<p>ಉಜಿರೆ: ಇಲ್ಲಿನ ಎಸ್ಡಿಎಂ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ರಾಸಾಯನ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ನೆಫಿಸತ್ ಮತ್ತು ಶಶಿಪ್ರಭಾ ಅವರ ಸಂಶೋಧನೆಗೆ ಅಮೆರಿಕನ್ ಪೇಟೆಂಟ್ ಮನ್ನಣೆ ಲಭಿಸಿದೆ.</p>.<p>ಕಾಲೇಜಿನ ಪ್ರಯೋಗಾಲಯದಲ್ಲಿಯೇ ಸಂಶೋಧನೆ ಮಾಡಿರುವ ಅವರನ್ನು ವಿಭಾಗದ ಮುಖ್ಯಸ್ಥ, ಸ್ನಾತಕೋತ್ತರ ಕೇಂದ್ರದ ಡೀನ್ ಪಿ.ವಿಶ್ವನಾಥ್ ಗೌರವಿಸಿದ್ದಾರೆ.</p>.<p>ದೈಹಿಕ ನೋವು ನಿವಾರಕ ಔಷಧೀಯ ಪ್ರಯೋಗಗಳನ್ನು ವಿಸ್ತರಿಸಲು ಬೇಕಾದ ಪ್ರಾಯೋಗಿಕ ಮಾರ್ಗದರ್ಶಿ ಪರಿಕಲ್ಪನೆಯಾಗಿ ಈ ಸಂಶೋಧನೆಗೆ ವಿಶೇಷ ಮಹತ್ವವಿದೆ. ವೈದ್ಯಕೀಯರಂಗದ ಚಿಕಿತ್ಸೆಯ ವಿಧಾನಗಳನ್ನು ಮರು ರೂಪಿಸುವುದಕ್ಕೆ ಈ ಸಂಶೋಧನೆ ನೆರವಾಗಲಿದೆ ಎಂದು ನೆಫಿಸೆತ್ ಮತ್ತು ಶಶಿಪ್ರಭಾ ತಿಳಿಸಿದ್ದಾರೆ.</p>.<p>ಸೌದಿಅರೇಬಿಯಾದ ಕಿಂಗ್ಫೈಸಲ್ ವಿ.ವಿ.ಸಹಭಾಗಿತ್ವದೊಂದಿಗೆ ಕೈಗೊಂಡಿದ್ದ ಈ ಸಂಶೋಧನೆಗೆ ಲಭಿಸಿರುವ ಅಮೆರಿಕನ್ ಪೇಟೆಂಟ್ 20 ವರ್ಷಗಳ ಅವಧಿಗೆ ಚಾಲ್ತಿಯಲ್ಲಿದ್ದು, ಆವಿಷ್ಕಾರ, ಬಳಕೆ ಮತ್ತು ಮಾರಾಟದ ಹಕ್ಕುಸ್ವಾಮ್ಯ ಪ್ರಾಧ್ಯಾಪಕರಿಗೆ ಸೇರಿದೆ.</p>.<p><strong>ಉಪನ್ಯಾಸ </strong></p>.<p>ಉಜಿರೆ: ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ದಿ.ಬಿ.ಯಶೋವರ್ಮ ಅವರ ಸಂಸ್ಮರಣಾ ಉಪನ್ಯಾಸ ಮಾರ್ಚ್ 22ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಎಸ್ಡಿಎಂ ಪಾಲಿಟೆಕ್ನಿಕ್ನಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಚಂದ್ರನಾಥ್ ಜೈನ್, ಮಿಥುನ್ ಜೈನ್ ತಿಳಿಸಿದ್ದಾರೆ.</p>.<p>ಸೋನಿಯಾ ಯಶೋವರ್ಮ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಸಂತೋಷ ಅಧ್ಯಕ್ಷತೆ ವಹಿಸುವರು.<br> ಲೇಖಕ ಯೋಗೀಂದ್ರ ಮರವಂತೆ ಅವರು ‘ತಾಂತ್ರಿಕ ವಿಷಯಗಳ ವಿನಿಮಯ’ಕುರಿತು ವಿಶೇಷ ಉಪನ್ಯಾಸ ನೀಡುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಜಿರೆ: ಇಲ್ಲಿನ ಎಸ್ಡಿಎಂ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ರಾಸಾಯನ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ನೆಫಿಸತ್ ಮತ್ತು ಶಶಿಪ್ರಭಾ ಅವರ ಸಂಶೋಧನೆಗೆ ಅಮೆರಿಕನ್ ಪೇಟೆಂಟ್ ಮನ್ನಣೆ ಲಭಿಸಿದೆ.</p>.<p>ಕಾಲೇಜಿನ ಪ್ರಯೋಗಾಲಯದಲ್ಲಿಯೇ ಸಂಶೋಧನೆ ಮಾಡಿರುವ ಅವರನ್ನು ವಿಭಾಗದ ಮುಖ್ಯಸ್ಥ, ಸ್ನಾತಕೋತ್ತರ ಕೇಂದ್ರದ ಡೀನ್ ಪಿ.ವಿಶ್ವನಾಥ್ ಗೌರವಿಸಿದ್ದಾರೆ.</p>.<p>ದೈಹಿಕ ನೋವು ನಿವಾರಕ ಔಷಧೀಯ ಪ್ರಯೋಗಗಳನ್ನು ವಿಸ್ತರಿಸಲು ಬೇಕಾದ ಪ್ರಾಯೋಗಿಕ ಮಾರ್ಗದರ್ಶಿ ಪರಿಕಲ್ಪನೆಯಾಗಿ ಈ ಸಂಶೋಧನೆಗೆ ವಿಶೇಷ ಮಹತ್ವವಿದೆ. ವೈದ್ಯಕೀಯರಂಗದ ಚಿಕಿತ್ಸೆಯ ವಿಧಾನಗಳನ್ನು ಮರು ರೂಪಿಸುವುದಕ್ಕೆ ಈ ಸಂಶೋಧನೆ ನೆರವಾಗಲಿದೆ ಎಂದು ನೆಫಿಸೆತ್ ಮತ್ತು ಶಶಿಪ್ರಭಾ ತಿಳಿಸಿದ್ದಾರೆ.</p>.<p>ಸೌದಿಅರೇಬಿಯಾದ ಕಿಂಗ್ಫೈಸಲ್ ವಿ.ವಿ.ಸಹಭಾಗಿತ್ವದೊಂದಿಗೆ ಕೈಗೊಂಡಿದ್ದ ಈ ಸಂಶೋಧನೆಗೆ ಲಭಿಸಿರುವ ಅಮೆರಿಕನ್ ಪೇಟೆಂಟ್ 20 ವರ್ಷಗಳ ಅವಧಿಗೆ ಚಾಲ್ತಿಯಲ್ಲಿದ್ದು, ಆವಿಷ್ಕಾರ, ಬಳಕೆ ಮತ್ತು ಮಾರಾಟದ ಹಕ್ಕುಸ್ವಾಮ್ಯ ಪ್ರಾಧ್ಯಾಪಕರಿಗೆ ಸೇರಿದೆ.</p>.<p><strong>ಉಪನ್ಯಾಸ </strong></p>.<p>ಉಜಿರೆ: ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ದಿ.ಬಿ.ಯಶೋವರ್ಮ ಅವರ ಸಂಸ್ಮರಣಾ ಉಪನ್ಯಾಸ ಮಾರ್ಚ್ 22ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಎಸ್ಡಿಎಂ ಪಾಲಿಟೆಕ್ನಿಕ್ನಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಚಂದ್ರನಾಥ್ ಜೈನ್, ಮಿಥುನ್ ಜೈನ್ ತಿಳಿಸಿದ್ದಾರೆ.</p>.<p>ಸೋನಿಯಾ ಯಶೋವರ್ಮ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಸಂತೋಷ ಅಧ್ಯಕ್ಷತೆ ವಹಿಸುವರು.<br> ಲೇಖಕ ಯೋಗೀಂದ್ರ ಮರವಂತೆ ಅವರು ‘ತಾಂತ್ರಿಕ ವಿಷಯಗಳ ವಿನಿಮಯ’ಕುರಿತು ವಿಶೇಷ ಉಪನ್ಯಾಸ ನೀಡುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>