಿ ಸಲ್ಲಿಸಿ ತಮ್ಮ ರ‍್ಯಾಂಕ್ʼಗಳನ್ನು ಪಡೆಯಬಹುದು. ರ‍್ಯಾಂಕ್‌ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ. ದಾಖಲಾತಿ ಪರಿಶೀಲನೆಯ ನಂತರ ಅರ್ಹತೆಯನ್ನು ಪರಿಗಣಿಸಲಾಗುವುದು.

ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್‌) ಫಲಿತಾಂಶ ಬಂದ ನಂತರ ಅದರ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮತು ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿಯೋಪಥಿ ಕೋರ್ಸುಗಳ ಪ್ರವೇಶಕ್ಕೆ ಪರಿಗಣಿಸಲಾಗುವುದು ಹಾಗೆಯೇ ಎನ್‌ಎಟಿಎ-2021 ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕೆ ರ‍್ಯಾಂಕ್‌ ಅʼನ್ನು ನಂತರ ಪ್ರಕಟಿಸಲಾಗುವುದು.

ಯಾವುದಾದರೂ ಅರ್ಹ ಅಭ್ಯರ್ಥಿಗೆ ರ‍್ಯಾಂಕ್‌ ನೀಡದೇ ಇದ್ದ ಪಕ್ಷದಲ್ಲಿ ಅಭ್ಯರ್ಥಿಯು ತನ್ನ ಎರಡನೇ ವರ್ಷದ ಪಿಯುಸಿ ಫೋಟೋ ಪ್ರತಿಯನ್ನು ಪ್ರಾಧಿಕಾರದ ಇ-ಮೇಲ್ ವಿಳಾಸಕ್ಕೆ ಕಳುಹಿಸಿ ರಾಂಕ್ ಪಡೆಯಬಹುದು ಎಂದು ಸಚಿವರು ವಿವರಿಸಿದರು.

6 ಅಂಕ ಕೃಪಾಂಕ:

ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಗಣಿತ ಮತ್ತು ಭೌತವಿಜ್ಞಾನ ವಿಷಯದಲ್ಲಿ ತಲಾ 3 ಅಂಕಗಳನ್ನು ಕೃಪಾಂಕ ನೀಡಲಾಗಿದೆ. ಒಟ್ಟು 6 ಅಂಕಗಳು ಅಭ್ಯರ್ಥಿಗಳಿಗೆ ಸಿಕ್ಕಿವೆ. ಇದೇ ವೇಳೆ, ಅಂಕಪಟ್ಟಿ ಕೊಡದೇ ಇರುವ 6,000 ಅಭ್ಯರ್ಥಿಗಳು ಸೇರಿ ಒಟ್ಟು 7,000 ವಿದ್ಯಾರ್ಥಿಗಳಿಗೆ ರ‍್ಯಾಂಕ್‌ ತಡೆ ಹಿಡಿಯಲಾಗಿದೆ ಎಂದು ಸಚಿವರು ತಿಳಿಸಿದರು.

***
ಯೋಜನಾಬದ್ಧವಾಗಿ ಓದಿದರೆ ಖಂಡಿತ ಫಲ ಸಿಗುತ್ತದೆ. ನಮಗೆ ನಾವೇ ಸ್ಪರ್ಧಿಗಳೆಂದುಕೊಂಡರೆ ಯಶಸ್ಸು ಸುಲಭ. ವೈದ್ಯನಾಗುವ ಹಂಬಲವಿದೆ. ನೀಟ್‌ನಲ್ಲಿಯೂ ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದೇನೆ.
-ಎಚ್‌.ಕೆ.ಮೇಘನ್, ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು

ಆನ್‌ಲೈನ್‌ನಲ್ಲಿ ಫಲಿತಾಂಶ:

ಸಿಇಟಿ ಫಲಿತಾಂಶವು ಈಗ http://kea.kar.nic.in ಮತ್ತು http://karresults.nic.in ವೆಬ್‌ʼಗಳಲ್ಲಿ ಲಭ್ಯವಿದೆ. ಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳು

ಎಂಜಿನಿಯರಿಂಗ್:

1. ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು

2. ಪ್ರೇಮಂಕೂರ್ ಚಕ್ರಬರ್ತಿ: ನ್ಯಾಷನಲ್ ಪಬ್ಲಿಕ್ ಸ್ಕೂಲ್, ಯಲಹಂಕ, ಬೆಂಗಳೂರು

3. ಬಿಎಸ್ ಅನಿರುದ್ಧ್: ಆಕ್ಸ್ʼಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು

4. ನಿರಂಜನ್ ರೆಡ್ಡಿ ಬಿಎಸ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ವೀರಣ್ಣಪಾಳ್ಯ, ಬೆಂಗಳೂರು

5. ಆದಿತ್ಯ ಸಿಆರ್: ನಾರಾಯಣ ಇ-ಟೆಕ್ನೋ ಸ್ಕೂಲ್, ವಿದ್ಯಾರಣ್ಯಪುರ, ಬೆಂಗಳೂರು

6. ಕಾರ್ತೀಕ್ ಅಗರವಾಲ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರ, ಬೆಂಗಳೂರು

7. ವೀರೇಶ್ ಬಿ.ಪಾಟೀಲ್: ಆಕ್ಸ್ʼಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು

8. ಅಂಕಿತಾ ಹರ್ಷಾ ಮೂರ್ತಿ: ದಿ ಬ್ರಿಗೇಡ್ ಸ್ಕೂಲ್, ಜೆಪಿ ನಗರ, ಬೆಂಗಳೂರು

9. ಆದಿತ್ಯ ಪ್ರಭಾಷ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರಂ, ಬೆಂಗಳೂರು

10. ವೀನೀತ್ ಭಟ್: ಈಕ್ಯಾ ಸ್ಕೂಲ್, ಐಟಿಪಿಎಲ್, ಬೆಂಗಳೂರು

ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ:

1. ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು

2. ವರುಣ್ ಆದಿತ್ಯ: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತ್ʼಹಳ್ಳಿ, ಬೆಂಗಳೂರು

3. ರೀಥಮ್ ಬಿ.: ಎಕ್ಸ್‌,ಪರ್ಟ್ ಪಿಯು ಕಾಲೇಜು, ಮಂಗಳೂರು

5. ಮೊಹಮ್ಮದ್ ಕೈಫ್ ಕೆ. ಮುಲ್ಲಾ: ಆರ್.ಎಲ್ ಪಿಯು ವಿಜ್ಞಾನ ಕಾಲೇಜು, ಬೆಳಗಾವಿ

6. ಹಯವದನ ಸುಬ್ರಹ್ಮಣ್ಯ: ವಿದ್ಯಾಕಿರಣ ಪಿಯು ಕಾಲೇಜು, ಬಳ್ಳಾರಿ

7. ನಂದನಾ ಎನ್. ಹೆಗಡೆ: ಬೇಸ್ ಪಿಯು ಕಾಲೇಜು, ಬೆಂಗಳೂರು

8. ಸಾತ್ವಿಕ್ ಜಿ.ಭಟ್: ಎಕ್ಸ್ʼಲೆಂಟ್ ವಿಜ್ಞಾನ-ವಾಣಿಜ್ಯ ಕಾಲೇಜು, ಮೂಡಬಿದರೆ

9.ನಿಶಾತ್ ಫಾತಿಮಾ: ಶಾಹಿನ್ ಇಂಡಿಯಾ ಪಿಯು ಕಾಲೇಜು, ಬೀದರ್

10.ಜಿ.ಶ್ರೀಸಂಜಿತ್: ವೇದಾಂತ ಕಾಲೇಜು, ಶಾರದಾ ನಗರ, ಬೆಂಗಳೂರು

ಬಿಎಸ್ಸಿ ಕೃಷಿ:‌

1. ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು

2. ರೀಥಮ್ ಬಿ.: ಎಕ್ಸ್‌ʼಪರ್ಟ್‌ ಪಿಯು ಕಾಲೇಜು, ಮಂಗಳೂರು

3. ಆದಿತ್ಯ ಪ್ರಭಾಷ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರಂ, ಬೆಂಗಳೂರು

4. ತೇಜಸ್: ಎಕ್ಸ್ʼಪರ್ಟ್ ಪಿಯು ಕಾಲೇಜು, ಮಂಗಳೂರು

5. ಸುಜನನ್ ಆರ್ ಶೆಟ್ಟಿ: ಆಳ್ವಾಸ್ ಪಿಯು ಕಾಲೇಜ್, ವಿದ್ಯಾಗಿರಿ, ಮೂಡಬಿದಿರೆ

6. ಅನಿರುದ್ಧ ರಾವ್: ಶ್ರೀ ಕುಮರನ್ ಚಿಲ್ಡ್ರನ್ಸ್ ಹೋಂ, ಉತ್ತರಹಳ್ಳಿ, ಬೆಂಗಳೂರು

7. ಸಂಜನಾ ಕಾಮತ್ ಪಂಚಮಾಲ್: ಎಕ್ಸ್‌ʼಪರ್ಟ್ ಪಿಯು ಕಾಲೇಜು, ಮಂಗಳೂರು

8. ವೀರೇಶ್ ಬಿ ಪಾಟೀಲ್: ಆಕ್ಸ್ʼಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು

9. ಪೂರ್ವಿ ಎಚ್.ಸಿ.: ರಾಯಲ್ ಕಾನ್ಕಾರ್ಡ್ ಇಂಟರ್ʼನ್ಯಾಷನಲ್ ಸ್ಕೂಲ್, ಕಲ್ಯಾಣನಗರ, ಬೆಂಗಳೂರು

10. ಕೆ.ವಿ.ಪ್ರಣವ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಜೆಪಿ ನಗರ, ಬೆಂಗಳೂರು

ಪಶುವೈದ್ಯ (ವೆಟರ್ನರಿ):

1. ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು

2. ವರುಣ್ ಆದಿತ್ಯ: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತ್ʼಹಳ್ಳಿ, ಬೆಂಗಳೂರು

3. ರೀಥಮ್ ಬಿ.: ಎಕ್ಸ್ಪರ್ಟ್ ಪಿಯು ಕಾಲೇಜು, ಮಂಗಳೂರು

5. ಮೊಹಮ್ಮದ್ ಕೈಫ್ ಕೆ. ಮುಲ್ಲಾ: ಆರ್.ಎಲ್ ಪಿಯು ವಿಜ್ಞಾನ ಕಾಲೇಜು, ಬೆಳಗಾವಿ

6. ಹಯವದನ ಸುಬ್ರಹ್ಮಣ್ಯ: ವಿದ್ಯಾಕಿರಣ ಪಿಯು ಕಾಲೇಜು, ಬಳ್ಳಾರಿ

7. ಸಾತ್ವಿಕ್ ಜಿ.ಭಟ್: ಎಕ್ಸ್ʼಲೆಂಟ್ ವಿಜ್ಞಾನ-ವಾಣಿಜ್ಯ ಕಾಲೇಜು, ಮೂಡಬಿದರೆ

8. ನಂದನಾ ಎನ್.ಹೆಗಡೆ: ಬೇಸ್ ಪಿಯು ಕಾಲೇಜು

9. ನಿಶಾತ್ ಫಾತಿಮಾ: ಶಾಹಿನ್ ಇಂಡಿಯಾ ಪಿಯು ಕಾಲೇಜು, ಬೀದರ್

10. ಜಿ.ಶ್ರೀಸಂಜಿತ್: ವೇದಾಂತ ಕಾಲೇಜು, ಶಾರದಾ ನಗರ, ಬೆಂಗಳೂರು

ಬಿ ಫಾರ್ಮಾ ಮತ್ತು ಡಿ ಫಾರ್ಮಾ:

1. ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು

2. ಪ್ರೇಮಂಕೂರ್ ಚಕ್ರಬರ್ತಿ: ನ್ಯಾಷನಲ್ ಪಬ್ಲಿಕ್ ಸ್ಕೂಲ್, ಯಲಹಂಕ, ಬೆಂಗಳೂರು

3. ಬಿ.ಎಸ್.ಅನಿರುದ್ಧ್: ಆಕ್ಸಿಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು

4. ನಿರಂಜನ ರೆಡ್ಡಿ ಬಿ.ಎಸ್.: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ವಿರಣ್ಣಪಾಳ್ಯ, ಬೆಂಗಳೂರು

5. ವರುಣ್ ಆದಿತ್ಯ: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತ್ʼಹಳ್ಳಿ, ಬೆಂಗಳೂರು

6. ಆದಿತ್ಯ ಸಿ.ಆರ್.: ನಾರಾಯಣ ಇ-ಟೆಕ್ನೋ ಸ್ಕೂಲ್, ವಿದ್ಯಾರಣ್ಯಪುರ, ಬೆಂಗಳೂರು

7. ಕಾರ್ತೀಕ್ ಅಗರವಾಲ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರಂ, ಬೆಂಗಳೂರು

8. ಮೊಹಮ್ಮದ್ ಕೈಫ್ ಕೆ. ಮುಲ್ಲಾ: ಆರ್ ಎಲ್ ಪಿಯು ವಿಜ್ಞಾನ ಕಾಲೇಜು, ಬೆಳಗಾವಿ

10. ರೀಥಮ್ ಬಿ.: ಎಕ್ಸ್ʼಪರ್ಟ್ ಪಿಯು ಕಾಲೇಜು, ಮಂಗಳೂರು

ಎಲ್ಲ ವಿಭಾಗಗಳಲ್ಲೂ ಅಗ್ರ 10 ಸ್ಥಾನ ಗಳಿಸಿದವರ ಪಟ್ಟಿ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT