<p><strong>ಭುವನೇಶ್ವರ:</strong> ಅನಾರೋಗ್ಯಪೀಡಿತ ಪತ್ನಿಯನ್ನುಹೆಗಲ ಮೇಲೆ ಹೊತ್ತುಕೊಂಡು 10 ಕಿ.ಮೀ. ದೂರ ನಡೆದು ದೇಶಾದ್ಯಂತ ಸುದ್ದಿಯಾಗಿದ್ದ ಒಡಿಶಾದ ದಾನ ಮಜ್ಹಿ ಅವರ ಪುತ್ರಿ ಚಾಂದಿನಿ ಮಜ್ಹಿ ಎಸ್ಎಸ್ಎಲ್ಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.</p>.<p>ಬುಡಕಟ್ಟು ಜನಾಂಗದ ದಾನ ಮಜ್ಹಿ, ಪತ್ನಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ನಿರಾಕರಿಸಿದಾಗ ತಾನೇ ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡು 10 ಕಿ.ಮೀ.ದೂರ ನಡೆದಿದ್ದರು. ಈ ಸುದ್ದಿ ದೇಶದ ಗಮನ ಸೆಳೆದಿತ್ತು. ಬಳಿಕ ದಾನ ಮಜ್ಹಿ ಅವರಮೂವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲು ಕಳಿಂಗ ಸಮಾಜ ವಿಜ್ಞಾನಗಳ ಸಂಸ್ಥೆ 'ಕೆಐಎಸ್ಎಸ್' ಮುಂದೆ ಬಂದಿತ್ತು.</p>.<p>ಮಜ್ಹಿ ಪುತ್ರಿಯರಾದ ಚಾಂದಿನಿ, ಸೋನಿ ಮತ್ತು ಪ್ರಮೀಳಾ ಅವರಿಗೆ ಕಳಿಂಗ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಲು ಪ್ರವೇಶ ಕಲ್ಪಿಸಲಾಗಿತ್ತು. ಇದೀಗ ಚಾಂದಿನಿ ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಕಳಿಂಗ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ದಾನ ಮಜ್ಹಿ ಅವರುಒಡಿಶಾ ರಾಜ್ಯದ ಕಾಳಹಂಡಿ ಜಿಲ್ಲೆಯ ಮಾಲೇಗಾರ್ ಗ್ರಾಮದಬುಡಕಟ್ಟು ಜನಾಂಗದವರು. ಆ ಘಟನೆಯ ಬಳಿಕ ಈ ಗ್ರಾಮದಲ್ಲಿ ಶಾಲೆಯನ್ನು ಆರಂಭಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ:</strong> ಅನಾರೋಗ್ಯಪೀಡಿತ ಪತ್ನಿಯನ್ನುಹೆಗಲ ಮೇಲೆ ಹೊತ್ತುಕೊಂಡು 10 ಕಿ.ಮೀ. ದೂರ ನಡೆದು ದೇಶಾದ್ಯಂತ ಸುದ್ದಿಯಾಗಿದ್ದ ಒಡಿಶಾದ ದಾನ ಮಜ್ಹಿ ಅವರ ಪುತ್ರಿ ಚಾಂದಿನಿ ಮಜ್ಹಿ ಎಸ್ಎಸ್ಎಲ್ಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.</p>.<p>ಬುಡಕಟ್ಟು ಜನಾಂಗದ ದಾನ ಮಜ್ಹಿ, ಪತ್ನಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ನಿರಾಕರಿಸಿದಾಗ ತಾನೇ ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡು 10 ಕಿ.ಮೀ.ದೂರ ನಡೆದಿದ್ದರು. ಈ ಸುದ್ದಿ ದೇಶದ ಗಮನ ಸೆಳೆದಿತ್ತು. ಬಳಿಕ ದಾನ ಮಜ್ಹಿ ಅವರಮೂವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲು ಕಳಿಂಗ ಸಮಾಜ ವಿಜ್ಞಾನಗಳ ಸಂಸ್ಥೆ 'ಕೆಐಎಸ್ಎಸ್' ಮುಂದೆ ಬಂದಿತ್ತು.</p>.<p>ಮಜ್ಹಿ ಪುತ್ರಿಯರಾದ ಚಾಂದಿನಿ, ಸೋನಿ ಮತ್ತು ಪ್ರಮೀಳಾ ಅವರಿಗೆ ಕಳಿಂಗ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಲು ಪ್ರವೇಶ ಕಲ್ಪಿಸಲಾಗಿತ್ತು. ಇದೀಗ ಚಾಂದಿನಿ ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಕಳಿಂಗ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ದಾನ ಮಜ್ಹಿ ಅವರುಒಡಿಶಾ ರಾಜ್ಯದ ಕಾಳಹಂಡಿ ಜಿಲ್ಲೆಯ ಮಾಲೇಗಾರ್ ಗ್ರಾಮದಬುಡಕಟ್ಟು ಜನಾಂಗದವರು. ಆ ಘಟನೆಯ ಬಳಿಕ ಈ ಗ್ರಾಮದಲ್ಲಿ ಶಾಲೆಯನ್ನು ಆರಂಭಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>